6:29 AM Monday16 - February 2026
ಬ್ರೇಕಿಂಗ್ ನ್ಯೂಸ್
ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ…

ಇತ್ತೀಚಿನ ಸುದ್ದಿ

ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು… ಹೆಚ್ಚಿಸುವುದು ನಿನ್ನ  ಜ್ಞಾನವನು ಮಸ್ತಕದೊಳು

23/04/2022, 09:40

ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು…

ಹೆಚ್ಚಿಸುವುದು ನಿನ್ನ  ಜ್ಞಾನವನು ಮಸ್ತಕದೊಳು..

ತಲೆ ಎತ್ತಿ ನಿಲ್ಲುವಂತೆ ಮಾಲ್ಪುದು ನಾಲ್ಕು ಜನರೊಳು…

ಕರಮುಗಿದು ನಮಸ್ಕರಿಸುವರು ನಿನಗೆ ಈ ಜಗದೊಳು….

“ದೇಶ ಸುತ್ತಿ ನೋಡು ಕೋಶ ಓದಿ ನೋಡು ” ಎಂಬ ಗಾದೆ ಮಾತಿನಂತೆ ಪುಸ್ತಕಗಳು ನಮ್ಮ ಜ್ಞಾನವನ್ನು ಹೆಚ್ಚಿಸಬಲ್ಲ ಆಗರಗಳು.  ಪುಸ್ತಕಗಳು ನಮ್ಮ ಜೀವನದಲ್ಲಿ ಸಂಗಾತಿಯಾಗಿ, ಗುರುವಾಗಿ, ಗೆಳೆಯರಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತದೆ. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನ ಪರಂಪರೆಯನ್ನು ಮುಂದುವರಿಸಿಕೊಂಡು ಬರುವುದರಲ್ಲಿ ಪುಸ್ತಕಗಳ ಪಾತ್ರ ಹಿರಿದಾಗಿದೆ.

ಈ ಅಂಶವನ್ನು ಮನಗಂಡ ಯುನೆಸ್ಕೋ 1995ರಲ್ಲಿ” ಏಪ್ರಿಲ್ 23″ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಕಾಪಿರೈಟ್ ಕಾಯ್ದೆ (ಗ್ರಂಥಸಾಮ್ಯ)ಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಶೇಷ್ಠ ನಾಟಕಕಾರ, ದಾರ್ಶನಿಕ ವಿಲಿಯಂ ಷೇಕ್ಸ್ಪಿಯರ್  ಹುಟ್ಟಿದ ಮತ್ತು ಮರಣದ ದಿನವೂ ಏಪ್ರಿಲ್ 23 ಆಗಿದೆ. ಆದುದರಿಂದ ವಿಶ್ವ ಪುಸ್ತಕ ದಿನಾಚರಣೆಗೆ ಹೆಚ್ಚಿನ ಮಹತ್ವವನ್ನೂ ನೀಡಲಾಗಿದೆ.

ಪುಸ್ತಕಗಳು ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಆದರೆ ಪುಸ್ತಕದಿಂದ ನಾವು ಬೆಟ್ಟದಷ್ಟು ಲಾಭವನ್ನು ಪಡೆಯಬಹುದು.

ಪುಸ್ತಕಗಳು ನಮಗೆ ಬದುಕುವುದನ್ನು ಕಲಿಸುವುದರ ಜೊತೆಗೆ ಅಲೋಚನಾ ಶಕ್ತಿಯನ್ನು, ಜೀವನ ಮೌಲ್ಯಗಳನ್ನು, ಆದರ್ಶಗಳನ್ನು , ಗೌರವವನ್ನು ದೊರಕಿಸುತ್ತದೆ . ಸೋಲಿನ ಹತಾಶೆ ಯಲ್ಲಿರುವ ಮನುಷ್ಯನಿಗೆ  ಸ್ಪೂರ್ತಿಯನ್ನು , ಆತ್ಮ ಧೈರ್ಯವನ್ನು  ತುಂಬಿಸುತ್ತದೆ. ಪುಸ್ತಕಗಳು ನಮ್ಮ ಬದುಕನ್ನು ಬಂಗಾರವನ್ನಾಗಿಸುತ್ತದೆ.

ತಾಳೆಗರಿಯಲ್ಲಿ ಬರೆಯಲು ಪ್ರಾರಂಭಿಸಿದ ಕಾಲದಿಂದ ಹಿಡಿದು ಈಗಿನ  ಇ ಪುಸ್ತಕಗಳ ವರೆಗೆ ಪುಸ್ತಕದ ರೂಪ ಬದಲಾಗಿರಬಹುದು ಆದರೆ ಮಹತ್ವ ಮತ್ತು ಸಾರ ಬದಲಾಗಿಲ್ಲ.. 


ಇಂದಿನ ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆಲ್ಲ ಯುವಜನತೆ ಮೊಬೈಲ್ , ಕಂಪ್ಯೂಟರ್ ನಂತಹ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಒಗ್ಗಿಕೊಂಡ ಪರಿಣಾಮವಾಗಿ ಪುಸ್ತಕ ಓದುವ ಹವ್ಯಾಸ ಬಹಳಷ್ಟು ಮಂದಿಯಲ್ಲಿ ಕಡಿಮೆಯಾಗಿದೆ.

ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ಅಭ್ಯಾಸ ಮಾಡಬೇಕು.. “ಒಳ್ಳೆಯ ಪುಸ್ತಕಗಳು ನಮ್ಮ ಜ್ಞಾನವನ್ನು ತಣಿಸುವ ಚಿಲುಮೆಗಳು”.

“ಪುಸ್ತಕಗಳನ್ನು ತಲೆತಗ್ಗಿಸಿ ಓದಿದರೆ ಅವುಗಳು ಜೀವನದಲ್ಲಿ ನಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ.” . ಎಂಬ  ಅರ್ಥಪೂರ್ಣವಾದ  ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಪ್ರತಿಯೊಬ್ಬರು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳೋಣ… 

ಪುಸ್ತಕಗಳು ಎಲ್ಲರ ಮನಸ್ಸನ್ನು ಬೆಳಗಲಿ.. ಪುಸ್ತಕಗಳ ಮೂಲಕ ಜ್ಞಾನವೆಂಬ ಬೆಳಕು ಜಗದೆಲ್ಲೆಡೆ ಪಸರಿಸಲಿ .

“ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು” 

✍️

ಇತ್ತೀಚಿನ ಸುದ್ದಿ

ಜಾಹೀರಾತು