11:37 PM Sunday1 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಹಾಕಿ ಗ್ರೌಂಡ್ ಗೆ ಕಾಂಕ್ರೀಟ್!: ಶಾಸಕರು, ಸಂಸದರು ಫ್ಲೈಟ್ ನಲ್ಲಿ ಹೋಗ್ತಾರೆ; ಮತ್ಯಾಕೆ ಬೇಕು ರೀ.. ಸರ್ವಿಸ್ ಬಸ್ ಸ್ಟಾಂಡ್?!!

11/04/2022, 13:09

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

‘ಛೀ…. ಏನ್ರೀ ಇದು ಬಸ್ ಸ್ಟಾಂಡ್?  ಗಬ್ಬು ವಾಸ್ನೆ…

ನಿಮ್ಮ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ? ಅಲ್ಲಾ ರೀ…ಇಬ್ರು ಮುಖ್ಯಮಂತ್ರಿಗಳನ್ನು ಕೊಟ್ರೂ ಒಂದು ಬಸ್ ಸ್ಟಾಂಡ್ ಕಟ್ಟಿಸೋಕೆ ಆಗಿಲ್ವಾ?’

ಇದು ನೆರೆಯ ಹಾಸನ ಜಿಲ್ಲೆಯ ಶಂಕರಲಿಂಗೇಗೌಡ ಅವರ ನುಡಿ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಹಾಕಿ ಗ್ರೌಂಡ್ ನಲ್ಲಿ 3 ದಶಕಗಳಿಂದ ತಾತ್ಕಾಲಿಕ ನೆಲೆಯಲ್ಲಿ ಬೀಡು ಬಿಟ್ಟಿರುವ ಖಾಸಗಿ ಸರ್ವಿಸ್ ಬಸ್ ನಿಲ್ದಾಣದ ಬಗ್ಗೆ ಶಂಕರ ಲಿಂಗೇಗೌಡರು ಆಕ್ರೋಶದಿಂದ ಹೇಳಿದ ಮಾತು.

‘ನಮ್ಮೂರಿನ(ಹಾಸನ) ಬಸ್ ಸ್ಟಾಂಡ್ ನೋಡ್ರಿ… ಮಾಲ್ ..ಮಾಲ್ ತರಹ ಇದೆ. ಅಲ್ಲಾ ರೀ..


ವೀರಪ್ಪ ಮೊಯ್ಲಿ, ಸದಾನಂದ ಗೌಡ್ರು ಮುಖ್ಯಮಂತ್ರಿ ಆದಾಗಲೂ ಇದನ್ನು ಮಾಡಿಸೋಕೆ ಆಗಿಲ್ವಾ ರೀ. ಏನ್ ಶಾಸಕರೀ ನಿಮ್ ಕಡೆಯವರು?’

ಕೆಲಸದ ನಿಮಿತ್ತ, ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಅನ್ಯ ಜಿಲ್ಲೆಯ ನಾಗರಿಕರು ಸ್ಟೇಟ್ ಬ್ಯಾಂಕ್ ಬಳಿಯ ಬಸ್ ಸ್ಟಾಂಡ್ ಕಂಡ ಕೂಡಲೇ ಬೆಚ್ಚಿ ಬೀಳುತ್ತಾರೆ. ತನ್ನಿಂದ ತಾನಾಗಿ ಅವರ ಬಾಯಿಯಿಂದ ಆಕ್ಷೇಪದ ಮಾತು ಹೊರಬೀಳುತ್ತದೆ.


ಅದೊಂದು ಚಕ್ರವ್ಯೂಹ ಮಾದರಿಯ ಬಸ್ ನಿಲ್ದಾಣ. ಒಳ ಹೊಕ್ಕವ ಹೊರಗೆ ಬರುವುದು ಸ್ವಲ್ಪ ಕಷ್ಟ. ಒಂದು ಕಡೆಯಲ್ಲಿ ಉದ್ದಕ್ಕೆ ಇರುವ ಮೀನು ಮಾರುಕಟ್ಟೆ, ಇನ್ನೊಂದು ಕಡೆ ಕಾರ್ಪೋರೇಷನ್ ಬ್ಯಾಂಕ್ ಪ್ರಾಯೋಜಿತ ಪಾರ್ಕ್ ನ ಎತ್ತರದ ಗೋಡೆ, ಮತ್ತೊಂದು ಕಡೆ ಗೋಡೆ ಕಟ್ಟಿರುವ ಹಾಗೆ ಗೂಡಂಗಡಿ, ಆಮ್ಲೆಟ್ ಸ್ಟಾಲ್, ತಳ್ಳುಗಾಡಿ, ಫ್ರೂಟ್ಸ್ ಗಾಡಿ, ತಂಪು ಪಾನೀಯ ಮುಂತಾದುವುಗಳು. ಮಗದೊಂದು ಕಡೆಯಲ್ಲಿ ಮೆಸ್ಕಾಂ ಕಚೇರಿ. ಇವೆಲ್ಲದರ ನಡುವೆ ಎರಡು ಬದಿಗಳಲ್ಲಿ ಬಸ್ ನುಸುಳಿಕೊಂಡು ಒಳಬಂದು ಹೊರಗೆ ಹೋಗುವಷ್ಟು ಇಕ್ಕಟ್ಟಾದ ಮಾರ್ಗ. ಈ ವ್ಯವಸ್ಥೆ ಕಳೆದ ಮೂರು ದಶಕಗಳಿಂದಲೂ ಹಾಗೆಯೇ ಇದೆ. ಆದರೆ ರಾಜ್ಯದಲ್ಲಿ ಈ ನಡುವೆ ಹಲವು ಸರಕಾರಗಳು ಅಸ್ತಿತ್ವಕ್ಕೆ ಬಂದು ಹೋಗಿವೆ. ದಕ್ಷಿಣ ಕನ್ನಡ ಜಿಲ್ಲೆ ಹಲವು ಮಂದಿ ಉಸ್ತುವಾರಿ ಸಚಿವರುಗಳನ್ನು ಕಂಡಿದೆ. ಹಲವು ಮಂದಿ ಶಾಸಕರಾಗಿದ್ದಾರೆ. ಹಾಗೆ ಸಂಸದರಾಗಿದ್ದಾರೆ. ಉಪಯೋಗ ಮಾತ್ರ ಶೂನ್ಯ. ಬಿಜೆಪಿ ಸರಕಾರದಲ್ಲಿ


ಜೆ. ಕೃಷ್ಣ ಪಾಲೆಮಾರ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಪಂಪ್ ವೆಲ್ ಬಳಿಯ ಜಾಗವನ್ನು ನೂತನ ಸರ್ವಿಸ್ ಬಸ್ ನಿಲ್ದಾಣಕ್ಕೆ ನಿಗದಿಪಡಿಸಲಾಯಿತು. ಆದರೆ ಅವರು ಅಧಿಕಾರ ಕಳೆದುಕೊಳ್ಳುವವರೆಗೆ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ನಂತರ ಕಾಂಗ್ರೆಸ್ ಆಡಳಿತಕ್ಕೆ ಬಂತು. ಬಿ. ರಮಾನಾಥ ರೈ ಅವರು ಉಸ್ತುವಾರಿ ಸಚಿವರಾದರು. ಆದರೆ ಅವರ ಅಧಿಕಾರದ ಅವಧಿಯಲ್ಲೂ ನೂತನ ಸರ್ವಿಸ್ ಬಸ್ ನಿಲ್ದಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಗಲಿಲ್ಲ. ಮತ್ತೆ ಬಿಜೆಪಿ ಗದ್ದುಗೆ ಏರಿತು. ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಾದರು. ಇವರಿಗೂ ಬಸ್ ನಿಲ್ದಾಣದ ಕುರಿತಂತೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಈಗ ಸುನಿಲ್ ಕುಮಾರ್ ಅವರು ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿದ್ದಾರೆ. ಎಲ್ಲರೂ ಮತ್ತೆ ಆಸೆಗಣ್ಣಿನಿಂದ ಅವರತ್ತ ನೋಡುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಮಂಗಳೂರಿಗೊಂದು ಸುಸಜ್ಜಿತ ಬಸ್ ನಿಲ್ದಾಣ ಬೇಕೆಂಬ ಕನಸಿಲ್ಲ. ಯಾಕೆಂದರೆ ಇವರು ಯಾರೂ ವೈಕುಂಠ ಬಾಳಿಗ, ಡಾ. ವಿ.ಎಸ್. ಆಚಾರ್ಯ, ಬ್ಲೇಸಿಯಸ್ ಎಂಡಿ ಸೋಜ, ಬಾಕಿಲ ಹುಕ್ರಪ್ಪ ಅವರ ತರಹ ಬಸ್ ನಲ್ಲಿ ಓಡಾಡುವುದಿಲ್ಲ. ಚಾರ್ಟರ್ ಫ್ಲೈಟ್ ನಲ್ಲಿ ಓಡಾಡುವಷ್ಟು ಸಮರ್ಥರಿದ್ದಾರೆ. ಹಾಗಿರುವಾಗ ಯಾಕೆ ಬೇಕ್ರಿ ಬಸ್ ಸ್ಟಾಂಡ್. ಓನ್ಲಿ ಏರ್ ಪೋರ್ಟ್!

ಇತ್ತೀಚಿನ ಸುದ್ದಿ

ಜಾಹೀರಾತು