3:51 AM Tuesday21 - July 2026
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ…

ಇತ್ತೀಚಿನ ಸುದ್ದಿ

ಆಗಸದಲ್ಲಿ ಚಂದ್ರನ ಹುಡುಕುತ್ತಿದ್ದವರಿಗೆ ಕಾಣಿಸಿದ್ದು ಬೆಂಕಿಯ ಜ್ವಾಲೆ!:  ಏನಿದು ಜಲ್ವಿಸುತ್ತಾ ಹಾದು ಹೋಗಿದ್ದು?.!!

03/04/2022, 12:17

ಮಂಗಳೂರು(reporterkarnataka.com) ದೇಶದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇದರ ನಡುವೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ಬೆಂಕಿಯ ಜ್ವಾಲೆಯೊಂದು ಸುಮಾರು ಹೊತ್ತು ಆಕಾಶದಲ್ಲಿ ಸಾಗಿದೆ.ಇದನ್ನ ಕಂಡವರು ಧೂಮಕೇತು ಇರಬೇಕು, ಹಬ್ಬದ ದಿನ ಅನಿಷ್ಟ ಕಂಡಂತಾಯ್ತು ಎಂಬಂತೆ ಮಾತನಾಡಿಕೊಂಡಿದ್ದಾರೆ.

ಬಳಿಕ ಅದು ಉಲ್ಕಾಪಾತ ಎಂದು ಹೇಳುವಂತಹ ಮಾತುಗಳು ಆರಂಭವಾಗಿದೆ. ಆದರೆ ಉಲ್ಕಾಪಾತದ ಬಣ್ಣ ಈ ರೀತಿಯಲ್ಲಿ ಇರುವುದಿಲ್ಲ ಎಂಬ ವಾದಗಳಿವೆ.

ಮಹಾರಾಷ್ಟ್ರ ಮಧ್ಯಪ್ರದೇಶದ ಭಾಗಗಳಲ್ಲಿ ಈ ಬೆಂಕಿ ವಿಸ್ಮಯ ಕಂಡು ಬಂದಿದೆ. ವಿಶೇಷ ಅಂದರೆ ತೀರಾ ಹತ್ತಿರದಲ್ಲಿ ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಇನ್ನೂ ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಉಲ್ಕಾಪಾತವಾಗಿರದೇ ಚೈನಾ 2021 ರಲ್ಲಿ ಆಕಾಶಕ್ಕೆ ಹಾರಿಬಿಟ್ಟ ರಾಕೆಟ್​ನ ಅವಶೇಷಗಳು ಆಗಿರಬಹುದು ಎನ್ನಲಾಗುತ್ತಿದೆ.

ಮತ್ತೆ ಕೆಲವರು ಯಾವುದೋ ರಾಷ್ಟ್ರದ ಸ್ಯಾಟಲೈಟ್ ಭೂಕ್ಷಕ್ಷೆಗೆ ಬಂದು, ಉರುಳುತ್ತಿರುವ ದೃಶ್ಯ ಇದಾಗಿರಬಹುದು ಎನ್ನಲಾಗುತ್ತಿದೆ.

ಇನ್ನೂ ಇದಕ್ಕೆ ಸಂಬಂಧಿಸಿದಂತೆ ಇದು ರಾಕೆಟ್ ಒಂದರ ಅವಶೇಷವಾಗಿದ್ದು, ಇದು ನೆಲಕ್ಕೆ ಬಿದ್ದು ಉಳಿದ ಪಾರ್ಟ್​ಗಳನ್ನ ಸ್ಥಳೀಯವಾಗಿ ನೋಡಿದವರು ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು