11:14 PM Tuesday16 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ಅಂತರಗಂಗೆ ಆರಾಧ್ಯ ದೈವ ದುರ್ಗಾದೇವಿ ಜಾತ್ರಾ ಮಹೋತ್ಸವ: ಸಂಭ್ರಮದ ಸಮಾಪನ

11/06/2021, 07:18

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ  ಆರಾಧ್ಯ ದೈವ ದುರ್ಗಾದೇವಿ ಜಾತ್ರಾ ಮಹೋತ್ಸವ ಅತಿ ಸರಳ ಹಾಗೂ ವಿಜ್ರಂಭಣೆಯಿಂದ ಜರುಗಿತು.

ಕೋವಿಡ್ 19 ಅಲೆ ಇರುವುದರಿಂದ ಸರಕಾರದ ಆದೇಶದ ಪ್ರಕಾರ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕಡಿಮೆ ಜನರ ಮಧ್ಯೆ ಸಡಗರ ಸಂಭ್ರಮದಿಂದ ಜಾತ್ರೆ ಮಾಡಲಾಯಿತು. ಈ ಭಾಗದ ಆರಾಧ್ಯ ದೈವ ದುರ್ಗಾದೇವಿ ಜಾತ್ರೆ ವಿಶೇಷವಾಗಿ ಐದು ವರ್ಷಕ್ಕೊಮ್ಮೆ ಆಗುತ್ತದೆ. 

ಪ್ರತಿವರ್ಷ ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ತಾಲೂಕುಗಳಿಂದ ಭಕ್ತರು ಆಗಮಿಸುತ್ತಿದ್ದರು. ಆದರೆ ಲಾಕ್ ಡೌನ್ ಇರುವುದರಿಂದ ಭಕ್ತಾದಿಗಳಿಗೆ ದೂರದಿಂದ ಬರುವವರಿಗೆ ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಿ ಮನೆಯಲ್ಲಿ ಜಾತ್ರೆ ಮಾಡಿ ಎಂದು ಸ್ವಾಮೀಜಿ  ತಿಳಿಸಿದ್ದರು. ಈ ಜಾತ್ರೆಯು 7 ಗ್ರಾಮಗಳ ಗೌಡರ ಬಂದಮೇಲೆ ಜಾತ್ರೆಯಂತೆ. ಬೈಲಗುಡ್ಡ, ಮೆದಿಕಲ್, ಮ್ಯಾದರಾಳ, ಅಂತರಗಂಗೆ ತಾಂಡ, ಅಂತರಗಂಗೆ, ನಾಗರಬೆಂಚಿ ಸುತ್ತಮುತ್ತಲ ಭಕ್ತಾದಿಗಳು ದುರ್ಗಾದೇವಿ ಕೃಪೆಗೆ ಪಾತ್ರರಾಗಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ.

ಅದ್ದೂರಿ ಸರಳ ರೀತಿಯ ಇಂದು ಜಾತ್ರೆ ನೆರವೇರಿತು. ಈ ಜಾತ್ರೆ ಬಳ್ಳಾರಿ ದುರ್ಗಮ್ಮ ಬಂದು ಇಲ್ಲಿ ನಡೆಸಿದ್ದಾಳೆ ಎಂದು ಮೂಲ ಇತಿಹಾಸದಲ್ಲಿ ಇದೆ. ಈ ಗುಡಿಯ ಮುಂದೆ ಬೇವಿನ ಗಿಡ 120 ವರ್ಷ ಹಳೆಯದಾಗಿದೆ.ಅಪರೂಪದ ಆ ಗಿಡವನ್ನು ದೇವಿ ಕಾಪಾಡಿಕೊಂಡು ಬಂದಿದ್ದಾಳೆಂದು ಹಿರಿಯರು ಹೇಳುತ್ತಾರೆ. ಬಳ್ಳಾರಿ ದುರ್ಗಮ್ಮ ಲಿಂಗಸುಗೂರು ಕೋರ್ಟಿನಲ್ಲಿ ಒಂದು ಕುರ್ಚಿ ದುರ್ಗಾ ಮಳೆಗಾಗಿ ಖಾಲಿ ಇದೆ ಎಂದು ಇತಿಹಾಸದಲ್ಲಿದೆ 


ಅಂತರಗಂಗೆ ಅಮರಪ್ಪ ಸಾಹುಕಾರ್ ರಾಯಚೂರಿನ ವಾಸವಾಗಿರು ಅವರು ಈಗ ನೇತಾಜಿ ಪಟೇಲ್ ಬಜಾರ್ ಬಂಗಾರದ ಅಂಗಡಿ ನಡೆಸುತ್ತಾ ಇದ್ದಾರೆ. ಅವರ ತಂದೆ ಅಮರಪ್ಪ ಸೌಕಾರ್ ದುರ್ಗಾದೇವಿ ಕನಸಿನಲ್ಲಿ ಬಂದು ನನಗೆ ಇರಲು ಗುಡಿ ಕಟ್ಟಿಸಿ ಕೊಡು ಎಂದು ಹೇಳಿ ಅದೃಶ್ಯಳಾದಳು. ದೇವಿ ಹೇಳಿದ ಪ್ರಕಾರ ಅವರು ಗುಡಿ ಕಟ್ಟಿ ಕೊಟ್ಟರು.

ಕ್ರಮೇಣ ಒಂದು ಸಮಯದಲ್ಲಿ ಅವರಿಗೆ ಆಕ್ಸಿಡೆಂಟ್ ಆದಾಗ ಸ್ಥಳದಲ್ಲಿ ಯಾರು ಇರಲಿಲ್ಲ. ಆ ವೇಳೆ ಈ ದುರ್ಗಮ್ಮ ಕರೆದುಕೊಂಡು ಆಸ್ಪತ್ರೆ ಚಿಕಿತ್ಸೆ ಬಂದು ಆರಾಮ್ ಆಗುತ್ತೆ ಏನು ಆಗುವುದಿಲ್ಲ ಎಂದು ಅದೃಶ್ಯಳಾದಳು ಎಂಬ ಐತಿಹ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು