12:35 PM Saturday29 - August 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಇತ್ತೀಚಿನ ಸುದ್ದಿ

ಮಾರ್ಚ್ 15: ಬೆಂಗಳೂರಿನಲ್ಲಿ ಪಂಚಮಸಾಲಿ ದುಂಡು ಮೇಜಿನ ಪರಿಷತ್; ಮೀಸಲಾತಿ ಹೋರಾಟಕ್ಕೆ ರೂಪುರೇಷೆ

13/03/2022, 10:18

ಬೆಂಗಳೂರು(reporterkarnataka.com):ಪಂಚಮ ಸಾಲಿ ದುಂಡು ಮೇಜಿನ ಪರಿಷತ್ತು ಹಾಗೂ  ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ( ಲಿಂಗಾಯತ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ)ಮೀಸಲಾತಿ ಚಳುವಳಿಗಾರರ ಸಭೆ ಬೆಂಗಳೂರಲ್ಲಿ ಮಾರ್ಚ್15ರಂದು ಬೆಂಗಳೂರಿನ ರಾಜಭವನ ರಸ್ತೆಯಲ್ಕಿರುವ ಪರಾಗ್ ಹೊಟೇಲ್ ನಲ್ಲಿ ನಡೆಯಲಿದೆ. 

ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಕೂಡಲಸಂಗಮ ಪ್ರಥಮ ಜಗದ್ಗುರುಗಳ ನೇತೃತ್ವದ ಸತ್ಯಾಗ್ರಹ ಸಂಧರ್ಭದಲ್ಲಿ ಸರಕಾರ ಕೊಟ್ಟ ಭರವಸೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತು ಸಿದ್ದತಾ ಸಭೆ ನಡೆಯಲಿದೆ.

ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಪ್ರವರ್ತಕ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲಸಂಗಮ ಇದರ ಪ್ರಥಮ ಜಗದ್ಗುರು ಶ್ರಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿರುವರು.

ಸಭೆಯಲ್ಲಿ ಹಾಲಿ -ಮಾಜಿ ಜನಪ್ರತಿನಿಧಿಗಳು,ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮ ನ ಬಳಗ , ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ , ಐಟಿಬಿಟಿ ಘಟಕ ,ಸಾಹಿತ್ಯ ಘಟಕ , ಕಾನೂನು ಘಟಕ, ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ,ತಾಲೂಕು ,ನಗರ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್,  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು, ಎಚ್ ಎಸ್ ಶಿವಶಂಕರ, ಮಾಜಿ ಮೇಯರ್ ಪುಟ್ಟರಾಜು, ಡಾ.ಬಿ.ಎಸ್.ಪಾಟೀಲ್ ನಾಗರಲ್ ಹುಲಿ,  ಕಿರಣ್ ಪಾಟೀಲ, ಶಿವಕುಮಾರ್ ಮೇಟಿ ಮುಂತಾದವರು ಉಪಸ್ಥಿತರಿರುವರು.

ಇತ್ತೀಚಿನ ಸುದ್ದಿ

ಜಾಹೀರಾತು