7:46 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಾವಿಗಿಲ್ಲ ಬೆಲೆ, ರೈತರಿಗಿಲ್ಲ ನೆಲೆ: ಶ್ರೀನಿವಾಸಪುರ ಮಾವು ಬೆಳೆಗಾರರ ಬದುಕಿಗೆ ಕೊಳ್ಳಿಯಿಟ್ಟ ಕೊರೊನಾ ಲಾಕ್ ಡೌನ್

08/06/2021, 17:41

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

info.reporterkarnataka@gmail.com

ಮಾವಿನ ರಾಜಧಾನಿ ಎಂದು ಖ್ಯಾತವಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹಣ್ಣುಗಳು ಲಾಕ್ ಡೌನ್ ಸಂಕಷ್ಟದಿಂದ ರೈತರ ಪಾಲಿಗೆ ಕಹಿಯಾಗಿದೆ.

ಇಲ್ಲಿನ ಹಣ್ಣುಗಳಿಗೆ ಹೊರ ರಾಜ್ಯಗಳಾದ ಮಹಾರಾಷ್ಟ್ರ , ಗುಜರಾತ್ , ಉತ್ತರ ಪ್ರದೇಶ , ಮಧ್ಯಪ್ರದೇಶ , ಬಿಹಾರ್ , ವೆಸ್ಟ್ ಬೆಂಗಾಲ್ , ಪಂಜಾಬ್ , ಛತ್ತೀಸ್ ಗಢ , ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ್  ಆಂಧ್ರಪ್ರದೇಶ , ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಬಹಳ ಬೇಡಿಕೆ ಇದೆ. ಆದರೆ ಲಾಕ್ ಡೌನ್ ನಿಂದ ಕಾವಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಸಂಕಷ್ಟದಲ್ಲಿರುವ ಬೆಳೆಗಾರರಿಗೆಸರ್ಕಾರ ಹೆಕ್ಟೇರ್‌ಗೆ ಘೋಷಿಸಿರುವ 10 ಸಾವಿರ ಪ್ಯಾಕೇಜ್  ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ . 

ಶ್ರೀನಿವಾಸಪುರದಲ್ಲಿ ಮೇ 5 ರಿಂದಲೇ ಮಾವಿನ ಮಂಡಿಗಳಿಗೆ ಮಾರುಕಟ್ಟೆ ಆರಂಭಿಸಲಾಗಿದ್ದು , ಮೇ .16 ರ ನಂತರವೇ ಶ್ರೀನಿವಾಸಪುರದ ಕೆಲವು ತಳಿಗಳ ಮಾವು ಎಪಿಎಂಸಿ ಮತ್ತು ಮಾವಿನ ಮಂಡಿಗಳಿಗೆ ಬರಲಾರಂಭಿಸಿದೆ. ಸರ್ಕಾರ ಮಾರುಕಟ್ಟೆ ಸೌಲಭ್ಯ ನೀಡಿದ್ದರೂ , ದೂರದ ವ್ಯಾಪಾರಿಗಳು ಕೋವಿಡ್ ಭಯದಿಂದ ಇತ್ತ ಸುಳಿಯದ ಕಾರಣ ಮಾರಾಟವೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. 

ರಾಜ್ಯದಲ್ಲಿ ಉತ್ಪಾದನೆ ಯಾಗುವ ಒಟ್ಟು ಮಾವಿನಲ್ಲಿ ಶೇ .60 ಕ್ಕಿಂತಲೂ ಹೆಚ್ಚು ಮಾವು ಬೆಳೆಯುವುದು ಕೋಲಾರ ಜಿಲ್ಲೆಯಲೇ, ಅದರಲ್ಲೂ ಶ್ರೀನಿವಾಸಪುರದಲ್ಲೇ ಸುಮಾರು 30 ಸಾವಿರ ಹೆಕ್ಟೇರ್ ಮಾವು ಬೆಳೆಯಲಾಗುತ್ತಿದೆ.  ಉಳಿದಂತೆ ಬಂಗಾರಪೇಟೆ 4562 , ಕೋಲಾರ -5574 ಮಾಲೂರು -1471 , ಮುಳಬಾಗಲು -16,870 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು ಸುಮಾರು 60,172 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. 

ಇನ್ನು ಮಾವು ಎಂದೊಡನೇ ನೆನಪಿಗೆ ಬರುವ ಶ್ರೀನಿವಾಸಪುರದ ಮಣ್ಣಿನ ಮಹಿಮೆ, ಫಲವತ್ತತೆ ಮಾವು ಬೆಳೆಗೆ ಪ್ರಕೃತಿಯೇ ಹೇಳಿ ಮಾಡಿಸಿಕೊಟ್ಟಂತಿದೆ. ಇಲ್ಲಿನ ಮರಳು ಮಿಶ್ರಿತ ಕೆಮ್ಮಣ್ಣು ವಿಶೇಷತೆ. ಯಾವುದೇ ತಳಿಯಿರಲಿ , ಈ ನೆಲದಲ್ಲಿ ಬೆಳೆದ ಮಾವು ಹುಳಿ ಕಡಿಮೆ . ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟಕರವಾಗಿ ಎಲ್ಲರ ಬಾಯಲ್ಲಿ ನೀರೂರಿಸುವ ಸಾಮರ್ಥ್ಯ ಹೊಂದಿದೆ . 

ಜಿಲ್ಲೆಯಲ್ಲಿ ರಸಪೂರಿ , ಬಾದಾಮಿ , ಮಲ್ಲಿಕಾ , ಮಲಗೋಬಾ , ಬೇನಿಷಾ , ಖುದ್ದೂಸ್ , ರಾಜಗೀರಾ , ಕಾಲಾಪಾಡ್ ,  ಶಂಕರ್ ಬ್ರಿಡ್ಜ್ , ತೋತಾಪುರಿ , ನೀಲಂ , ಆಲೋನ್ಸಾ ,  ಅಲೈಟ್ , ತಳಿಯ ಮಾವು ಹೆಚ್ಚು ಬೆಳೆಯುಲಾಗುತ್ತಿದೆ .

ಮಾವು ಬೆಳೆ ಎರಡು ವರ್ಷಕ್ಕೊಮ್ಮೆ ಉತ್ತಮ ಇಳುವರಿ ಸಿಗುತ್ತದೆ . ಕಳೆದ ವರ್ಷ ಮತ್ತು ಈ ವರ್ಷ ಉತ್ತಮ ಬೆಳೆಯಾಗಿದ್ದರೂ ಕೋವಿಡ್ ಮಾರಿ ರೈತರನ್ನು ಕಾಡುತ್ತಿದೆ . ಒಂದು ವರ್ಷ ಉತ್ತಮ ಬೆಳೆಯಾದರೆ ಮತ್ತೊಂದು ವರ್ಷ ಕಡಿಮೆ ಫಸಲು ಸಿಗುತ್ತದೆ , ಈ ಬಾರಿ ಆಲಿಕಲ್ಲುಳೆ , ಬಿರಳಿಯ ಪ್ರತಾಪ ಇಲ್ಲದ ಕಾರಣ ಮರಗಳಲ್ಲಿ ಉತ್ತಮ ಫಸಲು ಇದೆ ಆದರೆ ಕೋವಿಡ್ ಲಾಕ್ಡೌನ್ ನಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ರೈತ ಮತ್ತು ವ್ಯಾಪಾರಸ್ಥರಿಗೆ  ಕಂಗೆಡುವಂತಾಗಿದೆ .    
         
ಈ ಬಾರಿ ಮಾವಿನ ಕಾಯಿಗೆ ಬೆಲೆ ಸಿಗದೇ  ಮಾವು ಬೆಳೆಗಾರರ ಸಂಕಷ್ಟಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಕಾಯಿಗಳನ್ನು ಕೊಯ್ಲುಮಾಡಿ ತಂದು ಮಾರುಕಟ್ಟೆಯಲ್ಲಿ ರಾಶಿ ಹಾಕುತ್ತಿದ್ದಾರೆ.

‘ರಸ ತಯಾರಿಕೆಗೆ ಹೋಗುವ ತೊತಾಪುರಿ ಮಾವು ಕಾಯಿ ಟನ್‌ಗೆ ₹8 ಸಾವಿರದಂತೆ ಮಾರಾಟ ವಾಗುತ್ತಿದೆ. ಬಣ್ಣದ ತೊತಾಪುರಿ ಮಾವು ಕಾಯಿಯನ್ನು ತಿನ್ನಲು ಖರೀದಿಸಲಾಗುತ್ತದೆ. ಅಂಥ ಕಾಯಿಯ ಬೆಲೆ ಟನ್‌ಗೆ ₹ 12-15 ಸಾವಿರದಂತೆ ಖರೀದಿಯಾಗುತ್ತಿದೆ.ಉಳಿದಂತ  ಬಾದಾಮಿ ಬೆಲೆ ಟನ್‌ಗೆ ₹ 42 – 55 ಸಾವಿರ ,ಲಾಲ್ ಬಾಗ್ (ರಾಜಗೀರಾ) ಮಾವು ಟನ್ ಗೆ ₹ 10-15 ಸಾವಿರ , ಮಲ್ಲಿಕಾ ಕಾಯಿಯ ಬೆಲೆ ಟನ್‌ಗೆ ₹ 20-25 ಸಾವಿರ ,ಬೇನಿಷಾ ಕಾಯಿಯ ಬೆಲೆ ಟನ್‌ಗೆ ₹ 18-22 ಸಾವಿರ ,ಮಾಲ್ಗೋಬಾ ಕಾಯಿಯ ಬೆಲೆ ಟನ್‌ಗೆ ₹ 40-50 ಸಾವಿರ ,ಶೇಕರ್ ಬೀಜ್ ಕಾಯಿಯ ಬೆಲೆ ₹ 30-45 ಸಾವಿರ , ಕಲಾ ಪಹಡಾ ಕಾಯಿಯ ಬೆಲೆ ಟನ್‌ಗೆ ₹ 40-45 ಸಾವಿರ , ರಾಸ್ ಪುರಿ ಕಾಯಿಯ ಬೆಲೆ ಟನ್‌ಗೆ ₹ 10  ಸಾವಿರ, ಇಮಾಮ್ ಪಸಂದ್ ಕಾಯಿಯ ಬೆಲೆ ಟನ್‌ಗೆ ₹ 50 – 65 ಸಾವಿರ, ನಾಟಿ ₹ 4 ಸಾವಿರಕ್ಕೆ ಮಾರಾಟವಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು