2:52 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ರೋಹಿಣಿ ಸಿಂಧೂರಿ ವರ್ಗಾವಣೆ: ಮುಮ್ಮೇಳದಲ್ಲಿ ಸಚಿವರು, ಸಂಸದರು, ಶಾಸಕರು; ಹಿಮ್ಮೇಳದಲ್ಲಿ ಸರಕಾರಿ ಅಧಿಕಾರಿಗಳು !!

06/06/2021, 18:05

ಶ್ರದ್ಧಾ ಎಸ್. ಪಾಟೀಲ್ ಮೈಸೂರು

info.reporterkarnataka@gmail.com

ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲು ಅವರು ಅಧಿಕಾರ ಸ್ವೀಕಾರ ಮಾಡಿದಂದಿನಿಂದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಇದಕ್ಕೆ ಓರ್ವ ಸಂಸದ, ಉಸ್ತುವಾರಿ ಸಚಿವರು, ಅರ್ಧ ಡಜನಿಗೂ ಅಧಿಕ ಶಾಸಕರು, 5 ಡಜನಿಗೂ ಹೆಚ್ಚು ಕಾರ್ಪೊರೇಟರ್ ಗಳು ಸರಕಾರದ ಮೇಲೆ ಸದಾ ಒತ್ತಡ ಹೇರಿದ್ದರು. ಇದರ ಜತೆಗೆ ಜಿಲ್ಲೆಯ ಹಲವು ಮಂದಿ ಅಧಿಕಾರಿಗಳು ಕೂಡ ಹಿಮ್ಮೇಳದಲ್ಲಿ ಸಾಥ್ ನೀಡಿದ್ದರು !

ಇದೀಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಗೆ ಹೊಸ ಆಯುಕ್ತರಾಗಿ ಅವರನ್ನು ನೇಮಿಸಲಾಗಿದೆ. ಆದರೆ ವಿಶೇಷವೆಂದರೆ ರೋಹಿಣಿ ಸಿಂಧೂರಿ ಅವರು ಎಲ್ಲಿ ಹೋದರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಮಂಗಳೂರಿನಲ್ಲಿ ಪ್ರೊಬೇಷನರಿ ಎಸಿಯಾಗಿದ್ದಾಗಲೇ ಕಟೀಲು ದೇವಳ ವಿಷಯದಲ್ಲಿ ಸದ್ದು ಮಾಡಿದ್ದರು. ಮೌನವಾಗಿ ಕೆಲಸ ಮಾಡುವ ಛಾತಿಯೇ ಅವರಲಿಲ್ಲ. ಒಂದು ರೀತಿಯಲ್ಲಿ ವಿವಾದವನ್ನು ಮೈಗೆ ಎಳೆದುಕೊಳ್ಳುತ್ತಿದ್ದ ಅಧಿಕಾರಿ ಅವರು.

ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗಲೂ ಅಲ್ಲಿನ ಸ್ಥಳೀಯ ಮಾಂಡಲಿಕರು ಜತೆ ಕಾದಾಡಿದ್ದರು. ಎಚ್.ಡಿ. ರೇವಣ್ಣ ಮತ್ತು ಸಿಂಧೂರಿ ನಡುವೆ ಸದಾ ಜಟಾಪಟಿ ನಡೆಯುತ್ತಲೇ ಇತ್ತು. ಶಾಸಕ ಎ. ಮಂಜು ಅವರು ರೋಹಿಣಿ ಸಿಂಧೂರಿ ಕಾಲ ಮೇಲೆ ಕಾಲು ಹಾಕಿ ಕೂರುತ್ತಾರೆ ಎಂದು ಆಗಾಗ ದೂರುತ್ತಿದ್ದರು.

ಓರ್ವ ಮಹಿಳಾ ಐಎಎಸ್ ಅಧಿಕಾರಿ ಕಾಲ ಮೇಲೆ ಕಾಲು ಹಾಕಿ ಕೂರುವುದನ್ನು ಒಪ್ಪದ ಮನಸ್ಥಿತಿ, ಒಬ್ಬ ಸಾಮಾನ್ಯ ಮಹಿಳೆ ಕಾಲ ಮೇಲೆ ಕಾಲಿಕ್ಕಿದರೆ ಸಹಿಸಿತೇ ಎಂಬ ಪ್ರಶ್ನೆ ಉದ್ಬವಿಸುತ್ತದೆ

ರಾಜಕಾರಣಿಗಳದ್ದು ಸದಾ ದೂರು. ಮಾಸ್ಕ್ ತೆಗೆದು ಮಾತನಾಡಿ ಎಂದು ಶಾಸಕ ಎನ್. ಮಹೇಶ್ ಅಜ್ಞಾಪಿಸುತ್ತಾರೆ. ಸಂಸದ ಪ್ರತಾಪ ಸಿಂಹ ಅವರು ಸ್ವಿಮ್ಮಿಂಗ್ ಫೂಲ್ ತಕರಾರು ಎತ್ತುತಾರೆ. ಇನ್ನು ಮೈಸೂರು ಮಹಾನಗರಪಾಲಿಕೆಯ ಕಾರ್ಪೊರೇಟರ್ ದೂರು ಪ್ರತಿದಿನ ಬೆಳಗಾದರೆ ಇರುತ್ತಿತ್ತು. ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ವರ್ಗಾಣೆ ಹಿಂದೆ ಬಹಳಷ್ಟು ಪುರುಷ ಶಕ್ತಿಗಳು ಹೋರಾಟ ನಡೆಸಿದ್ದಾರೆ. ಏನಿದ್ದರೂ ಆಕೆ ಗಟ್ಟಿಗಿತ್ತಿ ಎಂದು ರೋಹಿಣಿ ಸಿಂಧೂರಿ ವರ್ಗಾವಣೆಗೆ ವಿರೋಧಿಸಿದ ಮೈಸೂರಿನ ಜನತೆ ಹೇಳಿಕೊಳ್ಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು