9:39 PM Saturday20 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಜನ ಸಾಮಾನ್ಯರನ್ನು ದೋಚುವ ಟೋಲ್ ಗೇಟ್ ಸಂಸ್ಕೃತಿ ನನ್ನ ಕ್ಷೇತ್ರಕ್ಕೆ ಬೇಡ: ಸಿಎಲ್ ಪಿ  ಉಪ ನಾಯಕ ಖಾದರ್

30/01/2022, 23:47

ತೊಕ್ಕೊಟ್ಟು(reporterkarnataka.com): ಜನ ಸಾಮಾನ್ಯರನ್ನು ದೋಚುವ ಟೋಲ್ ಗೇಟ್ ಸಂಸ್ಕೃತಿ ನನ್ನ ಕ್ಷೇತ್ರಕ್ಕೆ ಬೇಡ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಖಾದರ್ ಹೇಳಿದರು.


ಅವರು ನಾಟೆಕಲ್ ಜಂಕ್ಷನ್ ನಿಂದ ಅಸೈಗೋಳಿ ಜಂಕ್ಷನ್ ವರೆಗೆ 10 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಕಾಮಗಾರಿಗೆ  ಕೇಂದ್ರ ಸರಕಾರದ ಅನುದಾನ ಬಿಡುಗಡೆಯಾಗಿದ್ದರೆ ಟೋಲ್ ಗೇಟನ್ನು ಪ್ರಾರಂಭಿಸಲಿದ್ದರು. ಆದರೆ ಬಡ ಸಾಮಾನ್ಯರನ್ನು ದೋಚುವ ಟೋಲ್ ಗೇಟ್ ಸಂಸ್ಕೃತಿ ನನ್ನ ಕ್ಷೇತ್ರಕ್ಕೆ ಬರಬಾರದೆಂಬ ಉದ್ದೇಶದಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಈ ರಸ್ತೆ ನಡೆಸಲಾಗುವುದು ಎಂದರು.


ರಾಜ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್, ಸಹಾಯಕ ಕಾರ್ಯಪಾಲ ಇಂಜಿನಿಯರ್ ಕೆ.ಟಿ.ಚಂದ್ರ ಶೇಕರಯ್ಯ ಮತ್ತು ಕನ್ಸಲ್ಟೆಂಟ್ ಕೌಶಿಕ್ ಅವರೊಂದಿಗೆ ಖಾದರ್ ಕಾಮಗಾರಿಯ ಬಗ್ಗೆ ಮಾತುಕತೆ ನಡೆಸಿದರು.

ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂಚಲಾಕ್ಷಿ, ಬೆಳ್ಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಮಂಜನಾಡಿ ಪಂಚಾಯತ್ ಉಪಾಧ್ಯಕ್ಷ ವಿನ್ಸೆಂಟ್ ವೇಗಸ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪದ್ಮಾವತಿ ಕಾಂಗ್ರೆಸ್ ಪ್ರಮುಖರಾದ ಎನ್.ಎಸ್. ಕರೀಂ, ರವಿರಾಜ್ ಶೆಟ್ಟಿ ದೇರಳೆಕಟ್ಟೆ, ಟಿ.ಎಸ್ ಅಬ್ದುಲ್ಲಾ, ಅಬ್ದುರ್ರಹ್ಮಾನ್ ಕೋಡಿಜಾಲ್, ನಾಸೀರ್ ಸಾಮಾನಿಗೆ, ಇಸ್ಮಾಯಿಲ್ ನಾಟೆಕಲ್, ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ನಝರ್ ಷಾ ಪಟ್ಟೋರಿ, ಅಚ್ಚುತ ಗಟ್ಟಿ, ದೇವಣ್ಣ ಶೆಟ್ಟಿ, ಇಕ್ಬಾಲ್, ರುಕಿಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗುಲಾಬಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು