1:48 AM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ನಿಮಗೆ ತಾಕತ್ತಿದ್ರೆ, ಧಮ್‌ ಇದ್ರೆ ಮೀಸಲಾತಿ ತೆರವು ಮಾಡಿ: ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪುಣಚ ಸವಾಲು

28/01/2022, 22:01

ಮಂಗಳೂರು(reporterkarnataka.com): ಅಧಿಕಾರ ನಿಮ್ಮಲ್ಲಿದೆ. ನಿಮಗೆ ತಾಕತ್ತಿದ್ರೆ, ಧಮ್‌ ಇದ್ರೆ ಮೀಸಲಾತಿ ತೆರವು ಮಾಡಿ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್‌ ಪುಣಚ ಸವಾಲೆಸೆದರು.


ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ. ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದ.ಕ ಜಿಲ್ಲಾ ಶಾಖೆ
ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

2013ರ ನಂತರ ಈ ದೇಶ ಒಂದು ಧಾರ್ಮಿಕ ಆಫೀನಲ್ಲಿ ಬೆಳೆದಿತ್ತು. ಅದಕ್ಕೂ ಮೊದಲು ಶಿಕ್ಷಣ ಇಲ್ಲದವರು ಮಾತಿನ ಮೋಡಿಗೆ ಒಳಗಾಗುತ್ತಿದ್ದರು.

ಆದರೆ 2013ರ ನಂತರ ಸುಶಿಕ್ಷಿತರು ಸಹ ಭಾವನಾತ್ಮಕ ಲೋಕದಲ್ಲಿ ತೇಲಾಡುತ್ತಿದ್ದಾರೆ. ನಮ್ಮ ದೇಶ ವಿಶ್ವ ಗುರುವಾಗುತ್ತದೆ, ನಾವು ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತೇವೆ, ನಮ್ಮ ದೇಶ ಅಭಿವೃದ್ಧಿ ಪಥದತ್ತ ಹೋಗುತ್ತದೆ ಎಂದು ಸೂಲಿಬೆಲೆ ಹುಡುಗ್ರನ್ನು ಹಾಳು ಮಾಡಿ, ತಲೆಕೆಡಿಸಿದ ಎಂದು ಹೇಳಿದರು.

ಅಂಬೇಡ್ಕರ್‌ನನ್ನು ದೇವರಂಥೆ ಪೂಜೆ ದಲಿತ ಸಮುದಾಯವರು ಮಾಡುತ್ತಿದ್ದಾರೆ. ಬಂಟರು, ಬಿಲ್ಲವರು, ಕ್ರಿಶ್ಚಿಯನ್‌, ಗೌಡರು, ಮುಸ್ಲಿಂಮರು ಅಂಬೇಡ್ಕರ್‌ನಿಂದ ನಾವು ಏನೂ ಪಡೆದುಕೊಂಡಿಲ್ಲವೇ ಎಂದು ಅವರು ಪ್ರಶ್ನಿಸಿದರು.

ನಿಮ್ಮಲ್ಲಿ ಸಂಪೂರ್ಣ ಅಧಿಕಾರ ಇದೆ. ನಿಮಗೆ ಧಮ್‌ ಇದ್ರೆ, ತಾಕತ್ತಿದ್ರೆ ಮೀಸಲಾತಿ ತೆರವು ಮಾಡಿ ಎಂದು ಸವಾಲೆಸೆದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, ಸಂವಿಧಾನವನ್ನು ರಚಿಸಿ,ಅದಕ್ಕೊಂದು ಹೊಸ ರೂಪ ಕೊಟ್ಟುವರು ಅಂಬೇಡ್ಕರ್‌ ಎಂದರು.

ಕಮ್ಯುನಿಸ್ಟ್  ನಾಯಕ ಸುನಿಲ್‌ ಕುಮಾರ್‌ ಬಜಾಲ್‌ ಹಾಗೂ ದಲಿತ ಮುಖಂಡರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು