9:25 PM Wednesday8 - May 2024
ಬ್ರೇಕಿಂಗ್ ನ್ಯೂಸ್
ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ…

ಇತ್ತೀಚಿನ ಸುದ್ದಿ

ಪುಟಾಣಿಗಳಿಂದಲೇ ಮಕರ ಸಂಕ್ರಮಣ ಆಚರಣೆ: ಶುಭ ಕೋರಿ ಸಾರ್ವಜನಿಕರ ಮನಗೆದ್ದ ಜಾಣೆಯರು

16/01/2022, 17:10

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು, ಮಕ್ಕಳು ತುಂಬಾ ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರ‍ಾಗಿದ್ದಾರೆ.


ಬೆಳ್ಳಂಬೆಳಿಗ್ಗೆ ದೈನಂದಿನ ಕಾರ್ಯಗಳನ್ನು ಪೂರೈಸಿ ಶುಭ್ರವಾದ ಧಿರಿಸುಗಳನ್ನು ಧರಿಸಿದ ಮಕ್ಕಳು,ತಮ್ಮ ತಮ್ಮ ಮನೆಗಳಿಂದ ಸಕ್ಕರೆ ಉರಿದ ಕಡಲೆ ಹಾಗೂ ಎಳ್ಳು ಮಿಶ್ರಿತ ಅಥವಾ ಬೆಲ್ಲ ಎಳ್ಳು ಹಾಗೂ ಉರಿದಕಡಲೆ ಮಿಶ್ರಿತ ಪಾದಾರ್ಥವನ್ನು.ಬಟ್ಟಲಿನಲ್ಲಿ ತುಂಬಿಕೊಂಡು ಮನೆ ಮನೆಗೆ ತೆರಳಿ ಮೆನೆಯ ಮಂದಿಗೆಲ್ಲ ಸಿಹಿ ಹಂಚಿದ್ದಾರೆ. ಈ ಮೂಲಕ ಮಕ್ಕಳು ಸಾಮೂಹಿಕವಾಗಿ ಸಿಹಿ ಹಂಚಿ ಸರ್ವರಿಗೂ ಶುಭಕೋರಿದ್ದಾರೆ. ಶ್ರಿಪೇಟೆಬಸವೇಶ್ವರ ನಗರದ ಮಕ್ಕಳು ಈ ಮೂಲಕ ಪಟ್ಟಣದೆಲ್ಲೆಡೆಗಳಲ್ಲಿ, ಮಕರ ಸಂಕ್ರಾಂತಿ  ಸಿಹಿಯನ್ನು ಹಂಚುವ ಮೂಲಕ ಸರ್ವರಿಗೂ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಗಲ್ಲಿಯ ಮಕ್ಕಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳೋದರ ಮೂಲಕ ಪರಸ್ಪರ ಶುಭಕೋರಿ ಸೌಹಾರ್ಧತೆ ಮೆರೆದರು. ತಾವು ಮನೆಯಿಂದ ತಯಾರಿಸಿಕೊಂಡು ತಂದಿದ್ದ ಸಿಹಿಯನ್ನು ಎಲ್ಲರೂ ಒಟ್ಟಾಗಿ ಗಲ್ಲಿಯ ಪ್ರತಿಯೊಂದು ಮನೆ ಮನೆಗೆ ತೆರಳಿ ಸಿಹಿ ಹಂಚಿ ಶುಭ ಕೋರಿದ್ದಾರೆ. ದಾರಿಯಲ್ಲಿ ಎದುರಾದ ಪ್ರತಿಯೊಬ್ಬ ರಿಗೂ ಸಿಹಿ  ಸಂಕ್ರಾಂತಿ ಶುಭ ಕೋರಿ ವೈಶಿಷ್ಟ್ಯತೆ ಮೆರೆದರು.ಈ ಮೂಲಕ ಮಕ್ಕಳು ಪಟ್ಟಣ ಮಾತ್ರವಲ್ಲ,ತಾಲೂಕಿನ ಮಾಡಿನ ಸಮಸ್ತ ಯುವಪೀಳಿಗೆಗೆ ಮಾದರಿಯಾಗಿದದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು