12:11 PM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಪದ್ಯದ ಜತೆಗೆ ಗದ್ಯ ರಚನೆ ಬಗ್ಗೆಯು ಒಲವು ಮೂಡಿಸಿಕೊಳ್ಳಬೇಕು : ಡಾ.ಬಿ.ಎ.ವಿವೇಕ ರೈ

12/01/2022, 22:39

ಮಂಗಳೂರು (ReporterKarnataka.com)

ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ ಹಾಗೂ ಪಾದುವ ಪದವಿಪೂರ್ವ ಕಾಲೇಜ್‌ನ ಸಹಯೋಗದಲ್ಲಿ ತೌಳವ ಸಿರಿ ಪ್ರಶಸ್ತಿ, ಸಾರಾ ದತ್ತಿ ಪ್ರಶಸ್ತಿ ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನ ಪ್ರದಾನ ಕಾರ್ಯಕ್ರಮ ಪಾದುವ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಕರಾವಳಿಯ ಅನೇಕರು ಕವನವನ್ನು ಬರೆಯುತ್ತಿದ್ದಾರೆ, ಕೇವಲ ಕವನಗಳಿಗೆ ಸೀಮಿತರಾಗಬಾರದು ಪದ್ಯಗಳ ಜತೆಗೆ ಗದ್ಯ ರಚನೆಯನ್ನೂ ರೂಢಿಸಿಕೊಳ್ಳಬೇಕು, ಪದ್ಯವನ್ನು ಬರೆದಾಗ ಅದನ್ನು ಹಾಡಿದಾಗ ಅವುಗಳಿಗೆ ಲೈಕು ಬಂದಾಗ ಬರಿ ಅದಕಷ್ಟೆ ಮಾರು ಹೋಗಬೇಡಿ ಎಂದು ಕಿವಿ ಮಾತು ಹೇಳಿದರು.
ಜತೆಗೆ ಅಧ್ಯಯನ ಕೂಡ ಉತ್ತಮ ಕ್ಷೇತ್ರವಾಗಿದ್ದು ಯುವ ಜನತೆ ಇದರ ಬಗ್ಗೆ ಗಮನ ಹರಿಸಬೇಕು ಸಂಶೋಧನೆಗೆ ಯಾವುದೆ ಪದವಿ ಪಿಎಚ್‌ಡಿ ಮುಖ್ಯವಲ್ಲ ಸುತ್ತಮುತ್ತಲಿನ ಕೇಂದ್ರಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಬರೆದು ಅಧ್ಯಯನ ಮಾಡಬಹುದು ಎಂದರು.

ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆಯವರಿಗೆ ತೌಳವ ಸಿರಿ ಪ್ರಶಸ್ತಿ, ಸ್ನೇಹದೀಪದ ಸಂಚಾಲಕಿ ತಬಸ್ಸುಮ್ ಅವರಿಗೆ ಸಾರಾ ದತ್ತಿ ಪ್ರಶಸ್ತಿ ಹಾಗೂ ನಿರ್ಮಲಾ ಸುರತ್ಕಲ್ ಅವರಿಗೆ ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ಪ್ರದಾನ ಮಾಡಲಾಯಿತು.

ಪಾದುವಾ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾದ ಗ್ಲಾಡಿಸ್ ಅಲೋಸಿಯಸ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ.ಸಕೀನಾ ನಾಸೆರ್ ಉಪಸ್ಥಿತರಿದ್ದರು. ಹಿರಿಯ ಲೇಖಕಿ ರೂಪಕಲಾ ಆಳ್ವ ತೀರ್ಪುಗಾರರ ಅನಿಸಿಕೆಯನ್ನು ಹಂಚಿಕೊಂಡರು.

ಡಾ.ಜ್ಯೋತಿ ಚೇಳ್ಯಾರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಂಘದ ಉಪಾಧ್ಯಕ್ಷರಾದ ವಿಜಯಲಕ್ಷ್ಮೀ ಬಿ.ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ.ಪ್ರವೀಣ ರೈ ಕುಕ್ಕುವಳ್ಳಿ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು