3:16 PM Saturday20 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಕರ್ಫ್ಯೂ ಹೆಸರಿನಲ್ಲಿ ಹೊಟ್ಟೆಗೆ ಹೊಡೆಯಬೇಡಿ ಸ್ವಾಮಿ: ಕೊರೊನಾಕ್ಕಿಂತಲೂ ಹಸಿವು ಭಯಾನಕ ನೆನಪಿರಲಿ

08/01/2022, 09:43

ಸಾಂದರ್ಭಿಕ ಚಿತ್ರ
ಮಂಗಳೂರು(reporterkarnataka.com): ರಾಜ್ಯದಲ್ಲಿ ಒಮಿಕ್ರೋನ್ ಹಾವಳಿ ಹೆಚ್ಚಾಗುತ್ತಿರುದರ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಮಂಗಳೂರಿನಲ್ಲಿಯೂ ಜಾರಿಗೊಳಿಸಲಾಗಿದ್ದು, ಹೊಟ್ಟೆಪಾಡಿಗಾಗಿ ದುಡಿಯುವ ಮಂದಿಗೆ ಯಾವುದೇ ತೊಂದರೆ ಕೊಡದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿನಂತಿಸಿದ್ದಾರೆ.

ಕೆಲವು ಕಡೆಗಳಲ್ಲಿ ಅನಗತ್ಯ ವಾಹನಗಳ ಓಡಾಟ ತಪಾಸಣೆ ಕಂಡು ಬಂತು. ಇದರ ಜತೆಯಲ್ಲೇ.ಹೋಟೆಲ್ ಗಳಲ್ಲಿ ರಾತ್ರಿ ಪಾಳಿಯಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡುವ ಹೋಟೆಲ್ ಸಿಬ್ಬಂದಿಗಳನ್ನು ಪೊಲೀಸರು ತಡೆದು, ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಗದರಿಸಲಾಗಿದೆ. ಒಂದೇ ಬೈಕ್ ನಲ್ಲಿ ಇದ್ದ ಇಬ್ಬರಲ್ಲಿ,( ಸಹ ಸವಾರನ್ನು ಡ್ರಾಪ್ ನೀಡಲು ಬಂದಿದ್ದು) ಒಬ್ಬನನ್ನು ನಡೆದಿಕೊಂಡು  ಹೋಗು ಎಂದು ಕಾನ್ಸ್ಟೇಬಲ್ ಎಂದು ಬೆದರಿಸಿದ್ದು, ಕೊನೆಗೂ. ಎ.ಎಸ್.ಐ ಯಲ್ಲಿ ಯುವಕರು ಬೇಡಿಕೊಂಡಿದ್ದು, ಕೊನೆಗೆ ಬಿಟ್ಟು ಬರಲು ಅನುಮತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಲ್ಲದೆ ನಾಳೆಯಿಂದ ಬೇಗಬರುವಂತೆ ತಾಕೀತು ಮಾಡಿದ್ದಾರೆ.ಪೊಲೀಸ್ ಕಾನ್ಸ್ಟೇಬಲ್ ಗಳೇ ನಿಮ್ಮಲ್ಲಿ ಕಿಂಚಿತ್ತೂ ಸೌಜನ್ಯತೆ ಇಲ್ಲವೇ? ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ತೆರಳುವವರ ಮೇಲೆ ನಿಮ್ಮ ದರ್ಪ ತೋರಿಸುವುದಲ್ಲ. ಎಲ್ಲರೂ ಅನಾವಶ್ಯಕವಾಗಿ ತಿರುಗಾಟ ಮಾಡುತ್ತಾರೆ ಎಂಬುದನ್ನು ಬಿಡಿ. ಹಾಗಿದ್ದರೆ ಹೋಟೆಲ್ ಗಳಿಗೆ ಸರಿಯಾದ ಸಮಯ ವಿಧಿಸಿ. ನಿಮ್ಮ ಹೊಟ್ಟೆಯನ್ನು ಕೂಡ ಅಂತಹದೇ ಹೋಟೆಲ್ ಗಳ ಪಾರ್ಸೆಲ್ ತಿಂಡಿ ತುಂಬಿಸುತ್ತದೆ ಎಂಬುದನ್ನು ಮರೆಯಬೇಡಿ… ಝೋಮಟೋ, ಸ್ವಿಗ್ಗಿ ಗಳ ಪಾರ್ಸೆಲ್ ವಿತರಕನ್ನು ಕಳ್ಳರಂತೆ ಟ್ರೀಟ್ ಮಾಡಬೇಡಿ. ಈ ಬಗ್ಗೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

ಇತ್ತೀಚಿನ ಸುದ್ದಿ

ಜಾಹೀರಾತು