2:39 AM Thursday19 - March 2026
ಬ್ರೇಕಿಂಗ್ ನ್ಯೂಸ್
Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು…

ಇತ್ತೀಚಿನ ಸುದ್ದಿ

ಕರ್ಫ್ಯೂ ಹೆಸರಿನಲ್ಲಿ ಹೊಟ್ಟೆಗೆ ಹೊಡೆಯಬೇಡಿ ಸ್ವಾಮಿ: ಕೊರೊನಾಕ್ಕಿಂತಲೂ ಹಸಿವು ಭಯಾನಕ ನೆನಪಿರಲಿ

08/01/2022, 09:43

ಸಾಂದರ್ಭಿಕ ಚಿತ್ರ
ಮಂಗಳೂರು(reporterkarnataka.com): ರಾಜ್ಯದಲ್ಲಿ ಒಮಿಕ್ರೋನ್ ಹಾವಳಿ ಹೆಚ್ಚಾಗುತ್ತಿರುದರ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಮಂಗಳೂರಿನಲ್ಲಿಯೂ ಜಾರಿಗೊಳಿಸಲಾಗಿದ್ದು, ಹೊಟ್ಟೆಪಾಡಿಗಾಗಿ ದುಡಿಯುವ ಮಂದಿಗೆ ಯಾವುದೇ ತೊಂದರೆ ಕೊಡದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿನಂತಿಸಿದ್ದಾರೆ.

ಕೆಲವು ಕಡೆಗಳಲ್ಲಿ ಅನಗತ್ಯ ವಾಹನಗಳ ಓಡಾಟ ತಪಾಸಣೆ ಕಂಡು ಬಂತು. ಇದರ ಜತೆಯಲ್ಲೇ.ಹೋಟೆಲ್ ಗಳಲ್ಲಿ ರಾತ್ರಿ ಪಾಳಿಯಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡುವ ಹೋಟೆಲ್ ಸಿಬ್ಬಂದಿಗಳನ್ನು ಪೊಲೀಸರು ತಡೆದು, ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಗದರಿಸಲಾಗಿದೆ. ಒಂದೇ ಬೈಕ್ ನಲ್ಲಿ ಇದ್ದ ಇಬ್ಬರಲ್ಲಿ,( ಸಹ ಸವಾರನ್ನು ಡ್ರಾಪ್ ನೀಡಲು ಬಂದಿದ್ದು) ಒಬ್ಬನನ್ನು ನಡೆದಿಕೊಂಡು  ಹೋಗು ಎಂದು ಕಾನ್ಸ್ಟೇಬಲ್ ಎಂದು ಬೆದರಿಸಿದ್ದು, ಕೊನೆಗೂ. ಎ.ಎಸ್.ಐ ಯಲ್ಲಿ ಯುವಕರು ಬೇಡಿಕೊಂಡಿದ್ದು, ಕೊನೆಗೆ ಬಿಟ್ಟು ಬರಲು ಅನುಮತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಲ್ಲದೆ ನಾಳೆಯಿಂದ ಬೇಗಬರುವಂತೆ ತಾಕೀತು ಮಾಡಿದ್ದಾರೆ.ಪೊಲೀಸ್ ಕಾನ್ಸ್ಟೇಬಲ್ ಗಳೇ ನಿಮ್ಮಲ್ಲಿ ಕಿಂಚಿತ್ತೂ ಸೌಜನ್ಯತೆ ಇಲ್ಲವೇ? ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ತೆರಳುವವರ ಮೇಲೆ ನಿಮ್ಮ ದರ್ಪ ತೋರಿಸುವುದಲ್ಲ. ಎಲ್ಲರೂ ಅನಾವಶ್ಯಕವಾಗಿ ತಿರುಗಾಟ ಮಾಡುತ್ತಾರೆ ಎಂಬುದನ್ನು ಬಿಡಿ. ಹಾಗಿದ್ದರೆ ಹೋಟೆಲ್ ಗಳಿಗೆ ಸರಿಯಾದ ಸಮಯ ವಿಧಿಸಿ. ನಿಮ್ಮ ಹೊಟ್ಟೆಯನ್ನು ಕೂಡ ಅಂತಹದೇ ಹೋಟೆಲ್ ಗಳ ಪಾರ್ಸೆಲ್ ತಿಂಡಿ ತುಂಬಿಸುತ್ತದೆ ಎಂಬುದನ್ನು ಮರೆಯಬೇಡಿ… ಝೋಮಟೋ, ಸ್ವಿಗ್ಗಿ ಗಳ ಪಾರ್ಸೆಲ್ ವಿತರಕನ್ನು ಕಳ್ಳರಂತೆ ಟ್ರೀಟ್ ಮಾಡಬೇಡಿ. ಈ ಬಗ್ಗೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

ಇತ್ತೀಚಿನ ಸುದ್ದಿ

ಜಾಹೀರಾತು