11:34 AM Wednesday9 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಕರ್ಫ್ಯೂ ಹೆಸರಿನಲ್ಲಿ ಹೊಟ್ಟೆಗೆ ಹೊಡೆಯಬೇಡಿ ಸ್ವಾಮಿ: ಕೊರೊನಾಕ್ಕಿಂತಲೂ ಹಸಿವು ಭಯಾನಕ ನೆನಪಿರಲಿ

08/01/2022, 09:43

ಸಾಂದರ್ಭಿಕ ಚಿತ್ರ
ಮಂಗಳೂರು(reporterkarnataka.com): ರಾಜ್ಯದಲ್ಲಿ ಒಮಿಕ್ರೋನ್ ಹಾವಳಿ ಹೆಚ್ಚಾಗುತ್ತಿರುದರ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಮಂಗಳೂರಿನಲ್ಲಿಯೂ ಜಾರಿಗೊಳಿಸಲಾಗಿದ್ದು, ಹೊಟ್ಟೆಪಾಡಿಗಾಗಿ ದುಡಿಯುವ ಮಂದಿಗೆ ಯಾವುದೇ ತೊಂದರೆ ಕೊಡದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿನಂತಿಸಿದ್ದಾರೆ.

ಕೆಲವು ಕಡೆಗಳಲ್ಲಿ ಅನಗತ್ಯ ವಾಹನಗಳ ಓಡಾಟ ತಪಾಸಣೆ ಕಂಡು ಬಂತು. ಇದರ ಜತೆಯಲ್ಲೇ.ಹೋಟೆಲ್ ಗಳಲ್ಲಿ ರಾತ್ರಿ ಪಾಳಿಯಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡುವ ಹೋಟೆಲ್ ಸಿಬ್ಬಂದಿಗಳನ್ನು ಪೊಲೀಸರು ತಡೆದು, ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಗದರಿಸಲಾಗಿದೆ. ಒಂದೇ ಬೈಕ್ ನಲ್ಲಿ ಇದ್ದ ಇಬ್ಬರಲ್ಲಿ,( ಸಹ ಸವಾರನ್ನು ಡ್ರಾಪ್ ನೀಡಲು ಬಂದಿದ್ದು) ಒಬ್ಬನನ್ನು ನಡೆದಿಕೊಂಡು  ಹೋಗು ಎಂದು ಕಾನ್ಸ್ಟೇಬಲ್ ಎಂದು ಬೆದರಿಸಿದ್ದು, ಕೊನೆಗೂ. ಎ.ಎಸ್.ಐ ಯಲ್ಲಿ ಯುವಕರು ಬೇಡಿಕೊಂಡಿದ್ದು, ಕೊನೆಗೆ ಬಿಟ್ಟು ಬರಲು ಅನುಮತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಲ್ಲದೆ ನಾಳೆಯಿಂದ ಬೇಗಬರುವಂತೆ ತಾಕೀತು ಮಾಡಿದ್ದಾರೆ.ಪೊಲೀಸ್ ಕಾನ್ಸ್ಟೇಬಲ್ ಗಳೇ ನಿಮ್ಮಲ್ಲಿ ಕಿಂಚಿತ್ತೂ ಸೌಜನ್ಯತೆ ಇಲ್ಲವೇ? ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ತೆರಳುವವರ ಮೇಲೆ ನಿಮ್ಮ ದರ್ಪ ತೋರಿಸುವುದಲ್ಲ. ಎಲ್ಲರೂ ಅನಾವಶ್ಯಕವಾಗಿ ತಿರುಗಾಟ ಮಾಡುತ್ತಾರೆ ಎಂಬುದನ್ನು ಬಿಡಿ. ಹಾಗಿದ್ದರೆ ಹೋಟೆಲ್ ಗಳಿಗೆ ಸರಿಯಾದ ಸಮಯ ವಿಧಿಸಿ. ನಿಮ್ಮ ಹೊಟ್ಟೆಯನ್ನು ಕೂಡ ಅಂತಹದೇ ಹೋಟೆಲ್ ಗಳ ಪಾರ್ಸೆಲ್ ತಿಂಡಿ ತುಂಬಿಸುತ್ತದೆ ಎಂಬುದನ್ನು ಮರೆಯಬೇಡಿ… ಝೋಮಟೋ, ಸ್ವಿಗ್ಗಿ ಗಳ ಪಾರ್ಸೆಲ್ ವಿತರಕನ್ನು ಕಳ್ಳರಂತೆ ಟ್ರೀಟ್ ಮಾಡಬೇಡಿ. ಈ ಬಗ್ಗೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

ಇತ್ತೀಚಿನ ಸುದ್ದಿ

ಜಾಹೀರಾತು