11:33 PM Friday11 - April 2025
ಬ್ರೇಕಿಂಗ್ ನ್ಯೂಸ್
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್…

ಇತ್ತೀಚಿನ ಸುದ್ದಿ

ಶಾರದಾ ಕಾಲೇಜಿನಲ್ಲಿ ಏಳು ದಿನಗಳ ದೈನಂದಿನ ಚಟುವಟಿಕೆಗಳ ಕಾರ್ಯಗಾರ

04/01/2022, 16:06

ಮಂಗಳೂರು(reporterkarnataka.com): ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಸೇರಿದಂತೆ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏಳು ದಿನಗಳ ವಿಶೇಷ ಕಾರ್ಯಾಗಾರ ತಲಪಾಡಿ ಶಾರದ ಕಾಲೇಜಿನಲ್ಲಿ ನಡೆಯಿತು.

23-12-21ರಂದು ಡಾ.ಸಂದೀಪ್ ಬೇಕಲ್ ಕ್ರಿಯಾ ಶರೀರ ವಿಭಾಗ, ಶಾರದಾ ಆಯುರ್ವೇದ ಕಾಲೇಜು ತಲಪಾಡಿ. ಇವರು ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.


24-12- 21ರಂದು ಕೋವಿಡ್ ಮುಂಜಾಗ್ರತ ಎಚ್ಚರಿಕೆ ಹಾಗೂ ಕ್ರಮಗಳ ಬಗ್ಗೆ ಸಮೀಕ್ಷೆ ಮೂಲಕ ಜನ ಜಾಗೃತಿಯನ್ನು ಗ್ರಾಮದ ಜನರಿಗೆ ನೀಡಿದರು.
27-12-21ರಂದು ಶ್ರೀಮತಿ ಅರುಣಾ ಕಣ್ಣನ್ ದೈಹಿಕ ಶಿಕ್ಷಕರು ಶಾರದಾ ವಿದ್ಯಾನಿಕೇತನ ತಲಪಾಡಿ. ಇವರು ವಿದ್ಯಾರ್ಥಿಗಳಲ್ಲಿ ಸ್ವಯಂ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.


28-12-21ರಂದು ಡಾ.ಸ್ವಪ್ನ ಡಿ. ಸಂಹಿತ ಸಿದ್ಧಾಂತ, ಶಾರದಾ ಆಯುರ್ವೇದ ಕಾಲೇಜು ಇವರು. ಸಮತೋಲನ ಆಹಾರದ ಬಗೆಗಿನ ಮಾಹಿತಿಯನ್ನು ನೀಡಿದರು. ಹಾಗೂ 7 ದಿನಗಳ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಕಾಲೇಜಿನ ಸ್ವಚ್ಛತಾ ಕಾರ್ಯಕ್ರಮ, ಶಾಲಾ ಕೈತೋಟ ನಿರ್ಮಾಣ, ಹಾಗೂ ಉಪಹಾರಗೃಹದಲ್ಲಿ ಚಿತ್ರಕಲೆಯ ಮೂಲಕ ಸ್ವಚ್ಛತ ಅಭಿಯಾನದ ಬರಹವನ್ನು ಬರೆದರು.


31-12-21ರಂದು ಮಂಜುನಾಥ್ ಮಲೆನಾಡು ಕಲೆ ಮತ್ತು ಕರಕುಶಲ ವಿಭಾಗ ಶಾರದ ವಿದ್ಯಾನಿಕೇತನ ತಲಪಾಡಿ. ಇವರು ಪೌರಾಣಿಕ ಕಥಾ ಭಾಗದ ತುಣುಕನ್ನು ಅಭಿನಯಿಸಿ ತೋರಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿ ಮತ್ತು ಸುರಕ್ಷತೆಯ ಬಗ್ಗೆ ಶ್ರೀ ಸತ್ಯಜಿತ್ ಫಸ್ಟ್ ನ್ಯೂರೋ ಆಸ್ಪತ್ರೆ ಇವರು ಮಾಹಿತಿ ನೀಡಿದರು.






ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಡಾ.ಮೀನಾ ಜೆ ಪಣಿಕ್ಕರ್ ಇವರು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಸೂರಾಜ್ ಎಂ ದೇವಾಡಿಗ, ಅಮಿತ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾರ್ಯದರ್ಶಿಗಳಾದ ಶ್ರವಣ್ ಆಚಾರ್ಯ, ಮತ್ತು ದಿಶಾ ಕೆ.ಬಿ. ಕಾರ್ಯಕ್ರಮವನ್ನು ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು