5:13 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಡಿಸೆಂಬರ್ ತಿಂಗಳ ಟಾಪರ್ ಆಗಿ ಭೂಮಿಕಾ ಆರ್. ಶೆಟ್ಟಿ ಹಾಗೂ ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್ ಆಯ್ಕೆ

30/12/2021, 22:36

ಮಂಗಳೂರು(reporterkarnataka news): ‘ಆರದಿರಲಿ ಬದುಕು ಆರಾಧನಾ’ ಸಂಸ್ಥೆಯು ರಾಜ್ಯಮಟ್ಟದ ಕನ್ನಡ ಡಿಜಿಟಲ್ ಪತ್ರಿಕೆ ‘ರಿಪೋರ್ಟರ್ ಕರ್ನಾಟಕ’ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ಭೂಮಿಕಾ ಆರ್. ಶೆಟ್ಟಿ ಹಾಗೂ ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್ ಆಯ್ಕೆಗೊಂಡಿದ್ದಾರೆ.

ಭೂಮಿಕಾ ಆರ್.ಶೆಟ್ಟಿ ಅವರು ಸರಕಾರಿ ಉದ್ಯೋಗಿ ರವೀಂದ್ರನಾಥ ಶೆಟ್ಟಿ ಹಾಗೂ ಉಜ್ವಲಾ ಆರ್. ಶೆಟ್ಟಿ ಅವರ ಪುತ್ರಿ. ಕಾಸರಗೋಡಿನ ಸಸಿಹಿತ್ಲು-ಶಿವ ಭೂಮಿ ನೆಟ್ಟಣಿಗೆಯ ನಿವಾಸಿ.


21ರ ಹರೆಯದ ಭೂಮಿಕಾ ಅವರು ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಡಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಂಗೀತ ಗುರು ಬಾಲಸುಬ್ರಹ್ಮಣ್ಯಂ ಭಟ್ ಕೋಳಿಕ್ಕಜೆ ಅವರಿಂದ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ವಾನ್ ಬಾಲಕೃಷ್ಣ. ಮಂಜೇಶ್ವರ ಅವರಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ  ಸೀನಿಯರ್ ಗ್ರೇಡ್ ಆಗಿದೆ. ಈಗ ವಿದ್ವತ್ ಅಭ್ಯಾಸ ಮಾಡುತ್ತಿದ್ದಾರೆ.

ಚಿಕ್ಕಂದಿನಿಂದಲೇ ಸಂಗೀತ, ಭರತನಾಟ್ಯ,ಚಿತ್ರ ಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಹಲವಾರು ಕಡೆಗಳಲ್ಲಿ ಗುರುಗಳ ಜೊತೆ ಸಂಗೀತ ಕಾಯ೯ಕ್ರಮ ನೀಡಿದ್ದಾರೆ. 230ಕ್ಕೂ ಹೆಚ್ಚು ಭರತನಾಟ್ಯ ಕಾರ್ಯಕ್ರಮ ನೀಡಿದ್ದಾರೆ.

ಇನ್ನು ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್, ವಿನಯ್ ಎಂ. ಎಸ್. ಹಾಗೂ ಭವ್ಯಶ್ರೀ ಕೆ. ಎಸ್. ಅವರ ಪುತ್ರ. ಮೂಡಬಿದಿರೆಯ ಕಾರ್ಮೆಲ್ ಸ್ಕೂಲ್ ನಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಹಾಡುವುದು, ನೃತ್ಯ ಮಾಡುವುದು, ಓದುವುದು, ಚಿತ್ರ ಬಿಡಿಸುವುದು ಈತನಿಗೆ ತುಂಬಾ ಇಷ್ಟ.

ಕೃಷ್ಣ ವೇಷ ಸ್ಪರ್ಧೆಯಲ್ಲಿ 3 ಬಾರಿ ಬಹುಮಾನ ಗೆದ್ದಿದ್ದಾನೆ ಈ ಪೋರ. ಸಂಗೀತದಲ್ಲಿ(ಭಾವಗೀತೆ, ಭಕ್ತಿ ಗೀತೆ ಸ್ಪರ್ಧೆ, ದೇಶ ಭಕ್ತಿ ಗೀತೆ) 5 ಬಾರಿ ಭಾಗವಹಿಸಿ, 3 ಬಹುಮಾನ ಪಡೆದಿದ್ದಾನೆ. ಛದ್ಮವೇಷ ಸ್ಪರ್ಧೆ(6 ಬಾರಿ ಬಹುಮಾನ),

ನೃತ್ಯ ಸ್ಪರ್ಧೆ(2ಬಾರಿ ಬಹುಮಾನ), ಕ್ರಾಫ್ಟ್ ಮೇಕಿಂಗ್(ಕಾರ್ಡ್, ಕೈಟ್, ಗ್ರೀಟಿಂಗ್ ಕಾರ್ಡ್, ಬ್ಯಾಗ್ ಮೇಕಿಂಗ್)(4 ಬಹುಮಾನ), ಮುದ್ದು ಶಾರದೆ ಸ್ಪರ್ಧೆ(1 ಬಾರಿ ಬಹುಮಾನ) ಪಡೆದಿದ್ದಾನೆ.

ಕಂಠ ಪಾಠ ಸ್ಪರ್ಧೆ; ನೇಷನಲ್ ಅನಲೇಟಿಕಲ್ ಬ್ರೈನ್ ಅಂಡ್ ಮಾಥ್ಸ್,-ಸೈನ್ಸ್,-ಇಂಗ್ಲೀಷ್ ಒಲಿಂಪಿಯಾಡ್ ಸ್ಪರ್ಧೆಗಳು (2021, ಚಾಂಪಿಯನ್ runner up, 2020 ನಲ್ಲಿ excellent ಗ್ರೇಡ್ ಗಳಿಕೆ), ಚಿತ್ರಕಲೆ(9 ಬಾರಿ ಭಾಗವಹಿಸಿದರಲ್ಲಿ, 6 ಬಾರಿ ಬಹುಮಾನ), ಕ್ರೀಡೆ (1 ಬಹುಮಾನ), ಶಾಲಾ ಮಟ್ಟದ ಇತರ ಸ್ಪರ್ಧೆಗಳು(ಹ್ಯಾಂಡ್ ರೈಟಿಂಗ್, ಕರಾಟೆ, memory test, ರಿಸೈಟೇಷನ್ etc..)(4 ಬಹುಮಾನ), ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 33 ಬಹುಮಾನ ಗಳಿಸಿದ್ದಾನೆ. ಇದರೊಂದಿಗೆ Parenting nation ರಾಜ್ಯಮಟ್ಟದ baby ಫೋಟೋ ಕಾಂಟೆಸ್ಟ್ ನಲ್ಲಿ  2017ರ ವಿಜೇತನಾಗಿದ್ದಾನೆ.

ವಾಯ್ಸ್ ಆಫ್ ಆರಾಧನಾ ವೇದಿಕೆಯಡಿ ಮಕ್ಕಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಜೊತೆಗೆ  3 ಬಾರಿ ಲೈವ್ ಪ್ರೋಗ್ರಾಂ ಹಾಗೂ ಕನಸುಗಳ ಇನ್ಫಿನಿಟಿ ಕಥಾ ಚಾಲೆಂಜ್ ನಲ್ಲಿ 1ಬಾರಿ ಲೈವ್ ಪ್ರೋಗ್ರಾಂ ನೀಡಿದ್ದಾನೆ. *Archith Moodbidri* ಎಂಬ ಸ್ವಂತ YouTube channel nalli ಕೂಡ ತನ್ನ ವಿಡಿಯೋಗಳ ಮೂಲಕ ಪ್ರತಿಭಾ ಅನಾವರಣ ಮಾಡಿರುತ್ತಾನೆ. ಜೊತೆಗೆ, ಶೈಕ್ಷಣಿಕವಾಗಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾನೆ.

ಇತ್ತೀಚಿನ ಸುದ್ದಿ

ಜಾಹೀರಾತು