3:56 PM Sunday1 - February 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಕೋಪ ಬಂದಾಗಲೆಲ್ಲ ಗೋಡೆಗೆ ಮೊಳೆ ಹೊಡಿ: ಸಿಡುಕಿನ ಪುತ್ರನಿಗೆ ಅಪ್ಪ ಮಾಡಿದ ಉಪದೇಶ

01/06/2021, 18:36

ಯುವಚಿಂತನ
ಒಮ್ಮೆ ಒಬ್ಬ ಬಹು ಸಿಡುಕಿನ ಹುಡುಗನಿದ್ದ. ಅವನಿಗೆ ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಕೋಪ. ಅವನ ಕೋಪದಿಂದ ಅವನಿಗೇ ತೊಂದರೆಯಾಗುತ್ತಿತ್ತು. ಆದರೆ ಅದರಿಂದ ಹೊರಬರಲಾಗುತ್ತಿರಲಿಲ್ಲ.

ಆ ಹುಡುಗ ತನ್ನ ತಂದೆಯ ಬಳಿ ಇದಕ್ಕೆ ಒಂದು ಪರಿಹಾರವನ್ನು ಕೇಳಿದ. ತಂದೆ ಹೇಳಿದರು ‘ಮಗನೇ, ನಾನು ಒಂದು ಸಲಹೆಯನ್ನು ಕೊಡುತ್ತೇನೆ. ಪ್ರತಿ ಬಾರಿ ಕೋಪ ಬರುವಾಗ ಒಂದು ಮೊಳೆಯನ್ನು ಗೋಡೆಗೆ ಹೊಡೆ. ಬೇರೆ ಏನನ್ನೂ ಮಾಡಬೇಡ’.

ಮಗನು ತನ್ನ ತಂದೆಯ ಮಾತನ್ನು ಅನುಸರಿಸಲು ಪ್ರಯತ್ನ ಮಾಡಿದ. ಪ್ರತೀ ಬಾರಿ ಕೋಪ ಬರುವಾಗ ಒಂದು ಮೊಳೆಯನ್ನು ಗೋಡೆಗೆ ಬಡಿದ. ಮೊದಲ ದಿನ ಮೂವತ್ತು ಮೊಳೆಗಳು ಗೋಡೆಯನ್ನೇರಿದವು. ದಿನದಿಂದ ದಿನಕ್ಕೆ ಅದರ ಲೆಕ್ಕ ಕಡಿಮೆ ಆಯಿತು. ಹೀಗೆ ಒಂದು ತಿಂಗಳು ಕಳೆಯುವಾಗ ಒಂದು ಪೂರ್ತಿ ಗೋಡೆಯು ಮೊಳೆಗಳಿಂದ ತುಂಬಿತ್ತು ಮತ್ತು ಅವನ ಕೋಪವೂ ಬಹುಪಾಲು ಕಮ್ಮಿ ಆಗಿತ್ತು. ಏಕೆಂದರೆ ಮೊಳೆ ಹೊಡೆಯುವುದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಸುಲಭ ಅನ್ನಿಸಿತ್ತು. ಅದನ್ನು ತನ್ನ ತಂದೆಯ ಬಳಿ ಹೇಳಿದ. ತಂದೆ ಹೇಳಿದರು ‘ ಮಗನೇ, ಇನ್ನು ಮುಂದೆ ಪ್ರತೀ ಬಾರಿ ಕೋಪ ಬಂದು ಅದನ್ನು ನಿಯಂತ್ರಿಸಿಕೊಳ್ಳುವಾಗ ಹೊಡೆದಿರುವ ಒಂದೊಂದು ಮೊಳೆಯನ್ನು ಗೋಡೆಯಿಂದ ತೆಗೆ.

ಹೀಗೆ ಎರಡು ತಿಂಗಳು ಕಳೆಯುವಾಗ ಗೋಡೆಯಲ್ಲಿರುವ ಎಲ್ಲಾ ಮೊಳೆಗಳು ಖಾಲಿಯಾದವು. ಹಾಗೂ ಹುಡುಗನ ಕೋಪವೂ ಕಮ್ಮಿಯಾಯಿತು. ಬಲು ಖುಷಿಯಿಂದ ಹುಡುಗ ತನ್ನ ತಂದೆಗೆ ಗೋಡೆಯನ್ನು ತೋರಿಸಿದ.ಆಗ ತಂದೆ ಮಗನಿಗೆ ಮನ ಮುಟ್ಟುವಂತೆ ಒಂದು ಮಾತನ್ನು ಹೇಳಿದರು ‘ ಮಗನೇ, ಈ ಗೋಡೆಯನ್ನು ನೋಡು. ಅದರಲ್ಲಿ ಆಗಿರುವ ರಂಧ್ರಗಳು ನೀನು ಮಾಡಿರುವ ಮೊದಲ ತಪ್ಪುಗಳನ್ನು ತೋರಿಸುತ್ತಿವೆ. ಕೋಪದಿಂದ ಆಗುವ ಅನಾಹುತವೂ ಹಾಗೆಯೇ. ಆಡಿದ ಮಾತು, ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುತ್ತವೆ ಮತ್ತು ಜೀವನ ಪೂರ್ತಿಯೂ ಕಾಡುತ್ತಿರುತ್ತವೆ. ನಂತರ ಪ್ರಾಯಶ್ಚಿತ್ತ ಪಟ್ಟು ಪ್ರಯೋಜನವಿಲ್ಲ “. ಹುಡುಗನಿಗೆ ತನ್ನ ತಪ್ಪಿನ ಅರಿವಾಯಿತು.

ಕ್ರೋಧೋ ಮೂಲಂ ಅನರ್ಥಾನಾಮ್, ಕ್ರೋಧಃ ಸಂಸಾರ ಬಂಧನಮ್, ಧರ್ಮಕ್ಷಯಕರಃ ಕ್ರೋಧಃ, ತಸ್ಮಾತ್ ಕ್ರೋಧಮ್ ವಿವರ್ಜಯೇತ್ ” ಅಂದರೆ ಕೋಪವು ಎಲ್ಲಾ ಅನಾಹುತಗಳಿಗೂ ಮೂಲ ಕಾರಣ. ಕೋಪವು ಸಂಸಾರ ಬಂಧನಕ್ಕೂ, ಧರ್ಮ ನಾಶಕ್ಕೂ ಕಾರಣೀಭೂತ. ಅದಕ್ಕೋಸ್ಕರ ಕೋಪವನ್ನು ತ್ಯಜಿಸಬೇಕು ಎಂಬ ಸಂಸ್ಕೃತದ ನುಡಿಯು ಅರ್ಥಗರ್ಭಿತವಾದದ್ದು,

ಈ ಮೇಲಿನ ಕಥೆಯು ಕೋಪ ಮಾತ್ರವಲ್ಲದೇ, ಯುವಜನತೆಗೆ ಯಾವುದೇ ದುರಭ್ಯಾಸಗಳು ಹೇಗೆ ದುಷ್ಪರಿಣಾಮ ಬೀಳಬಹುದೆಂದು ಮಾರ್ಮಿಕವಾಗಿ ತಿಳಿಸುತ್ತದೆ. ಕುಡಿತ, ಮಾದಕ ವ್ಯಸನ, ತಂಬಾಕು ಸೇವನೆ, ಸುಳ್ಳು ಹೇಳುವುದು ಯಾವುದೇ ಕೆಟ್ಟ ಚಟಗಳಿಗೆ ಬಿದ್ದರೆ ಅದರಿಂದ ಹೊರ ಬರುವುದು ತುಂಬಾ ಕಷ್ಟ ಹಾಗೂ ಹೊರ ಬಂದ ಮೇಲೆಯೂ ಅದರ ಪರಿಣಾಮಗಳು ಜೀವನದುದ್ದಕ್ಕೂ ಇರುತ್ತವೆ. ಇದನ್ನು ಅರಿತವರು ಒಳ್ಳೆಯ ಮಾರ್ಗದಲ್ಲಿ ಸಂಸ್ಕಾರಯುತರಾಗಿ ಬಾಳಬಹುದು ಎಂಬುದೇ ಇದರ ಸಂದೇಶ.

 ಪ್ರತಿಜ್ಞಾ ಸುಹಾಸಿನಿ  

ಪ್ರಾಂಶುಪಾಲರು ಮಂಗಳ ಕಾಲೇಜು

ಇತ್ತೀಚಿನ ಸುದ್ದಿ

ಜಾಹೀರಾತು