2:42 AM Thursday19 - March 2026
ಬ್ರೇಕಿಂಗ್ ನ್ಯೂಸ್
Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು…

ಇತ್ತೀಚಿನ ಸುದ್ದಿ

ಹಿರಿಯ ಪತ್ರಕರ್ತ ವಾಗೀಶ್ ಇನ್ನಿಲ್ಲ: ನೇರ ನಡೆ- ನುಡಿಯ ಮಿತ್ರ ಇನ್ನು ನೆನಪು ಮಾತ್ರ

07/12/2021, 22:32

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ವಾಗೀಶ್ ….
ನನ್ನ ಮಿತ್ರ ಹಾಗೂ ಜನವಾಹಿನಿಯಲ್ಲಿ ನನ್ನ ಸಹೋದ್ಯೋಗಿ.

ಜನವಾಹಿನಿಯಲ್ಲಿ ನಾನು ವಿದೇಶಿ ಪುಟ ನೋಡಿಕೊಳ್ಳುತ್ತಿದ್ದಾಗ ವಾಗೀಶ್ ನಮ್ಗೆ ಪೇಜ್ ಮಾಡಿಕೊಡುತ್ತಿದ್ದರು. ನಂಗೆ ತಿಂಗಳಲ್ಲಿ ಎರಡು ವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ಪಾಳಿ ಇತ್ತು. ಸತ್ಯಾ, ರೇಶ್ಮಾ, ರೋಹಿಣಿ, ಜಗದೀಶ ಮಣಿಯಾಣಿ, ಮೇರಿ ಜೋಸೆಫ್ ನಮ್ಮ ಶಿಫ್ಟ್ ನಲ್ಲಿ ಇದ್ದರು. ವಾಗೀಶ್ ಸುಂದರವಾದ ಪುಟ ಕಟ್ಟಿಕೊಡುತ್ತಿದ್ದರು.

ಪಿಟಿಐ, ಯುಎನ್ ಐನಿಂದ ವಿದೇಶಿ ಸುದ್ದಿಗಳನ್ನು ಆಯ್ದು ಕನ್ನಡಕ್ಕೆ ಭಾಷಾಂತರ ಮಾಡಿ, ಹೆಡ್ಡಿಂಗ್

ಕೊಟ್ಟು ಪೇಜ್ ಸಿದ್ಧಪಡಿಸುತ್ತಿದ್ದೆವು. ಸಂಜೆ 6 ಗಂಟೆಗೆ ಗುರುಗಳಾದ ನಿಖಿಲ್ ಕೊಲ್ಪೆ ಅಥವಾ ಲೋಕೇಶ್ ಕಾಯರ್ಗ ಅವರು ಬಂದು ಪೇಜ್ ಫೈನಲ್ ಮಾಡುತ್ತಿದ್ದರು. 

ವಾಗೀಶ್ ಪೇಜ್ ಮಾಡುವ ಜತೆಗೆ ಬಿಡುವಿನ ಸಮಯದಲ್ಲಿ ಕೆಲವು ಟ್ರಾನ್ಸ್ ಲೇಶನ್ ಕೂಡ ಮಾಡಿಕೊಡುತ್ತಿದ್ದರು. ಕೆಲಸ ನಡುವಿನಲ್ಲಿ ಸೀರಿಯಸ್ ಜೋಕ್ಸ್ ಹೇಳುವುದು, ಚಟಾಕಿ

ಹಾರಿಸುವುದು, ಹಾಡು ಗುಣುಗುವುದು ವಾಗೀಶ್ ಕಡೆಯಿಂದ ಆಗಾಗ ನಡೆಯುತ್ತಿತ್ತು. ‘ಕಿಡಿಗೇಡಿ ಮನುಷ್ಯ’ ಅಂತಲೇ ನಾವು ಅವರನ್ನು ಕರೆಯುತ್ತಿದ್ದೆವು. 

ನಾನು ವಿಜಯ ಕರ್ನಾಟಕದಿಂದ ನಿರ್ಗಮಿಸುವ ಮುನ್ನ ಒಂದೆರಡು ಬಾರಿ ನಂಗೆ ಕರೆ ಮಾಡಿ ಮಾತನಾಡಿದ್ದರು. ಪತ್ರಿಕೆಯಲ್ಲಿ ನಡೆಯುತ್ತಿದ್ದ ಲಾಬಿ, ಜಾಹೀರಾತು ವಿಭಾಗದ ಪ್ರಭಾವ, ಬಕೆಟ್ ಸಂಸ್ಕೃತಿ, ಎಲ್ಲ ಬ್ಯುರೋಗಳ ಸ್ಥಾನೀಯ ಸಂಪಾದಕರು ಬದಲಾದರೂ ಒಂದು ಬ್ಯುರೋದ ಮುಖ್ಯಸ್ಥರು ಕುರ್ಚಿಗಂಟಿಕೊಂಡ ಬಗ್ಗೆ ಚರ್ಚಿಸುತ್ತಿದ್ದೆವು. ನಾನು ವಿಜಯ ಕರ್ನಾಟಕದಿಂದ ಹೊರ ಬಂದು ‘ರಿಪೋರ್ಟರ್ ಕರ್ನಾಟಕ’ ಶುರು ಮಾಡಿದಾಗ ಸಂಭ್ರಮಿಸಿದ ಗೆಳೆಯರಲ್ಲಿ ವಾಗೀಶ್ ಪ್ರಮುಖರು.

ವಾಗೀಶ್ …ಏನಿದ್ದರೂ ನೇರ ನಡೆ- ನುಡಿಯ ವ್ಯಕ್ತಿ. 

ಸ್ವಯಂ ಪರಿಶ್ರಮದಿಂದ ಮೇಲೆ ಬಂದವರು. ಯಾರೇ ತಪ್ಪು ಮಾಡಿದರೂ ಯಾವುದೇ ಮುಲಾಜಿಯಿಲ್ಲದೆ ನೇರವಾಗಿ ಬೊಟ್ಟು ಮಾಡಿ ತೋರಿಸುತ್ತಿದ್ದರು. ಹಾಗೆ ತನ್ನಿಂದ ತಪ್ಪಾದರೂ ತಕ್ಷಣವೇ ಒಪ್ಪಿಕೊಳ್ಳುತ್ತಿದ್ದರು. ನಾನು ವಿಜಯ ಕರ್ನಾಟಕ ಮಂಗಳೂರು ಬ್ಯುರೋದಲ್ಲಿದ್ದಾಗ ಆಡಳಿತ ಮಂಡಳಿಯ ಕೆಲವು ಧೋರಣೆಗಳನ್ನು ಸ್ಥಾನೀಯ ಸಂಪಾದಕರು ನಮ್ಮ ಮೇಲೆ ಹೇರುತ್ತಿದ್ದಾಗ ನಾನು ಅದೆಷ್ಟೋ ಬಾರಿ ವಿರೋಧಿಸಿದ್ದೆ. ವರದಿಗಾರರು ಜಾಹೀರಾತು ತರಬೇಕೆಂದು ಸ್ಥಾನೀಯ ಸಂಪಾದಕರು ಹೇಳಿದಾಗ, ಮತ್ತೆ advertisement executive ಗಳಿಗೆ ಏನು ಕೆಲಸ ಎಂದು ನಾನು ಪ್ರಶ್ನಿಸಿದ್ದೆ. ಆಡಳಿತ ಮಂಡಳಿಯ ಇಂತಹ ಹಲವು ಪತ್ರಕರ್ತ ವಿರೋಧಿ ನಿಲುವನ್ನು ನಾನು ಪ್ರಶ್ನಿಸಿದಾಗ, ನಾನು ಎತ್ತಿದ ಪ್ರಶ್ನೆ ನೈಜವಾದದ್ದು ಎಂಬ ಅರಿವಿದ್ದರೂ ನಮ್ಮ ತಂಡದ ವರದಿಗಾರರು ಯಾರೂ ನಂಗೆ ಧ್ವನಿ ಸೇರಿಸುವ ಧೈರ್ಯ ತೋರಿಸಲಿಲ್ಲ. ಬದಲಿಗೆ ನಾನೊಬ್ಬನೇ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಇಂತಹ ಸಂದರ್ಭದಲ್ಲಿ ನೆನಪಿಗೆ ಬರುತ್ತಿದ್ದವರು ಲೋಕೇಶ್ ಕಾಯರ್ಗ ಮತ್ತು ವಾಗೀಶ್ ಮಾತ್ರ. 

ಅಸ್ತಿತ್ವಕ್ಕಾಗಿ ಕೆಲಸ ತೆಗೆಸಿಕೊಟ್ಟವರನ್ನೇ ಕೆಲಸದಿಂದ ತೆಗೆಸಿದ ವ್ಯಕ್ತಿಗಳ ನಡುವೆ ಸತ್ಯ ಹೇಳುವ ಮತ್ತು ಅನ್ಯಾಯ ವಿರೋಧಿಸುವ ಧೈರ್ಯ ಕಾಯರ್ಗ ಮತ್ತು ವಾಗೀಶ್ ಅವರಿಬ್ಬರಿಗೆ ಮಾತ್ರ ಇತ್ತು. ಅದೇ ಕಾರಣಕ್ಕೆ ವಾಗೀಶ್  ನಂಗೆ ಹೆಚ್ಚು ಆತ್ಮೀಯರಾಗಿದ್ದರು. ಇದೀಗ ಅವರಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು