10:17 PM Saturday2 - August 2025
ಬ್ರೇಕಿಂಗ್ ನ್ಯೂಸ್
SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ…

ಇತ್ತೀಚಿನ ಸುದ್ದಿ

ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಬೊಕ್ಕಸವನ್ನು‌ ತುಂಬಿಸುವುದನ್ನು ಬಿಟ್ಟು, ಬಡ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ: ಸವಾದ್ ಸುಳ್ಯ

30/05/2021, 21:39

ಮಂಗಳೂರು(reporterkarnatakanews): ದೇಶದಾದ್ಯಂತ ಕೊರೊನ ಅಟ್ಟಹಾಸ ಮಾನವ ಸಂಕುಲವನ್ನು ತಲ್ಲಣಗೊಳಿಸಿದ್ದರೆ ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ಇದರ ಪರಿವೇ ಇಲ್ಲದಂತೆ ವರ್ತಿಸುತ್ತಿದೆ.ಕಳೆದ ಒಂದು ವರ್ಷವಿಡೀ ಕೇವಲ ಆನ್ ಲೈನ್ ಕ್ಲಾಸ್ ನಡೆಸುವ ಮೂಲಕ ಬಡ ಪೋಷಕರ ಹಣವನ್ನು ಸುಲಿಗೆ ಮಾಡಿ ಅವರ ಜೋಳಿಗೆಯನ್ನು ತುಂಬಿಸಿಕೊಂಡರು.ಫೀಸ್ ಕಟ್ಟದವರನ್ನು ಆನ್ ಲೈನ್ ಕ್ಲಾಸ್ ಗಳಿಗೆ ಕೂಡ ತೆಗೆಯುತ್ತಿಲ್ಲ, ಆದರೆ ಈ ಬಡ ಪೋಷಕರು ಈ ಹಣವನ್ನು ಎಲ್ಲಿಂದ ಭರಿಸುವರೆಂದು ತಿಳಿದುಕೊಳ್ಳುವ ಒಂದು ಸಣ್ಣ ಮನಸ್ಸನ್ನು ಕೂಡ ಇವರು ತೋರಲಿಲ್ಲ. ಇದೀಗ ಕೋವಿಡ್ ಎರಡನೆಯ ಅಲೆ ಲಕ್ಷಾಂತರ ಮನುಷ್ಯ ಜೀವದ ಪ್ರಾಣವನ್ನೇ ತೆಗೆದಿದ್ದರೆ, ಈ ಖಾಸಗಿ ಶಾಲೆಗಳು ಮತ್ತೊಮ್ಮೆ ತಮ್ಮ ಬೊಕ್ಕಸ ತುಂಬಿಸುವ ಪ್ರವೃತಿಯನ್ನು ಪ್ರಾರಂಭಿಸಿದೆ. ಮಕ್ಕಳು ಕಳೆದ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದರೂ, ಮತ್ತೊಮ್ಮೆ ಆನ್ ಲೈನ್ ಕ್ಲಾಸ್ ಎಂಬ ಸಮಜಾಯಿಷಿ ನೀಡಿ, ಶಾಲೆಯ ಫೀಸು ಕಟ್ಟಲು ಮೊಬೈಲ್ ಗಳಲ್ಲಿ ಟೆಕ್ಸ್ಟ್ ಮೆಸೇಜ್ ಗಳ ಯುದ್ಧವನ್ನು ಆರಂಭಿಸಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದ ಪರಿಸ್ಥಿತಿ ಈ ಕೊರೊನ ಕಾಲದಲ್ಲಿ ಅರಿತವರಿಗೆ ‌ಗೊತ್ತು.ವ್ಯಾಪಾರ,‌ ವ್ಯವಹಾರ ಇಲ್ಲ. ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಈ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಳುಹಿಸುವ ಶಿಕ್ಷಣ ಸಂಸ್ಥೆಗಳ ಫೀಸು, ಡೊನೇಷನ್ ಕಟ್ಟಲು ಸಾದ್ಯವೇ?. ಹಲವಾರು ‌ಶಿಕ್ಷಣ ಸಂಸ್ಥೆಗಳು ಹೆಚ್ಚಿನ ವರಮಾನ ತರುವ ಸಂಸ್ಥೆ ಗಳನ್ನು ಹೊಂದಿರುವ ಮ್ಯಾನೇಜ್ ಮೆಂಟ್ ಗೆ ಪ್ರಸ್ತುತ ಸಂದರ್ಭದಲ್ಲಿ ತಮ್ಮ ಒಂದು ವರ್ಷದ ಫೀಸ್ ನ್ನು ಮನ್ನಾ ಮಾಡುವ ಸಹ್ರೃದಯ ಇಲ್ಲದೇ ಹೋದದ್ದು ವಿಪರ್ಯಾಸವೇ ಸರಿ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು, ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಆಗ್ರಹಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು