3:10 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಪ್ರತಿ ದಿನವೂ ಮಕ್ಕಳ ದಿನವೇ: ಚಿಣ್ಣರ ಕಲರವ ಎಲ್ಲೆಡೆ ಕೇಳುತ್ತಿರಲಿಲ್ಲ

14/11/2021, 09:38

ಮಕ್ಕಳಿರಲಿ ಮನೆ ತುಂಬಾ… ಹರಡುತ್ತಿರಲಿ ನಗು ಹೃದಯ ತುಂಬಾ.. 

ಮನೆ ತುಂಬಾ ಓಡಾಡುವ ಮಕ್ಕಳ ಕಿಲ ಕಿಲ ನಗುವಿನ ಶಬ್ದ , ಆಗಾಗ ಕಿವಿಗೆ ಅಪ್ಪಳಿಸುವಂತೆ ಕೇಳುವ ಕಿರುಚಾಟ ,ಕೂಗಾಟ, ಮುದ್ದುಮುದ್ದು ಮಾತುಗಳನ್ನು ಕೇಳುವಾಗ ಆಗುವಂತಹ ಸಂತೋಷ ಹೇಳಲು ಅಸಾಧ್ಯ.


ಮಗುವಿನ ಸುಂದರ ಮೊಗ ನೋಡುವಾಗ ಮನಸ್ಸಿಗೆ ಆಗುವಂತಹ ಆನಂದ ವರ್ಣಿಸಲಸದಳ.. 


ಇಂತಹ ಮುದ್ದು ಮನಸಿನ ಮಗು ಮನೆಬಿಟ್ಟು ಶಾಲೆಗೆ ಸೇರಿದ ನಂತರ ಶಾಲೆಯಲ್ಲಿ  ಪಡೆಯುವ ಶಿಕ್ಷಣವು ಮಗುವಿನ ಜೀವನ ಗತಿಯನ್ನೇ ಬದಲಾಯಿಸುತ್ತದೆ.

ಶಾಲೆಯಲ್ಲಿ ಗೆಳೆಯರೊಂದಿಗೆ ಸೇರಿ ಸಹಕಾರ , ಸಹನೆ , ಸಹೋದರತೆ, ಶಿಕ್ಷಕರೊಂದಿಗೆ ಗುರು ಹಿರಿಯರೊಂದಿಗೆ ಗೌರವದಿಂದ ವರ್ತಿಸುವ ವಿಧಾನ ಎಲ್ಲವನ್ನೂ ಶಿಕ್ಷಣದಿಂದ ಕಲಿಯುತ್ತಾರೆ.

ನವೆಂಬರ್ 14 ಬಂತೆಂದರೆ ಮಕ್ಕಳ ಮನದಲ್ಲಿ ಸಂಭ್ರಮ ಮನೆ ಮಾಡುತ್ತದೆ. ಶಿಕ್ಷಕರು ತರಗತಿಗೆ ಹೋಗುವಾಗ ತಮ್ಮ ಮನದಿಂಗಿತವನ್ನು , ಆಶಯವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ದಿನಾಚರಣೆ ಆಚರಿಸುವ ಬಗ್ಗೆ ಕೇಳುತ್ತಾರೆ. ಮಕ್ಕಳ ದಿನಾಚರಣೆಯಂದು ಇಡೀ ದಿನ ಸಂತೋಷದಿಂದ ಕಳೆಯುತ್ತಾರೆ. ಆ ದಿನ ಮಕ್ಕಳ ಹಬ್ಬ , ಚಿಣ್ಣರ ಚಿಲಿಪಿಲಿ ಹೊಸ ಬಟ್ಟೆ ಹಾಕಿಕೊಂಡು  ಶಾಲೆಗೆ ಬರುವ ಸಂಭ್ರಮದ ಗುಂಗಿನಲ್ಲಿರುತ್ತಾರೆ ,

ಶಾಲೆಯಲ್ಲಿ ಆಟೋಟ ಸ್ಪರ್ಧೆಗಳು ಹಾಡು , ನೃತ್ಯ ಮಾಡುವುದರಿಂದ  ಬಹುಮಾನ ಪಡೆಯುವ ಮೂಲಕ ಸಂಭ್ರಮಿಸುತ್ತಾರೆ. ಎಲ್ಲರೊಂದಿಗೆ ಖುಷಿಯಿಂದ ಬೆರೆತು ಕಲಿತು ಸಂಭ್ರಮವನ್ನು ಆಚರಿಸುತ್ತಾರೆ.. ಈ ಸಂಭ್ರಮ ಕೇವಲ ಮಕ್ಕಳ ದಿನಾಚರಣೆಯಂದು ಮಾತ್ರ ಇರದೆ ಪ್ರತಿದಿನವೂ ಪ್ರತಿಕ್ಷಣವು ಇರಲಿ ಎಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು