5:16 PM Thursday18 - June 2026
ಬ್ರೇಕಿಂಗ್ ನ್ಯೂಸ್
ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು

ಇತ್ತೀಚಿನ ಸುದ್ದಿ

ಪ್ರತಿ ದಿನವೂ ಮಕ್ಕಳ ದಿನವೇ: ಚಿಣ್ಣರ ಕಲರವ ಎಲ್ಲೆಡೆ ಕೇಳುತ್ತಿರಲಿಲ್ಲ

14/11/2021, 09:38

ಮಕ್ಕಳಿರಲಿ ಮನೆ ತುಂಬಾ… ಹರಡುತ್ತಿರಲಿ ನಗು ಹೃದಯ ತುಂಬಾ.. 

ಮನೆ ತುಂಬಾ ಓಡಾಡುವ ಮಕ್ಕಳ ಕಿಲ ಕಿಲ ನಗುವಿನ ಶಬ್ದ , ಆಗಾಗ ಕಿವಿಗೆ ಅಪ್ಪಳಿಸುವಂತೆ ಕೇಳುವ ಕಿರುಚಾಟ ,ಕೂಗಾಟ, ಮುದ್ದುಮುದ್ದು ಮಾತುಗಳನ್ನು ಕೇಳುವಾಗ ಆಗುವಂತಹ ಸಂತೋಷ ಹೇಳಲು ಅಸಾಧ್ಯ.


ಮಗುವಿನ ಸುಂದರ ಮೊಗ ನೋಡುವಾಗ ಮನಸ್ಸಿಗೆ ಆಗುವಂತಹ ಆನಂದ ವರ್ಣಿಸಲಸದಳ.. 


ಇಂತಹ ಮುದ್ದು ಮನಸಿನ ಮಗು ಮನೆಬಿಟ್ಟು ಶಾಲೆಗೆ ಸೇರಿದ ನಂತರ ಶಾಲೆಯಲ್ಲಿ  ಪಡೆಯುವ ಶಿಕ್ಷಣವು ಮಗುವಿನ ಜೀವನ ಗತಿಯನ್ನೇ ಬದಲಾಯಿಸುತ್ತದೆ.

ಶಾಲೆಯಲ್ಲಿ ಗೆಳೆಯರೊಂದಿಗೆ ಸೇರಿ ಸಹಕಾರ , ಸಹನೆ , ಸಹೋದರತೆ, ಶಿಕ್ಷಕರೊಂದಿಗೆ ಗುರು ಹಿರಿಯರೊಂದಿಗೆ ಗೌರವದಿಂದ ವರ್ತಿಸುವ ವಿಧಾನ ಎಲ್ಲವನ್ನೂ ಶಿಕ್ಷಣದಿಂದ ಕಲಿಯುತ್ತಾರೆ.

ನವೆಂಬರ್ 14 ಬಂತೆಂದರೆ ಮಕ್ಕಳ ಮನದಲ್ಲಿ ಸಂಭ್ರಮ ಮನೆ ಮಾಡುತ್ತದೆ. ಶಿಕ್ಷಕರು ತರಗತಿಗೆ ಹೋಗುವಾಗ ತಮ್ಮ ಮನದಿಂಗಿತವನ್ನು , ಆಶಯವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ದಿನಾಚರಣೆ ಆಚರಿಸುವ ಬಗ್ಗೆ ಕೇಳುತ್ತಾರೆ. ಮಕ್ಕಳ ದಿನಾಚರಣೆಯಂದು ಇಡೀ ದಿನ ಸಂತೋಷದಿಂದ ಕಳೆಯುತ್ತಾರೆ. ಆ ದಿನ ಮಕ್ಕಳ ಹಬ್ಬ , ಚಿಣ್ಣರ ಚಿಲಿಪಿಲಿ ಹೊಸ ಬಟ್ಟೆ ಹಾಕಿಕೊಂಡು  ಶಾಲೆಗೆ ಬರುವ ಸಂಭ್ರಮದ ಗುಂಗಿನಲ್ಲಿರುತ್ತಾರೆ ,

ಶಾಲೆಯಲ್ಲಿ ಆಟೋಟ ಸ್ಪರ್ಧೆಗಳು ಹಾಡು , ನೃತ್ಯ ಮಾಡುವುದರಿಂದ  ಬಹುಮಾನ ಪಡೆಯುವ ಮೂಲಕ ಸಂಭ್ರಮಿಸುತ್ತಾರೆ. ಎಲ್ಲರೊಂದಿಗೆ ಖುಷಿಯಿಂದ ಬೆರೆತು ಕಲಿತು ಸಂಭ್ರಮವನ್ನು ಆಚರಿಸುತ್ತಾರೆ.. ಈ ಸಂಭ್ರಮ ಕೇವಲ ಮಕ್ಕಳ ದಿನಾಚರಣೆಯಂದು ಮಾತ್ರ ಇರದೆ ಪ್ರತಿದಿನವೂ ಪ್ರತಿಕ್ಷಣವು ಇರಲಿ ಎಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು