2:57 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ವಾಮಂಜೂರ ಸಂತ ರೈಮಂಡ್ ಅನುದಾನಿತ ಪ್ರೌಢಶಾಲೆ: ಹಳೆ ವಿದ್ಯಾರ್ಥಿಗಳ ಹಾಗೂ ಅಂದಿನ ಶಿಕ್ಷಕರ ಸಮಾಗಮ

08/11/2021, 15:45

ಮಂಗಳೂರು(reporterkarnataka.com): ನಗರದ ಹೊರವಲಯದ ವಾಮಂಜೂರ ಸಂತ ರೈಮಂಡ್ ಅನುದಾನಿತ ಪ್ರೌಢಶಾಲೆಯ ಅಂದಿನ ಪ್ರಥಮ ವರ್ಷದ ಹಳೆ ವಿದ್ಯಾರ್ಥಿಗಳ  ಮತ್ತು ಅಂದಿನ ಪ್ರಾಧ್ಯಾಪಕರ ಸಮಾಗಮ ಕೂಟ ಸೈಂಟ್ ರೈಮಂಡ್ ಶಾಲಾ ಆವರಣದಲ್ಲಿ ಜರಗಿತು.

ಸುಮಾರು 36 ವರ್ಷಗಳ ಹಿಂದೆ ಆರಂಭವಾದ ಸಂತ ರೈಮಂಡ್ ಅನುದಾನಿತ ಪ್ರೌಢಶಾಲೆಯ ಅಂದಿನ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮಾರಿಬೆಲ್, ಸಿಸ್ಟರ್ ವಿನ್ ಜಾಯ್  ಹಾಗೂ ವಿಜಯಲಕ್ಷ್ಮಿ ಮತ್ತು ಇಂದಿನ ಪ್ರಾಂಶುಪಾಲರಾದ ಸಿಸ್ಟರ್ ವಿದ್ಯಾ,  ಸಂಚಾಲಕರಾದ ಸಿಸ್ಟರ್ ಲಿಲ್ಲಿ, ಸಿಸ್ಟರ್ ನವನೀತ, ಸಿಸ್ಟರ್ ಗ್ರೇಸಿ  ಅಧ್ಯಾಪಕರು ಗಳಾದ ರೊನಾಲ್ಡ್ ಲೋಬೊ ಹಾಗೂ ನಾಗರಾಜ್ ಮತ್ತು ಅಂದಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಸಿಸ್ಟರ್ ಮಾರಿಬೆಲ್, ಸಿಸ್ಟರ್ ವಿನ್ಜಾಯ್, ಮತ್ತು ವಿಜಯಲಕ್ಷ್ಮಿ ಟೀಚರ್ ಅವರನ್ನು ಹಳೆವಿದ್ಯಾರ್ಥಿಗಳ ವತಿಯಿಂದ  ಗೌರವಿಸಿ ಸನ್ಮಾನಿಸಲಾಯಿತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.  ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಸ್ಟರ್, ಇದು ನನ್ನ ಜೀವನದಲ್ಲಿ ಮರೆಯಲಾರದ ಸವಿನೆನಪು, ಅಂದು ತೀರಾ ಗ್ರಾಮೀಣ ಪ್ರದೇಶದ ಸೌಲಭ್ಯ ವಂಚಿತ ಮಕ್ಕಳು ನಮ್ಮ ಶಾಲೆಯಲ್ಲಿ ಪ್ರವೇಶಾತಿ ಪಡೆದು ಮೂಲಭೂತ ಸೌಲಭ್ಯಗಳ ಅಡೆತಡೆಗಳ ನಡುವೆಯೂ  ಅತ್ಯುತ್ತಮ ಶೇಕಡ 98 ಪರ್ಸೆಂಟ್ ಪಾಸ್ ಆಗಿದ್ದನ್ನ ಇಲ್ಲಿ ಸ್ಮರಿಸಿಕೊಂಡರು.

ಅಂದಿನ ಮಕ್ಕಳು ಇಂದು ನಮ್ಮ ಸತ್ಪ್ರಜೆಯಾಗಿ ಇರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ಮತ್ತೋರ್ವ ಸಿಸ್ಟರ್ ವಿನ್ಜಾಯ್  ಅವರು ಇದು ಸಹ ಹಳೆ ವಿದ್ಯಾರ್ಥಿಗಳನ್ನು ಮಕ್ಕಳೆಂದೇ ಕರೆದರು. ತನ್ನ ಪ್ರೀತಿಪೂರ್ವಕ ಹಳೆ ನೆನಪುಗಳನ್ನು ಮೆಲುಕು ಹಾಕಿದರು. ಹಳೆ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ತಿಳಿಸಿದರು.

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಲಕ್ಷ್ಮಿ ಟೀಚರ್ ಅವರು ಸೈಂಟ್ ರೈಮಂಡ್ ಶಾಲೆಯಲ್ಲಿ ನಾನು ಅಧ್ಯಾಪಕಿಯಾಗಿ ಕೆಲಸ ಮಾಡಿದ ಕ್ಷಣಗಳು ತನ್ನ ಜೀವನದಲ್ಲಿ ಮರೆಯುವಂತಿಲ್ಲ. ಅಂದಿನ ಮಕ್ಕಳು ಇಂದಿನ ಹಳೆ ವಿದ್ಯಾರ್ಥಿಗಳು  ಸಹ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

ಮಾತಿನ ಮಧ್ಯೆ  ಗದ್ಗದಿತರಾದ  ಅವರು ಹಳೆ ವಿದ್ಯಾರ್ಥಿಗಳನ್ನು ಕಂಡು ತನ್ನ ಮಾತಿನ ಮಧ್ಯೆ ಆನಂದಭಾಷ್ಪಗಳನ್ನು ಸುರಿಸಿದರು.

ಸನ್ಮಾನ ಕಾರ್ಯಕ್ರಮದ ಬಳಿಕ ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸಹ ಬೋಜನವನ್ನು ಸ್ವೀಕರಿಸಿದರು.

ಸ್ವಾಗತ ಮತ್ತು ಪ್ರಸ್ತಾವನೆಯನ್ನು ಮಂದಾರ ರಾಜೇಶ್ ಭಟ್ ನೆರವೇರಿಸಿದರು. ರಾಜೇಶ್. ಬಿ ಯು. ವಂಧಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು