3:32 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಅಕ್ಟೋಬರ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ತೇಜಸ್ ಹಾಗೂ ಸಾತ್ವಿಕ್ ಭಟ್ ಆಯ್ಕೆ

04/11/2021, 19:08

ಮಂಗಳೂರು(reporterkarnataka.com):ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ತೇಜಸ್ ಬಿ.ವಿ. ಹಾಗೂ ಸಾತ್ವಿಕ್ ಭಟ್ ಆಯ್ಕೆಗೊಂಡಿದ್ದಾರೆ.

ದಾವಣಗೆರೆಯ ತೇಜಸ್ ಬಿ.ವಿ. 2ನೇ ತರಗತಿಯ ವಿದ್ಯಾರ್ಥಿ. ತಂದೆ ವೀರೇಶ್  ಬಿ.  ಹಾಗೂ ತಾಯಿ ವಿದ್ಯಾ ಲಕ್ಷ್ಮಿ. ಈತ ದಾವಣಗೆರೆಯ ಶ್ರೀ ಜಗದ್ಗುರು ಮುರುಘ ರಾಜೇಂದ್ರಶಾಲೆಯ ವಿದ್ಯಾರ್ಥಿ. ಬೇಸಿಕ್  ಡಾನ್ಸ್ ಮತ್ತು ವೆಸ್ಟ್ರೆನ್ ಹಿಫಾಪ್ ಡಾನ್ಸ್ 1 ವರ್ಷ ಕಲಿಯುತ್ತಿದ್ದಾನೆ. ನೃತ್ಯ, ಅಭಿನಯ, ಕಥೆ ಹೇಳುವುದು ಈತನ ಹವ್ಯಾಸ. ವಾಯ್ಸ್ ಆಫ್ ಆರಾಧನಾ ಸಂಸ್ಥೆ ಗೆ ಲೈವ್ ಕಾರ್ಯಕ್ರಮದಲ್ಲಿ ಸೇರಿಕೊಂಡೆ ಪ್ರತಿಭೆ ಈತ.


ದಾಸರಹಳ್ಳಿ ಜನಸ್ಪಂದನ ಟ್ರಸ್ಟ್ ನ ಕಲಾ ಕುಸುಮ

ಆಯೋಜಿಸಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಯಲ್ಲಿ ದ್ವಿತೀಯ, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ  ಗಾಯನ ಸ್ಪರ್ಧೆಯಲ್ಲಿ ದ್ವಿತೀಯ,

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಉತ್ತಮ,  ಜನರಲ್ ನಾಲೆಜ್ ಸ್ಪರ್ಧೆ ಯಲ್ಲಿ ಅತ್ಯುತ್ತಮ ಮತ್ತು ಬಣ್ಣ ಡ್ಯಾನ್ಸ್ ಕಾಸ್ಟ್ಯೂಮ್ ಬ್ರಂಹವರ (ಉಡುಪಿ) ರವರ ಮುದ್ದು ಕೃಷ್ಣ ಮುದ್ದು ರಾಧೆ ಸ್ಪರ್ಧೆಯಲ್ಲಿ ಪ್ರಶಂಸಾ ಪತ್ರ ಮತ್ತು ವಾಯ್ಸ್ ಆಫ್ ಆರಾಧನಾ ಸಂಸ್ಥೆ ಯಲ್ಲಿ ಬೆಸ್ಟ್  ಪರ್ಪೋಮರ್ ಆಗಿ ಸೆಲೆಕ್ಟ್ ಆಗಿದ್ದನು. ಹಾಗೆ ಉಡುಪಿಯ ರಿಸೋರ್ಸ್ ಕಂಪನಿ ಯವರು ನಡೆಸಿರುವ ಸ್ಟಾರ್ ಕಿಡ್ ಅವಾರ್ಡ್-2021 ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದಾನೆ.

ಕೇರಳದ ಕೊಚ್ಚಿಯ ಸಾತ್ವಿಕ್ ಭಟ್ ಅಮೃತ  ವಿದ್ಯಾಲಯದಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಚಿಕ್ಕದಿoದಲೇ ಡಾನ್ಸ್ ನಲ್ಲಿ ಬಹಳ ಆಸಕ್ತಿ ಹೊಂದಿದ ಇವನು 3ನೇ ವಯಸ್ಸಿಗೆ ಭರತನಾಟ್ಯ ವನ್ನು ಕಲಿಯಲು ಆರಂಭಿಸಿದನು. ಹಲವಾರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾನೆ. ಜಾನಪದ ನೃತ್ಯದಲ್ಲಿ ಹಲವು ಬಹುಮಾನ ಗಳನ್ನು ತನ್ನದಾಗಿಸಿಕೊಂಡಿದ್ದಾನೆ.

ಈಜಿನಲ್ಲೂ ಎತ್ತಿದ  ಕೈ. ಕೀಬೋರ್ಡ್ ನಲ್ಲೂ ಆಸಕ್ತಿ ಯಾಗಿ ಅದನ್ನು ಅಭ್ಯಾಸ ಮಾಡುತ್ತಿದ್ದಾನೆ. ಚಿತ್ರ ಕಲೆ, ಜಾನಪದ ಪದ್ಯ, ಹಾಗೂ ಛದ್ಮ ವೇಷದಲ್ಲೂ ಬಹಳ ಆಸಕ್ತಿ  ಹೊಂದಿದ ಇವನು ಹಲವಾರು ವೇದಿಕೆಯಲ್ಲೂ ಪ್ರದರ್ಶನ ಮಾಡಿದನು. ಭಗವಾದ್ ಗೀತೆಯನ್ನು ನಿರರ್ರ್ಗಳವಾಗಿ ಹೇಳುವನು .3ನೇ ವಯಸ್ಸಿಗೆ “ಬೇಬಿ ಕಿಂಗ್’ ಎನ್ನುವ ಪಟ್ಟ ಇವನ ಮುಡಿಗೆರಿತು.  ದೇವಿಪ್ರಸಾದ್ ಭಟ್ ಹಾಗೂ ಕಾವ್ಯ ಪ್ರಸಾದ್ ಅವರ ಪುತ್ರನಾದ ಇವನು ಕೇರಳದ ಕೊಚ್ಚಿಯಲ್ಲಿ ವಾಸಿಸುತ್ತಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು