12:21 AM Wednesday29 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ: ಅಪ್ಪಟ ಗ್ರಾಮೀಣ ಸೊಗಡಿನ ಸಣ್ಣ ಗೌರಿಹಬ್ಬ

21/10/2021, 08:36

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕಾಚರಣೆಗಳಿಗೆ ಲೆಕ್ಕವಿಲ್ಲ, ಗ್ರಾಮೀಣ ಭಾಗದ ರೈತಾಪಿ ವರ್ಗಕ್ಕೆ ಅಮವಾಸ್ಯೆ ಹುಣ್ಣಿಮೆಗೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿರುತ್ತೆ.ಅಂತೆಯೇ ಸೀಗೆಹುಣ್ಣಿಮೆ ಸಣ್ಣ ಗೌರಿಹಬ್ಬ ಎಂದು ಕರೆಸಿಕೊಳ್ಳುವ ಕಿನ್ನರಿಯರ ಹಬ್ಬವಾಗಿದೆ.

ದಸರಾ ಹಬ್ಬದ ನಂತರದಲ್ಲಿಯೇ ಗರಿಗೆದರುವ ಸೀಗೆಹುಣ್ಣಿಮೆ ಅಪ್ಪಟ ಗ್ರಾಮೀಣ ಸೊಗಡಿನ ಕಿನ್ನರಿಯರ ಹಬ್ಬವಾಗಿದೆ. 

ಕಿನ್ನರಿಯರು ಹಿರಿಯರ ಹೆಂಗಳೆಯರ ಸೀರೆಯನ್ನುಟ್ಟು, ದೀಪಗಳೊಂದಿಗೆ  ಸಕ್ಕರಾರತಿಯನ್ನು  ಇಟ್ಟುಕೊಂಡು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಗೌರಿ ಮೂರ್ತಿ ಗೆ ಬೆಳಗುವ ಸಾಂಪ್ರದಾಯಿಕ ಹಬ್ಭ ಇದಾಗಿದೆ. ಸೀಗೆ ಹುಣ್ಣಿಮೆಯಂದು ಕೂಡ್ಲಿಗಿ ಪಟ್ಟಣ ಸೇರಿದಂತೆ ಕೂಡ್ಲಿಗಿ ತಾಲೂಕು, ವಿವಿಧೆಡೆಯ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ತಮ್ಮ ಹೆತ್ತವುರು ತೊಡಿಸಿದ ಸೀರೆಯನ್ನುಟ್ಟು ಗೌರಿಯನ್ನಾರಾಧಿಸಿ ಸಂಭ್ರಮಿಸಿದರು. ಸೀಗೆ ಹುಣ್ಣಿಮೆ ಹಲವೆಡೆಗಳಲ್ಲಿ ಸೀಗೆ ಹುಣ್ಣಿಮೆ ಎಂದರೆ ಮತ್ತಿತರೆ ಕಡೆಗಳಲ್ಲಿ ಸಣ್ಣಗೌರಿಹಬ್ಬ ಎಂದೇ ಪ್ರತೀತಿ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು