7:14 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಸೀರಿಯನ್ನುಟ್ಟ ಕಿನ್ನರಿಯರಿಂದ ಸೀಗೆಹುಣ್ಣಿಮೆ ಸಂಭ್ರಮ: ಅಪ್ಪಟ ಗ್ರಾಮೀಣ ಸೊಗಡಿನ ಸಣ್ಣ ಗೌರಿಹಬ್ಬ

21/10/2021, 08:36

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕಾಚರಣೆಗಳಿಗೆ ಲೆಕ್ಕವಿಲ್ಲ, ಗ್ರಾಮೀಣ ಭಾಗದ ರೈತಾಪಿ ವರ್ಗಕ್ಕೆ ಅಮವಾಸ್ಯೆ ಹುಣ್ಣಿಮೆಗೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿರುತ್ತೆ.ಅಂತೆಯೇ ಸೀಗೆಹುಣ್ಣಿಮೆ ಸಣ್ಣ ಗೌರಿಹಬ್ಬ ಎಂದು ಕರೆಸಿಕೊಳ್ಳುವ ಕಿನ್ನರಿಯರ ಹಬ್ಬವಾಗಿದೆ.

ದಸರಾ ಹಬ್ಬದ ನಂತರದಲ್ಲಿಯೇ ಗರಿಗೆದರುವ ಸೀಗೆಹುಣ್ಣಿಮೆ ಅಪ್ಪಟ ಗ್ರಾಮೀಣ ಸೊಗಡಿನ ಕಿನ್ನರಿಯರ ಹಬ್ಬವಾಗಿದೆ. 

ಕಿನ್ನರಿಯರು ಹಿರಿಯರ ಹೆಂಗಳೆಯರ ಸೀರೆಯನ್ನುಟ್ಟು, ದೀಪಗಳೊಂದಿಗೆ  ಸಕ್ಕರಾರತಿಯನ್ನು  ಇಟ್ಟುಕೊಂಡು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಗೌರಿ ಮೂರ್ತಿ ಗೆ ಬೆಳಗುವ ಸಾಂಪ್ರದಾಯಿಕ ಹಬ್ಭ ಇದಾಗಿದೆ. ಸೀಗೆ ಹುಣ್ಣಿಮೆಯಂದು ಕೂಡ್ಲಿಗಿ ಪಟ್ಟಣ ಸೇರಿದಂತೆ ಕೂಡ್ಲಿಗಿ ತಾಲೂಕು, ವಿವಿಧೆಡೆಯ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ತಮ್ಮ ಹೆತ್ತವುರು ತೊಡಿಸಿದ ಸೀರೆಯನ್ನುಟ್ಟು ಗೌರಿಯನ್ನಾರಾಧಿಸಿ ಸಂಭ್ರಮಿಸಿದರು. ಸೀಗೆ ಹುಣ್ಣಿಮೆ ಹಲವೆಡೆಗಳಲ್ಲಿ ಸೀಗೆ ಹುಣ್ಣಿಮೆ ಎಂದರೆ ಮತ್ತಿತರೆ ಕಡೆಗಳಲ್ಲಿ ಸಣ್ಣಗೌರಿಹಬ್ಬ ಎಂದೇ ಪ್ರತೀತಿ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು