6:37 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವ ಶ್ರೀದೇವಿ ನಾಯಕ್ ಬಗ್ಗೆ ಚಲನಚಿತ್ರ ನಟ, ನಿರ್ದೇಶಕರಿಂದ ಮೆಚ್ಚುಗೆ

27/05/2021, 18:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ರಾಯಚೂರು ಜಿಲ್ಲೆಯಲ್ಲಿ ಸಂಕಷ್ಟ ಸಿಲುಕಿರುವ ಮಂಗಳ ಮುಖಿಯರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಅನ್ನದಾನ, ಒಂದು ದಿನದ ಕೂಲಿ, 

ಜತೆಗೆ ಸ್ಯಾನಿಟೈಸರ್, ಮಾಸ್ಕ್ ನೀಡುವ ಶ್ರೀದೇವಿ ನಾಯಕ್ ಅವರ ಕಾಳಜಿ ಬಗ್ಗೆ ಬೆಂಗಳೂರಿನ ಚಲನಚಿತ್ರ ನಟ, ನಿರ್ದೇಶಕ ಡಿಂಗ್ರೀ ನರೇಶ್ ಮೆಚ್ಚುಗೆ ಪಡಿಸಿದ್ದಾರೆ.

ಸರಕಾರ ಮಾಡಲಾರದಂಥ ಕೆಲಸವನ್ನು ಒಬ್ಬ ಮಹಿಳಾ ಸಮಾಜ ಸೇವಕಿ ಮಾಡುತ್ತಿದ್ದಾರೆ. ಬಡ ಬಗ್ಗರಿಗೆ, ಕೂಲಿ ಕಾರ್ಮಿಕರಿಗೆ ಸ್ಪಂದಿಸುವುದು ಒಂದು ಉತ್ತಮವಾದ ಜನರ ಸೇವೆ. ಅವರು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ಇಂಥ ಸಮಾಜಸೇವೆ ಮಾಡುವ ನಿಮ್ಮನ್ನು ದಿನಾ ಸ್ಮರಿಸುವ ಕಾಲ ಬರುತ್ತದೆ ಎಂದು ಹೇಳಿದ್ದಾರೆ.

 ಶ್ರೀದೇವಿ ನಾಯಕ್ ಅವರು ಬಾಲ್ಯದಿಂದಲೂ ಸಮಾಜಸೇವೆ ಮಾಡುತ್ತಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ವೆಂಕಟೇಶ್ ನಾಯಕ್ ಫೌಂಡೇಶನ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಿದ್ದಾರೆ. ಅವರ ಸೇವೆ ಸಮಾಜಕ್ಕೆ ಅದ್ಭುತವಾದ ಕೊಡುಗೆ ಎಂದು ಚಲನಚಿತ್ರ ನಟ ಡಿಂಗ್ರೀ ನರೇಶ್ ಹೊಗಳಿದ್ದಾರೆ.

ಡಿಂಗ್ರೀ ನರೇಶ್ ಅವರು ರಾಯಚೂರಿನ ಆಶಾಪುರ್ ಗ್ರಾಮದವರು. ಬೆಂಗಳೂರಿನಲ್ಲಿ ಅವರು ಮಾಡಿದ ಚಲನಚಿತ್ರಗಳು ಕೇರಾಫ್ ಪುಟ್ಟಣ್ಣ ಪಾರ್ಟ್ ಟು, ಪುಟ್ಟರಾಜ್ ಲವರ್ ಶಶಿಕಲಾ, ಬೆಲ್ ಬಟನ್, ಪೂರ್ಣ ಸತ್ಯ , ದೇವಗಿರಿ ರಹಸ್ಯ, ಭಜರಂಗಿ 2,

ಅವಳು ಲೈಫ್ ಸತ್ಯ ಸೇರಿದಂತೆ ಹಲವರು ಚಲನಚಿತ್ರಗಳ ನಟಿಸಿ, ನಿರ್ದೇಶಕ ನೀಡಿದ್ದಾರೆ. ಜನಬಲ ಪತ್ರಿಕೆಯ ಸಂಪಾದಕ ಅಂಬಣ್ಣ,   ಚಿಕ್ಕಂದಿನಿಂದಲೇ ಡಿಂಗ್ರೀ ನರೇಶ್ ಅವರು ಹೋರಾಟ ಮಾಡುವುದರ ಮುಖಾಂತರ ಸಮಾಜದ ಒಳ್ಳೆಯ ಹೆಸರು ಮಾಡಿದ್ದಾರೆ. ಅಲ್ಲದೆ ಸತ್ಯ ಧ್ವನಿ ಪತ್ರಿಕೆ ಸಂಪಾದಕ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರ ಆತ್ಮೀಯ ಸ್ನೇಹಿತರು. ನಮ್ಮ ಭಾಗದ ಸಮಾಜ ಸೇವೆ ಮಾಡುವ ಶ್ರೀದೇವಿ ನಾಯಕ್ ಅವರ ಸೇವೆಯನ್ನು ಗುರುತಿಸಿ ಚಲನಚಿತ್ರ ನಟರು ಅವರಿಗೆ ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು