6:03 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವ ಶ್ರೀದೇವಿ ನಾಯಕ್ ಬಗ್ಗೆ ಚಲನಚಿತ್ರ ನಟ, ನಿರ್ದೇಶಕರಿಂದ ಮೆಚ್ಚುಗೆ

27/05/2021, 18:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ರಾಯಚೂರು ಜಿಲ್ಲೆಯಲ್ಲಿ ಸಂಕಷ್ಟ ಸಿಲುಕಿರುವ ಮಂಗಳ ಮುಖಿಯರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಅನ್ನದಾನ, ಒಂದು ದಿನದ ಕೂಲಿ, 

ಜತೆಗೆ ಸ್ಯಾನಿಟೈಸರ್, ಮಾಸ್ಕ್ ನೀಡುವ ಶ್ರೀದೇವಿ ನಾಯಕ್ ಅವರ ಕಾಳಜಿ ಬಗ್ಗೆ ಬೆಂಗಳೂರಿನ ಚಲನಚಿತ್ರ ನಟ, ನಿರ್ದೇಶಕ ಡಿಂಗ್ರೀ ನರೇಶ್ ಮೆಚ್ಚುಗೆ ಪಡಿಸಿದ್ದಾರೆ.

ಸರಕಾರ ಮಾಡಲಾರದಂಥ ಕೆಲಸವನ್ನು ಒಬ್ಬ ಮಹಿಳಾ ಸಮಾಜ ಸೇವಕಿ ಮಾಡುತ್ತಿದ್ದಾರೆ. ಬಡ ಬಗ್ಗರಿಗೆ, ಕೂಲಿ ಕಾರ್ಮಿಕರಿಗೆ ಸ್ಪಂದಿಸುವುದು ಒಂದು ಉತ್ತಮವಾದ ಜನರ ಸೇವೆ. ಅವರು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ಇಂಥ ಸಮಾಜಸೇವೆ ಮಾಡುವ ನಿಮ್ಮನ್ನು ದಿನಾ ಸ್ಮರಿಸುವ ಕಾಲ ಬರುತ್ತದೆ ಎಂದು ಹೇಳಿದ್ದಾರೆ.

 ಶ್ರೀದೇವಿ ನಾಯಕ್ ಅವರು ಬಾಲ್ಯದಿಂದಲೂ ಸಮಾಜಸೇವೆ ಮಾಡುತ್ತಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ವೆಂಕಟೇಶ್ ನಾಯಕ್ ಫೌಂಡೇಶನ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಿದ್ದಾರೆ. ಅವರ ಸೇವೆ ಸಮಾಜಕ್ಕೆ ಅದ್ಭುತವಾದ ಕೊಡುಗೆ ಎಂದು ಚಲನಚಿತ್ರ ನಟ ಡಿಂಗ್ರೀ ನರೇಶ್ ಹೊಗಳಿದ್ದಾರೆ.

ಡಿಂಗ್ರೀ ನರೇಶ್ ಅವರು ರಾಯಚೂರಿನ ಆಶಾಪುರ್ ಗ್ರಾಮದವರು. ಬೆಂಗಳೂರಿನಲ್ಲಿ ಅವರು ಮಾಡಿದ ಚಲನಚಿತ್ರಗಳು ಕೇರಾಫ್ ಪುಟ್ಟಣ್ಣ ಪಾರ್ಟ್ ಟು, ಪುಟ್ಟರಾಜ್ ಲವರ್ ಶಶಿಕಲಾ, ಬೆಲ್ ಬಟನ್, ಪೂರ್ಣ ಸತ್ಯ , ದೇವಗಿರಿ ರಹಸ್ಯ, ಭಜರಂಗಿ 2,

ಅವಳು ಲೈಫ್ ಸತ್ಯ ಸೇರಿದಂತೆ ಹಲವರು ಚಲನಚಿತ್ರಗಳ ನಟಿಸಿ, ನಿರ್ದೇಶಕ ನೀಡಿದ್ದಾರೆ. ಜನಬಲ ಪತ್ರಿಕೆಯ ಸಂಪಾದಕ ಅಂಬಣ್ಣ,   ಚಿಕ್ಕಂದಿನಿಂದಲೇ ಡಿಂಗ್ರೀ ನರೇಶ್ ಅವರು ಹೋರಾಟ ಮಾಡುವುದರ ಮುಖಾಂತರ ಸಮಾಜದ ಒಳ್ಳೆಯ ಹೆಸರು ಮಾಡಿದ್ದಾರೆ. ಅಲ್ಲದೆ ಸತ್ಯ ಧ್ವನಿ ಪತ್ರಿಕೆ ಸಂಪಾದಕ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರ ಆತ್ಮೀಯ ಸ್ನೇಹಿತರು. ನಮ್ಮ ಭಾಗದ ಸಮಾಜ ಸೇವೆ ಮಾಡುವ ಶ್ರೀದೇವಿ ನಾಯಕ್ ಅವರ ಸೇವೆಯನ್ನು ಗುರುತಿಸಿ ಚಲನಚಿತ್ರ ನಟರು ಅವರಿಗೆ ಶುಭ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು