ಇತ್ತೀಚಿನ ಸುದ್ದಿ
ಯುವ ಪೀಳಿಗೆಯ ಏಕಾಗ್ರತೆಯ ಉದ್ದೀಪನಗೊಳಿಸುವ ಶಕ್ತಿ ಯೋಗಕ್ಕಿದೆ: ಜಿತಕಾಮಾನಂದಜಿ ಸ್ವಾಮೀಜಿ
17/07/2026, 21:33
ಮಂಗಳೂರು(reporterkarnataka.com): ಮನುಷ್ಯನನ್ನು ಆಧ್ಯಾತ್ಮಿಕ ಲೋಕದ ಉನ್ನತಿಗೇರಿಸುವ ಯೋಗ ನಮ್ಮ ಉಸಿರಾಗ ಬೇಕು. ಈಗಿನ ಯುವ ಪೀಳಿಗೆಯಲ್ಲಿ ಏಕಾಗ್ರತೆಯ ಕೊರತೆ ಇದೆ ಅದನ್ನು ಉದ್ದೀಪನ ಗೊಳಿಸುವ ಶಕ್ತಿ ಯೋಗಕ್ಕಿದೆ ಎಂದು ರಾಮಕೃಷ್ಣ ಮಠ ಅಧ್ಯಕ್ಷರಾದ ಜಿತಕಾಮಾನಂದಜಿ ಸ್ವಾಮೀಜಿ ಹೇಳಿದರು.
ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಹಾಗೂ ದೇಲಂಪಾಡಿ ಯೋಗ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಮಂಗಳಾದೇವಿ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಜರುಗಿದ ಆರೋಗ್ಯಕ್ಕಾಗಿ ಮುದ್ರಾ ಯೋಗಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.




ದೇಲಂಪಾಡಿ ಯೋಗ ಪ್ರತಿಷ್ಠಾನದಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಪ್ರಾಸ್ತವಿಕ ನುಡಿ ಹಾಗೂ ಪುಸ್ತಕದ ಬಗ್ಗೆ ವಿಶ್ಲೇಷಿದರು.
ಕಾರ್ಯಕ್ರಮದಲ್ಲಿ ಎಸ್.ಸಿ.ಎಸ್. ಹಾಸ್ಪಿಟಲ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರು ಡಾ. ಜೀವರಾಜ್ ಸೊರಕೆ ಎಮ್. ಎಸ್., ಗೌರವ ಅತಿಥಿಗಳಾಗಿ ಬೆಂಗಳೂರಿನ ಆರ್. ಎನ್. ಎಸ್. ತಾಂತ್ರಿಕ ವಿದ್ಯಾಲಯದ ಪ್ರೊ.ಡಾ.ಸುರೇಶ್ ದೇಲಂಪಾಡಿ,ಮಂಗಳೂರಿನ ಮಧುಬನ್ ಗ್ರಾಫಿಕ್ಸ್ ಮಾಲಕ ಪ್ರಸನ್ನ ಕೆ.ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯೋಗ ರತ್ನ ಗೋಪಾಲ ಕೃಷ್ಣ ದೇಲಂಪಾಡಿ ಪ್ರಾಸ್ತವಿಕ ನುಡಿ ಹಾಗೂ ಪುಸ್ತಕದ ಬಗ್ಗೆ ವಿಶ್ಲೇಷಿದರು.












