ಇತ್ತೀಚಿನ ಸುದ್ದಿ
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ
03/07/2026, 16:46
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಇತ್ತೀಚೆಗಷ್ಟೇ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಅತಿಥಿ ಶಿಕ್ಷಕರಾದ ವೀರನಗೌಡ ರವರು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಹಿನ್ನೆಲೆ ಯಲ್ಲಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ವಾಗಿ
ಮಸ್ಕಿ ತಾಲೂಕಿನಲ್ಲಿ ವಿವಿಧ ಶಾಲೆಯ ಅತಿಥಿ ಶಿಕ್ಷಕರು ಪ್ರತಿಭಟನೆ ಮಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ನೇತೃತ್ವದಲ್ಲಿ
ಮಸ್ಕಿ ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ‘ಬೃಹತ್ ಆಕ್ರೋಶದ ಮುಷ್ಕರ’ ಸರ್ಕಾರದ ದ್ವಂದ್ವ ನೀತಿಯ ವಿರುದ್ಧದ ಜನಾಂದೋಲನದಂತೆ ಕಂಡು ಬಂತು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಶಿಕ್ಷಕರು, ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.ಸರ್ಕಾರದ ಕಣ್ಣು ತೆರೆಸಲು ಶಿಕ್ಷಕರು ಮಂಡಿಸಿದ
*ಪ್ರಮುಖ ಬೇಡಿಕೆಗಳು:* 12 ತಿಂಗಳ ನಿರಂತರ ಸೇವೆ:
ಕೇವಲ 9-10 ತಿಂಗಳ ತಾತ್ಕಾಲಿಕ ವ್ಯವಸ್ಥೆ ರದ್ದಾಗಲಿ; ವರ್ಷಪೂರ್ತಿ
ಸೇವಾ ಭದ್ರತೆ ಸಿಗಲಿ., ಗೌರವಯುತ ವೇತನ, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಗೌರವಧನವನ್ನು ಕನಿಷ್ಠ ₹25,000 ಕ್ಕೆ ಹೆಚ್ಚಿಸಬೇಕು, ತಿಂಗಳ ಮೊದಲ ವಾರದಲ್ಲೇ ವೇತನ,ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಜಮೆಯಾಗಬೇಕು.ಕೃಪಾಂಕದ ಸೌಲಭ್ಯbನೀಡಬೇಕು ಎಂದು ಸರಕಾರಕ್ಕೆ ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದ್ದರು.
ಈ ವೇಳೆ ಮಸ್ಕಿ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರು ಇದ್ದರು.
.












