7:42 AM Thursday10 - July 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ… ಕೊಪ್ಪ ಮೊರಾರ್ಜಿ‌ ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಿನ್ಸಿಪಾಲ್, ವಾರ್ಡನ್ ಅಮಾನತು:… ಕೊಲೆ ಪ್ರಕರಣ: ಯೆಮೆನ್‌ನಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾಗೆ ಜುಲೈ… ನಂಜ ಈ ಪಣಿ ಮಾಡಿತಾಮಿ ಸಾರೂ: ವಿರಾಜಪೇಟೆ ಶಾಸಕರ ಮುಂದೆ ಕೆದರಿದ ಕೂದಲಿನ,… ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ…

ಇತ್ತೀಚಿನ ಸುದ್ದಿ

ಶಿರನಾಳ: ಸೆ. 18ರಂದು ಶ್ರೀ ಕೋಂತಕುಮಾರ ವೀರ ಮಲಕಾರಸಿದ್ದ ಸಿದ್ದಾಂತ ನಾಟಕ 

17/09/2021, 09:15

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com

ವಿಜಯಪುರ ಶಿರನಾಳದ ಶ್ಯಾಮರಸಿದ್ದೇಶ್ವರ ಗಜಾನನ ತರುಣ ಸಂಘ ಆಶ್ರಯದಲ್ಲಿ ಶ್ರೀ ಕೋಂತ ಕುಮಾರ ವೀರ ಮಲಕಾರ ಸಿದ್ದ ಸಿದ್ದಾಂತ ನಾಟಕ ಶ್ಯಾಮರ ಸಿದ್ದೇಶ್ವರ ದೇವಸ್ಥಾನದ ಎದುರುಗಡೆ ಸೆ. 18ರಂದು ಸಂಜೆ 8 ಗಂಟೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ.

ಮುಮ್ಮೇಟ್ಟಗುಡ್ಡ ಶ್ರೀ ಬನಸಿದ್ಧ ಮಹಾರಾಜ ಅವರ ಸಾನಿಧ್ಯದಲ್ಲಿ ನಾಗಠಾಣ ಮಾಜಿ ಶಾಸಕ ವಿಠ್ಠಲ ದೋ. ಕಟಕದೊಂಡ ಉದ್ಘಾಟಿಸುವರು. ಮಖಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಪಂ ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಸೋ. ಕಳ್ಳಿಮನಿ ಹಾಗೂ ಬಬಲೇಶ್ವರ ಪಿಎಸ್ ಐ ಸೋಮನ ಗೌಡ್ರು ಜ್ಯೋತಿ ಬೆಳಗಿಸುವರು. 

ವಿಜಯಪುರ ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಪ್ಪ ಗೋ. ದಳವಾಯಿ ಹಾಗೂ ವಿಜಯಪುರ ತಾಪಂ ನಿಕಟಪೂರ್ವ ಅಧ್ಯಕ್ಷ ಕಾಳಪ್ಪ ಬಾ. ಬೆಳ್ಳುಂಡಗಿ ಗಜಾನನ ಫೋಟೋ ಪೂಜೆ ನೆರವೇರಿಸುವರು.

ವಿಜಯಪುರ ಎಪಿಎಂಸಿ ಮಾಜಿ ಸದಸ್ಯ ಸಿದ್ದಣ್ಣ ಸಕ್ರಿ, ಮಖಣಾಪುರ ಪಿಕೆಪಿಎಸ್ ಉಪಾಧ್ಯಕ್ಷ ಪೂಜಪ್ಪ ಮಾ. ಪೂಜಾರಿ ರಂಗಪೂಜೆ ನೆರವೇರಿಸುವರು. ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ, ವಿಜಯಪುರ ತಾಪಂ ನಿಕಟಪೂರ್ವ ಉಪಾಧ್ಯಕ್ಷ ಪಿಂಟು ಗೋ ರಾಠೋಡ ಮಿಂಚು ಹಾರಿಸುವರು. ಮಖಣಾಪುರ ಗ್ರಾಪಂ ಉಪಾಧ್ಯಕ್ಷ ಧನಸಿಂಗ್ ಚವ್ಹಾಣ ಬಲೂನು ಹಾರಿಸುವರು.

ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ಮೋಹನ ಮೇಟಿ, ಪೊಲೀಸ್ ಇಲಾಖೆಯ ದುಂಡಪ್ಪ ಥಂಬದ, ಶಿರನಾಳ ಗ್ರಾಪಂ ಸದಸ್ಯ ಬೆಳ್ಳೋಗಸಿದ್ಧ ಶಿ. ಪೂಜಾರಿ, ಮಖಣಾಪುರ ಎಲ್ ಟಿ2 ಸದಸ್ಯ ಪ್ರಕಾಶ ಮೋ. ಚವ್ಹಾಣ, ಶಿರನಾಳ ಗ್ರಾಪಂ ಸದಸ್ಯ ಡಾ. ವಿಜಯ ಕುಮಾರ್ ಸೋ. ಬಗಲಿ, ಶಿರನಾಳ ಗ್ರಾಪಂ ಸದಸ್ಯ ಕಲ್ಲಪ್ಪ ಸಿ. ತಿಕೋಟಿ, ಶಿರನಾಳ ಗ್ರಾಪಂ ಸದಸ್ಯರಾದ ಗಂಗಾಬಾಯಿ ಪಾ. ಲೋಖಂಡೆ, ಮಹಾದೇವಿ ಸು. ಹಳ್ಳಿ ಹಾಗೂ ಕೊಂದನ ಸಿ. ಸಯದ ಭಾಗವಹಿಸುವರು.

ಇತ್ತೀಚಿನ ಸುದ್ದಿ

ಜಾಹೀರಾತು