ಇತ್ತೀಚಿನ ಸುದ್ದಿ
ಕುಶಾಲನಗರದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು: ಸಂಚಾರಿ ನಿಯಮ ಉಲ್ಲಂಘಹಿಸಿದರೆ ಮನೆಗೆ ಬರಲಿದೆ ದಂಡ ರಸೀದಿ
17/04/2026, 09:59
ಗಿರಿಧರ್ ಕೊಂಪುಳಿರ ಮಡಿಕೇರಿ
info.repoeterkarnataka@gmail.com
ಮನೆ ಕಳೆದ ಎರಡು ದಿನಗಳ ಇಂದ ಕೂಡ್ಲೂರು ಕೈಗಾರಿಕಾ ಪ್ರದೇಶದ ಮುಖ್ಯರಸ್ತೆಯಲ್ಲಿ ಇರುವ ಸಿಸಿ ಕ್ಯಾಮರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನಗಳು, ತ್ರಿಬಲ್ ರೈಡಿಂಗ್, ಸೀಟ್ ಬೆಲ್ಟ್ ಹಾಕದೆ ಇರುವುದು, ಓವರ್ ಲೋಡಿಂಗ್ ನಡೆಸುವ ವಾಹನಗಳ ನಂಬರ್ ಫೋಟೋ ಕ್ಲಿಕ್ ಮಾಡಿ ಆಯಾ ವಾಹನ ಮಾಲೀಕರ ಮನೆಗೆ ದಂಡ ರಸೀದಿ ಕಳುಹಿಸುವ ಕಾರ್ಯಕ್ಕೆ ಕುಶಾಲನಗರ ಪೊಲೀಸರು ನಿರ್ಧರಿಸಿದ್ದಾರೆ. ಈ ತಿಂಗಳ 15 ರಿಂದ ಈ ಪ್ರಕ್ರಿಯೆ ಆರಂಭಗೊಂಡಿದೆ.












