ಇತ್ತೀಚಿನ ಸುದ್ದಿ
Madikeri | ಸೋಮವಾರಪೇಟೆ ಕಾರೆಕೊಪ್ಪದಲ್ಲಿ ಚಿರತೆ ಪ್ರತ್ಯಕ್ಷ: ಎಚ್ಚರ ವಹಿಸಲು ಅರಣ್ಯ ಇಲಾಖೆ ಸೂಚನೆ
01/02/2026, 16:50
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸೋಮವಾರಪೇಟೆ ತಾಲ್ಲೂಕಿನ ಕಾರೆಕೊಪ್ಪ ಗ್ರಾಮದ ಸುನಿಲ್ ಮತ್ತು ಕೃಷ್ಣರವರ ಮನೆ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು
ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿಕೊಂಡಿದೆ.

ನಾಯಿಯನ್ನು ಹಿಡಿದು ಎಳೆದೊಯ್ಯುವಾಗ ಶಬ್ದ ಮಾಡಿದ್ದರಿಂದ ಅದನ್ನು ಬಿಟ್ಟು ಚಿರತೆ ಕಾಲ್ಕಿತ್ತಿದೆ. ಚಿರತೆಯ ದಾಳಿಯಿಂದ ನಾಯಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮದ ತೋಟದೊಳಗೆ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಬೋನ್ ಅಳವಡಿಸಲು ಮುಂದಾಗಿದ್ದಾರೆ.













