12:59 AM Monday9 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

Raichuru | ಮಸ್ಕಿ ಕುಕುಂದದಲ್ಲಿ ನೂತನ ಸರಕಾರಿ ಪ್ರೌಢಶಾಲೆ ಉದ್ಘಾಟನೆ: ಶಾಸಕ ತುರುಹಾಳ್ ಚಾಲನೆ

19/01/2026, 21:10

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಸಮೀಪದ ಕುರುಕುಂದ ಗ್ರಾಮದಲ್ಲಿ 2025- 26ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜುರಾಗಿದ್ದು,ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಆರ್. ಬಸನಗೌಡ ತುರುಹಾಳ್ ಅವರು ನೂತನ ಪ್ರೌಢಶಾಲೆಯನ್ನು ಉದ್ಘಾಟಿಸಿದರು.

ರಾಜ್ಯ ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯದ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ ಎಂದು ಹೇಳಿದರು.
ತಾಲೂಕಿನ ಕುರುಕುಂದ ಗ್ರಾಮದಲ್ಲಿ ಆಯಸಿದ್ದ ನೂತನ ಸರ್ಕಾರಿ ಪ್ರೌಢಶಾಲೆ ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಎಲ್ಲರೂ ಶಿಕ್ಷಣ ಪಡೆಯುವಂತಾಗಿದೆ. ಬಡ ಮಕ್ಕಳು ಸರ್ಕಾರಿ ಶಾಲೆಯ ಅವಲಂಬಿಸಿದ್ದು ಮೂಲ ಸೌಲಭ್ಯ ಒದಗಿಸಬೇಕೆಂದು ಚಿಂತನೆ ಸರ್ಕಾರದ್ದಾಗಿದೆ. 2013ರ ಅವಧಿಯ ಹಾಗೂ ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯಕ್ಕೆ ನಮ್ಮ ಸರ್ಕಾರ ನೀಡಿದ ಆದ್ಯತೆ ಹಿಂದಿನ ಯಾವ ಸರ್ಕಾರಗಳಲ್ಲಿ ನೀಡಿಲ್ಲ.
ಗ್ರಾಮೀಣ ಭಾಗಕ್ಕೆ ಸೌಲಭ್ಯದ ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಪಿಸಿ ಶಾಲಿ ನೀಡಲಾಗಿದೆ. ಈಗ ಅಗತ್ಯವಿರುವ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿ ಅನುಕೂಲ ಮಾಡಿಕೊಡಲಾಗಿದೆ. ಈ ಪ್ರೌಢಶಾಲೆ ಕಟ್ಟಡ ಸೇರಿ ಅಭಿವೃದ್ಧಿಗೆ 6 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಶಿಕ್ಷಕರು ಶಿಸ್ತು ಕಾಪಾಡಿಕೊಳ್ಳಬೇಕು. ಪಾಲಕರು ಕೂಡ ಮಕ್ಕಳನ್ನು ಶಿಸ್ತಿನಿಂದ ಶಾಲೆಗೆ ಕಳುಹಿಸಿ ಶಿಕ್ಷಕರು ಅವರನ್ನು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಾರೆ ಎಂದು ಶಾಸಕರು ನುಡಿದರು.
ಶ್ರೀ ಶೇಖರಯ್ಯ ಸ್ವಾಮಿ ಹಿರೇಮಠ ಹಾಗೂ ನಾಗಪ್ಪ ಪಟ್ಟದ ಪೂಜಾರಿ ಉಪಸ್ಥಿತಸರಿದ್ದರು. ಅಧ್ಯಕ್ಷತೆಯನ್ನು SDMC ಯ ಅಧ್ಯಕ್ಷರಾದ ವೆಂಕಪ್ಪ ಬೇರಗಿ ಅವರು ವಹಿಸಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸಲಿಂಗಪ್ಪ ಹುಡೇದ್, ರವಿಯಪ್ಪ ಸಾಹುಕಾರ್, ನಾಗಭೂಷಣ ನವಲಿ, ಅಹಿಂದ ತಾಲೂಕು ಮಾಜಿ ಅಧ್ಯಕ್ಷ ಕರೆಗೌಡ, ಪೊಲೀಸ್ ಪಾಟೀಲ್, SDMC ಉಪಾಧ್ಯಕ್ಷರಾದ ಮಲ್ಲಮ್ಮ ಗಂಡ ವೀರೇಶ್, ಸ್ಥಳ ದಾನಿಗಳಾದ ಸಣ್ಣ ವೆಂಕನಗೌಡ ತಳವಾರ್ ಮತ್ತು ಗುಡದಪ್ಪ ತಳವಾರ್, ಶಾಲಾ ಮುಖ್ಯ ಗುರುಗಳಾದ ಮಹಾಲಕ್ಷ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾರ್ವತೇಮ್ಮ,ಉಪಾಧ್ಯಕ್ಷರಾದ ಶಾರದಾ, ಶಂಕ್ರಪ್ಪ ಕುರುಕುಂದ ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮಣ್ ನಾಯಕ್ ವಕೀಲರು, ಶಿವಬಸನಗೌಡ ಕಾಸರೆಡ್ಡಿ, ಅಂಬಣ್ಣ ಕಾನಿಹಾಳ, ಕವಿತಾ ಪಾಲಾಕ್ಷಿ ಸಾಹುಕಾರ, ಹನುಮಂತ ನಗರೂರ, ಗುಡದಪ್ಪ ಶೇಷಗಿರಿ, ಪಂಪಣ್ಣ ಹಲಗಿ, ಹನುಮಂತ ಬಜಂತ್ರಿ ಹಾಗೂ ಊರಿನ ಮುಖಂಡರುಗಳಾದ ಸಿದ್ದನಗೌಡ ಸಂಜಿ ಮಾಟೂರ್, ಅಮರೇಗೌಡ ಕಾಸರೆಡ್ಡಿ ಪೆಟ್ರೋಲ್ ಬಂಕ್ ಶರಣಪ್ಪ ಚೆಳ್ಳೂರ್, ಸೋಮಶೇಖರ್ ಬಸಾಪುರ್ ಅಂಬರೀಶ್ ಪಗಡದಿನ್ನಿ ಬಸವರಾಜ್ ಸಿಂದನೂರ್ ಬೀರಪ್ಪ ಬುಕನಟ್ಟಿ, ಅಶೋಕ್ ಬುಕ್ಕನಟ್ಟಿ ಹಿರೇ ಲಿಂಗಪ್ಪ ಬೇವಿನಹಾಳ್, ನಾಗಪ್ಪ ಭಾವಿತಾಳ, ದುರ್ಗಪ್ಪ ಶೇಷಗಿರಿ, ಶ್ಯಾಮಣ್ಣ ಬೋವಿ, ಭೀಮರಾಯ್ ಭಜಂತ್ರಿ, ಅನಿಮೇಶ್ ಬಾಗೋಡಿ ರುದ್ರಗೌಡ ಬಜೇಗೌಡ್ರು ಚಂದ್ರಶೇಖರ್ ಬಳಗಾನೂರ, ಶಾಲೆಯ ಎಲ್ಲಾ SDMC ಯ ಪದಾಧಿಕಾರಿಗಳು, ಶಿಕ್ಷಣ ಸಂಯೋಜಕರಾದ ಕುಮಾರಸ್ವಾಮಿ ನಾಗಪ್ಪ ಕೆಲ್ಲೂರು ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು