ಇತ್ತೀಚಿನ ಸುದ್ದಿ
*ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’: ಜ.9ರಿಂದ 20ರ ವರೆಗೆ ವಿಶೇಷ ಉತ್ಸವ*
09/01/2026, 18:25
ಪುತ್ತೂರು(reporterkarnataka.com): ಪರಿಶುದ್ಧತೆ ಮತ್ತು ವಿಶ್ವಾಸಾರ್ಹತೆಯಲ್ಲಿ 81 ವರ್ಷಗಳ ದಾಖಲೆ ಹೊಂದಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ‘ಸಂಕ್ರಾಂತಿಗೆ ಸ್ವರ್ಣಾರಂಭ’ ಎಂಬ ವಿನೂತನ ಉತ್ಸವ ಜನವರಿ 9ರಿಂದ 20ರ ವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಹೊಸ ಆಭರಣಗಳೊಂದಿಗೆ ಸಂಕ್ರಾಂತಿಯ ಸಂಭ್ರಮವನ್ನು ಆಚರಿಸಲು ಮುಳಿಯ ಗೋಲ್ಡ್ ಅಂಡ್ ಡೈಮ್ಸ್ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.
ಹೊಸದಾಗಿ ತಯಾರಾಗಿ ಬಂದಿರುವ ಆಯ್ದ ಅಭರಣಗಳ ಮೇಲೆ ಶೇ. 30ರಷ್ಟು VA ಕಡಿತ ಇರಲಿದ್ದು, 1 ಲಕ್ಷ ರೂ.ಗಳಿಗೂ ಹೆಚ್ಚಿನ ಮೌಲ್ಯದ ಆಯ್ದ ವಜ್ರದ ಆಭರಣಗಳ ಖರೀದಿದಾರರಿಗೆ 5,000 ರೂ.ಗಳ ಕ್ಯಾಶ್ಬ್ಯಾಕ್ ವೋಚರ್ ಕೂಡ ಲಭ್ಯವಾಗಲಿದೆ.
ಹಳೆಯ ಚಿನ್ನಾಭರಣಗಳನ್ನು ಹೊಸ ವಿನ್ಯಾಸದ ಆಭರಣಗಳ ಜತೆಗೆ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ ಕರಗಿಸುವ ಮೌಲ್ಯದ ನಷ್ಟವಿಲ್ಲ, ಗುಪ್ತ ಶುಲ್ಕಗಳಿಲ್ಲ ಹಾಗೂ ಆಭರಣಗಳ ಪರಿಶುದ್ಧತೆಯಲ್ಲಿ ಯಾವುದೇ ಕಡಿತವಿಲ್ಲ ಎಂದು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಪ್ರಕಟಣೆ ತಿಳಿಸಿದೆ.
ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು ಮಳಿಗೆಗಳಲ್ಲಿ ಈ ಸಂಕ್ರಾಂತಿಯ ಕೊಡುಗೆಗಳು ಲಭ್ಯವಿರುತ್ತವೆ.













