7:54 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕ್ಲಬ್ ಹೌಸ್ ನಲ್ಲಿ ಇಂದು ಮೊದಲ ಬಾರಿಗೆ ಪೇಜಾವರ ಶ್ರೀ, ಡಾ. ಕೆ. ಕೆ. ಮುಹಮದ್ ಅವರ ಉಪನ್ಯಾಸ; ಅಯೋಧ್ಯೆಯ ಕುರಿತು ವಿಚಾರ ಮಂಥನ

06/09/2021, 11:06

ಮಂಗಳೂರು(reporterkarnataka.com): ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’ ವಿಷಯದ ಕುರಿತು ವಿಚಾರ ಮಂಥನ ವಿಶೇಷ ಕಾರ್ಯಕ್ರಮ ಸೆಪ್ಟೆಂಬರ್ 6ರಂದು(ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ.

ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿರುವ ಈ ಹೊತ್ತಿನಲ್ಲಿ, ಇಡಿಯ ಹೋರಾಟ ರೂಪುಗೊಂಡ ಬಗೆ, ವಿವಾದ ಪರಿಹಾರವಾದ ರೀತಿ, ಪುರಾತತ್ವ ದಾಖಲೆಗಳ ವಿವರಗಳು, ದೇಶದ ಪ್ರತಿಯೊಬ್ಬರಲ್ಲೂ ರಾಷ್ಟ್ರಾಭಿಮಾನ ಜಾಗೃತವಾದ ಬಗೆ.. ಇವೆಲ್ಲವನ್ನೂ ಮೆಲುಕು ಹಾಕುವ ಒಂದು ವಿಶೇಷ ಕಾರ್ಯಕ್ರಮ ದಿನಾಂಕ 6 ಸೆಪ್ಟೆಂಬರ್ 2021 (ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ. 

ಕಾರ್ಯಕ್ರಮದ ವಿವರ ಹೀಗಿದೆ:

ಶೀರ್ಷಿಕೆ: ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’

ಉಪಸ್ಥಿತಿ ಮತ್ತು ಮುಖ್ಯ ಉಪನ್ಯಾಸ: 

 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು

(ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಹಾಗೂ ವಿಶ್ವಸ್ಥರು, ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್, ಅಯೋಧ್ಯಾ)

ಉಪಸ್ಥಿತಿ: ಶ್ರೀ ರಾಜಶೇಖರಾನಂದ ಶ್ರೀಪಾದಂಗಳವರು

(ಗುರುಪುರ ಶ್ರೀ ವಿದ್ಯಾಮಾನ್ಯ ತೀರ್ಥ ಸಂಸ್ಥಾನಮ್, ವಜ್ರದೇಹಿ ಮಠ)

ವಿಶೇಷ ಆಮಂತ್ರಿತರು: ಪದ್ಮಶ್ರೀ ಪುರಸ್ಕೃತ ಡಾ. ಕೆ. ಕೆ. ಮುಹಮದ್

(ನಿವೃತ್ತ ಅಧಿಕಾರಿಗಳು, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ, ಭಾರತ ಸರಕಾರ)

ವಿಶೇಷ ಆಮಂತ್ರಿತರು: ಶ್ರೀ ಎನ್. ರವಿಕುಮಾರ್

(ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ)

ಕಾರ್ಯಕ್ರಮವನ್ನು ಅಂಕಣಕಾರ ರೋಹಿತ್ ಚಕ್ರತೀರ್ಥ  ನಡೆಸಿಕೊಡಲಿದ್ದಾರೆ. ಗಾಯಕಿ

ರಮ್ಯಾ ವಾಸಿಷ್ಠ ಪ್ರಾರ್ಥನೆ ಹಾಡಲಿದ್ದಾರೆ. ಸಮಾಜದ ಹತ್ತುಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು