ಇತ್ತೀಚಿನ ಸುದ್ದಿ
25 ಲಕ್ಷ ರೂ. ವೆಚ್ಚದಲ್ಲಿ ಕೊಡಿಪಾಡಿ ನಾಗಬ್ರಹ್ಮ ಸ್ಥಾನಕ್ಕೆ ಹೋಗುವ ಬಳಿ ಪಾರ್ಕ್ ಅಭಿವೃದ್ಧಿ: ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ
22/12/2022, 12:43

ಸುರತ್ಕಲ್(reporterlarnataka.com:ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪೂರ್ವ 2ನೇ ವಾರ್ಡಿನ ಕೊಡಿಪಾಡಿ ನಾಗಬ್ರಹ್ಮ ಸ್ಥಾನಕ್ಕೆ ಹೋಗುವ ಬಳಿ ಪಾರ್ಕ್ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಸ್ಥಳೀಯ ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ,ಯುವ ಮೋರ್ಚಾ ಬೂತ್ ಸಂಚಾಲಕ ದೀಪಕ್ ದೇವಾಡಿಗ , ಮೂಡಾ ಸದಸ್ಯರುಗಳಾದ ಜಯನಂದ್ ಅಂಚನ್, ಕವಿತಾ ಪೈ, ಮೂಡಾ ಅಭಿಯಂತರರಾದ ಆರತಿ, ಪ್ರಮುಖರಾದ ಜಗನ್ನಾಥ ಅತ್ತಾರ್ ಕೊಡಿಪಾಡಿ, ಬೂತ್ ಅಧ್ಯಕ್ಷರಾದ ಪದ್ಮಾವತಿ ಕೊಡಿಪಾಡಿ, ರೇಖಾ, ಸಂತೋಷ್ ತಡಂಬೈಲ್, ಬೂತ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಕೊಡಿಪಾಡಿ, ಯಶೋದಾ, ರಮೇಶ್, ಬಾಬು ನಾಯಕ್ ಅಶ್ವಥ್ ,ಕಾರ್ತಿಕ್ ಶೆಟ್ಟಿ, ಕೃಷ್ಣ ಬಂಗೇರ ,ಸುಜಿರ್, ವಿನೋದ ಶೆಟ್ಟಿ,ವಿನಯ ,ಆನಂದ ,ರಾಮಕೃಷ್ಣ , ವಿಷ್ಣು ಭಟ್ ,ಚಂದ್ರಾಸ್ ರೈ, ಗಣಪತಿ ಭಟ್ , ವಿಜೇಂದ್ರ ಕುಲಕರ್ಣಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.