ಇತ್ತೀಚಿನ ಸುದ್ದಿ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಪತ್ನಿ ಮತಯಾಚನೆ: ಮಂಗಳೂರಿನಲ್ಲಿ ಮನೆ ಮನೆಗೆ ತೆರಳಿದ ಸಾಯಿ ರಶ್ಮಿ
20/04/2024, 20:45
ಮಂಗಳೂರು(reporterkarnataka.com):ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪತ್ನಿ ಸಾಯಿ ರಶ್ಮಿ ಅವರು ಶನಿವಾರ ಪತಿಯ ಪರವಾಗಿ ಮಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬೆಂಗಳೂರಿನಿಂದ ಬಂದ ಸಾಯಿ ರಶ್ಮಿ ಅವರು ತನ್ನ ಪತಿಯ ಗೆಲುವಿಗಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಹಲವು ಕಡೆಗಳಲ್ಲಿ ಮನೆ ಮನೆಗೆ ತೆರಳಿ ಪತಿಯ ಪರವಾಗಿ ಮತ ಕೇಳಿದರು. ಕುದ್ರೋಳಿ ಸಮೀಪ ಬಾಲ್ಯದಲ್ಲಿ ಆಟವಾಡುತ್ತಿದ್ದ ತನ್ನ ಅಜ್ಜಿ ಮನೆಯ ವ್ಯಾಪ್ತಿಯ ಮನೆಗಳಿಗೆ ತೆರಳಿ ಅವರು ಮತ ಯಾಚನೆ ಮಾಡಿದರು.ದಕ್ಷಿಣ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಕುಮಾರ್ ಜಪ್ಪಿನಮೊಗರು,ಮತ್ತಿರರು ಉಪಸ್ಥಿತರಿದ್ದರು