ಇತ್ತೀಚಿನ ಸುದ್ದಿ
ಮಂಗಳೂರು: ಪೊಲೀಸ್ ಇಲಾಖೆಯಿಂದ ಏಕತಾ ದಿವಸ್ ಪ್ರತಿಜ್ಞಾ ವಿಧಿ ಬೋಧನೆ
31/10/2023, 12:17
ಮಂಗಳೂರು(reporterkarnataka.com): ಪೊಲೀಸ್ ಇಲಾಖೆ ವತಿಯಿಂದ ಏಕತಾ ದಿವಸ್ ಅಂಗವಾಗಿ ಕಮಿಷನರ್ ಕಚೇರಿಯ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾನೂನು ಸುವವ್ಯಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿ ಗೀತಾ ಕುಲಕರ್ಣಿ, ಸಿಎಆರ್ ಸಹಾಯಕ ಆಯುಕ್ತ ಎಂ.ಉಪಾಸೆ ಮುಂತಾದವರು ಉಪಸ್ಥಿತರಿದ್ದರು.