ಇತ್ತೀಚಿನ ಸುದ್ದಿ
ರೋಶನಿ ನಿಲಯದಲ್ಲಿ ವಿಮೆನ್ ವೆಲ್ನೆಸ್ ಶಿಬಿರ ಹಾಗೂ ಡೆಂಟಲ್ ಚೆಕ್ ಅಪ್ ಟ್ರೀಟ್ಮೆಂಟ್ ಶಿಬಿರ
28/08/2023, 21:14
ಮಂಗಳೂರು(reporterkarnataka.com): ವಿಮೆನ್ ವೆಲ್ನೆಸ್ ಶಿಬಿರ ಹಾಗೂ ಡೆಂಟಲ್ ಚೆಕ್ ಅಪ್ ಟ್ರೀಟ್ಮೆಂಟ್ ಶಿಬಿರ ನಗರ ವೆಲೆನ್ಸಿಯಾ ರೋಶನಿ ನಿಲಯ ಕಾಲೇಜಿನಲ್ಲಿ ಭಾನುವಾರ ಜರುಗಿತು.
ಸೂರ್ಯಕಾಂತಿ ಫೌಂಡೇಶನ್ ಪಂಪವೆಲ್, ಕಮಿಷನ್ ಫಾರ್ ವಿಮೆನ್, ಕಮಿಷನ್ ಫಾರ್ ಹೆಲ್ತ್, ಝುಲೇಖ ಏನಾಪೋಯ ಇನ್ಸ್ಟಿಟ್ಯೂಟ್ ಆಫ್ ಒಂಕಲಜಿ, ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ, ಏನಾಪೋಯ ಡೆಂಟಲ್ ಕಾಲೇಜ್ ಹಾಗೂ ಹಾಸ್ಪಿಟಲ್ ಇನ್ನರ್ ವೀಲ್ ಕ್ಲಬ್ ಆಫ್ ಮಂಗಳೂರು ಸೌತ್, ಯುವವಾಹಿನಿ (ರಿ.)ಕಂಕನಾಡಿ ಘಟಕ, ಬಿ ಎಸ್ ಡಬ್ಲ್ಯೂ ಅಂಡ್ ವಿಮೆನ್ ಸೆಲ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿಲಯ ಸಹಬಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು
ವೇಣುಗೋಪಾಲ ಪುಚ್ಚಪಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಷನಿ ನಿಲಯ ಕಾಲೇಜಿನ ರಿಜಿಸ್ಟ್ರಾರ್ ಪ್ರೊ. ವಿನಿತಾ ರೈ, ಇನ್ನರ್ವೀಲ್ ಮಂಗಳೂರು ಸೌತ್ ಘಟಕ ಅಧ್ಯಕ್ಷೆ ಪ್ರಮೋದಾ ಸತೀಶ್, ಯುವವಾಹಿನಿ (ರಿ.) ಕಂಕನಾಡಿ ಘಟಕದ ಅಧ್ಯಕ್ಷ ಪೃಥ್ವಿರಾಜ್ ಎಂ., ಕ್ಯಾನ್ಸರ್ ತಜ್ಞ ಬೋನಿ ಪೌಲ್, ದಂತ ವೈದ್ಯಕೀಯ ವಿಜ್ಞಾನ ವಿಭಾಗದ ಡಾ. ರೇಖಾ ಶೆಣೈ ಉಪಸ್ಥಿತರಿದ್ದರು.
ಸೂರ್ಯಕಾಂತಿ ಫೌಂಡೇಶನ್ ಅಧ್ಯಕ್ಷೆ ವಿದ್ಯಾ ರಾಕೇಶ್ ಸ್ವಾಗತಿಸಿದರು. ಡಾ.ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸೂರ್ಯಕಾಂತಿ ಫೌಂಡೇಶನ್ ಕಾರ್ಯದರ್ಶಿ ಸಾರಿಕಾ ಪೂಜಾರಿ ವಂದಿಸಿದರು.
ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಐರಿನ್ ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಹಾಗೂ ಒರಲ್ ಕ್ಯಾನ್ಸರ್ ಬಗ್ಗೆ ಡಾ. ರೇಖಾ ಶೆಣೈ ಮಾಹಿತಿ ನೀಡಿದರು.