ಇತ್ತೀಚಿನ ಸುದ್ದಿ
ಮಾರ್ಚ್ 17: ಪುನೀತ್ ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ನೇತ್ರದಾನ, ರಕ್ತದಾನ ಶಿಬಿರ
09/03/2022, 10:30
ಮಂಗಳೂರು(reporterkarnataka.com): ಕರ್ನಾಟಕ ಜಾನಪದ ಪರಿಷತ್, ಕೋಸ್ಟಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರ ಒಕ್ಕೂಟ, ಲಯನ್ಸ್ ಕ್ಲಬ್,ವೆನ್ಲಾಕ್ ಜಿಲ್ಲಾಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ
ಆಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನವಾದ ಮಾರ್ಚ್ 17ರಂದು ಬೃಹತ್ ನೇತ್ರದಾನ, ರಕ್ತದಾನ ಶಿಬಿರ ನಗರದ ಪುರಭವನದಲ್ಲಿ ನಡೆಯಲಿದೆ.
ಇಲ್ಲಿನಾವು ಜೀವನವನ್ನು ಸಾರ್ಥಕ ಮಾಡಲು, ನಮ್ಮ ಮೆದುಳು ಸಾವಿನ ನಂತರ ಅಂಗಾಂಗಗಳನ್ನು ದಾನ ಮಾಡುವ ವಾಗ್ದಾನ ಮಾಡಲು ಒಂದು ಅವಕಾಶವಿದೆ.
ಕಲಾವಿದರು, ಅಭಿಮಾನಿಗಳು, ಕಲಾ ಪೋಷಕರು ಎಲ್ಲರೂ ಒಂದಾಗಿ ರಕ್ತದಾನ ಹಾಗೂ ಸ್ವಇಚ್ಚೆಯಿಂದ ನೇತ್ರ ದಾನದ ವಾಗ್ದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿ ಗೊಳಿಸೋಣ ಎಂದು ಕರ್ನಾಟಕ ಜನಪದ ಅಕಾಡೆಮಿ ದ.ಕ. ಜಿಲ್ಲಾಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್ ತಿಳಿಸಿದ್ದಾರೆ.