12:16 AM Friday26 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಅಸಹಾಯಕರಿಗೆ ಸಹಾಯದ ಹಸ್ತ ಚಾಚುವ  ಸುವರ್ಣ ಸಂಸ್ಥಾನದ ಶ್ರೀ ಚನ್ನಮಲ್ಲ ಶಿವಯೋಗಿಗಳು 

04/06/2021, 18:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

 ಮಸ್ಕಿ ತಾಲೂಕಿನ ಕನಕಗಿರಿ-ಮೆದಿಕಿನಾಳದ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಮಠವು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ,  ಶೈಕ್ಷಣಿಕವಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಡಾ. ಚೆನ್ನಮಲ್ಲ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜದಲ್ಲಿ ಅಸಹಾಯಕರಿಗೆ ಸಹಾಯದ ಹಸ್ತವನ್ನು ಚಾಚುತ್ತಿದೆ.


2018ರಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗಾಗಿ 50,001/-ರೂ.ಗಳನ್ನೂ ಹಾಗೂ 10 ಕ್ವಿಂಟಾಲ್ ಅಕ್ಕಿ, 1 ಕ್ವಿಂಟಾಲ್ ಗೋಧಿ, 3,1/2 ಕ್ವಿಂಟಾಲ್

ತೊಗರಿ ಬೇಳೆ, 2 ಕ್ವಿಂಟಾಲ್, ಅಕ್ಕಿ ನುಚ್ಚನ್ನು ಸಿ.ಎಂ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಅಲ್ಲದೇ 2019ರಲ್ಲಿ ಮತ್ತೆ ನೆರೆಯಿಂದ ರಾಜ್ಯಕ್ಕೆ ತೊಂದರೆಯಾದಾಗ ಸಿಎಂ ಪರಿಹಾರ ನಿಧಿಗೆ 50,001/- ಗಳನ್ನು ನೀಡಿರುವದಲ್ಲದೆ, ಅದೇ ವರ್ಷ ನೆರೆಯಿಂದಾಗಿ ಬಾದಾಮಿಯ ಶಿವಯೋಗಮಂದಿರ ಮಲಪ್ರಭಾ ನದಿಯ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದ್ದರಿಂದ ಅಲ್ಲಿನ ನೂರಾರು ಗೋವುಗಳಿಗೆ ತೊಂದರೆಯಾದಾಗ ಶಿವಯೋಗ ಮಂದಿರ ಸಂಸ್ಥೆಗೆ 50,000/- ರೂಗಳನ್ನು ನೀಡಲಾಗಿದೆ. 2020 ಕಳೆದ ವರುಷ ಜಗತ್ತಿಗೆ ಕಾಡಿದ ಕೊರೊನಾ  ಮಹಾಮಾರಿಯ ವಿರುದ್ಧ ಹೋರಾಡಲು ಸಿಎಂ ಪರಿಹಾರ ನಿಧಿಗೆ 50,001/-ರೂ.ಗಳನ್ನು ನೀಡಿದ್ದಾರೆ. ಈ ವರುಷ ಮತ್ತೇ ಕೊರೊನಾದ 2ನೇ ಅಲೆಯೂ ಭೀಕರವಾಗಿ ಜನರನ್ನು ಕಾಡುತ್ತಿದೆ. ಲಾಕ್‌ಡೌನಿನ ಈ ಸಂದರ್ಭದಲ್ಲಿ ಬಡವರ ಬದುಕು ದುಡುಮೆ ಇಲ್ಲದೇ, ಮನೆಯಲ್ಲಿ ಊಟಕ್ಕೂ ದುಸ್ತರವಾಗಿರುವುದನ್ನು ಮನಗಂಡು ಕನಕಗಿರಿ-ಮೆದಿಕಿನಾಳ ಭಾಗದ 100 ಆಯ್ದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ, ಸಾಮಾಜಿಕವಾಗಿ ಮಠ ತನ್ನ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿದೆ.

ಆಹಾರ ಧಾನ್ಯಗಳ ಚೀಲದಲ್ಲಿರುವ ಸಾಮಗ್ರಿಗಳು:

1) 5 ಕೆ.ಜಿ. ಸೋನಾಮಸೂರಿ ಅಕ್ಕಿ

2) 1 ಕೆ.ಜಿ. ಗೋಧಿ ಹಿಟ್ಟು,

3) 1 ಕೆ.ಜಿ. ಬೇಳೆ

4) 1 ಕೆ.ಜಿ. ಒಳ್ಳೆ ಎಣ್ಣೆ

5) 1 ಕೆ.ಜಿ. ಅಲಸಂಧಿ ಕಾಳು

6) 1 ಕೆ.ಜಿ. ಶೇಂಗಾ ಬೀಜ 

7) 1 ಕೆ.ಜಿ. ಸಕ್ಕರೆ

8) 1 ಕೆ.ಜಿ. ರವಾ

9) 1 ಕೆ.ಜಿ. ಉಪ್ಪು

10) MTR ಮಸಾಲಿ,

11) ಜೀರಿಗೆ

12) ಸಾವಿರ

13) ಬಳ್ಳೊಳ್ಳಿ

14) ಖಾರ ಪುಡಿ

15) ಅರಿಶಿಣ ಪುಡಿ

16) ಚಹಾ ಪುಡಿ

17) 1 ಮೈಗೆ ಹಚ್ಚುವ ಸೋಪ 18) 1 ಬಟ್ಟೆ ತೊಳೆಯುವ ಸೋಪ. ಬಡವರ ಕೂಲಿಕಾರ್ಮಿಕ ಸಂಕಷ್ಟ ಇದಲ್ಲಿರುವ ರಿಗೆ ಶ್ರೀಮಠದ ಶ್ರೀ ಚನ್ನಮಲ್ಲ ಶಿವಯೋಗಿಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳ ಸಂಕಷ್ಟದಲ್ಲಿರುವ ದಾನ ನೀಡುವುದು ಪುಣ್ಯದ ಕೆಲಸ ವೆಂದು ಗ್ರಾಮ ಸದ್ಭಕ್ತರು ಮಾತನಾಡಿಕೊಳ್ಳುತ್ತಾರೆ.

 ಈ ಸಂದರ್ಭದಲ್ಲಿ ರಾಜಣ್ಣ ಮಲ್ಕಣ್ಣ ಶಿವಪುತ್ರಯ್ಯ ಸ್ವಾಮಿ ಶರಣಯ್ಯ ಸ್ವಾಮಿ ಮಲ್ಲಪ್ಪ ದಿದ್ದಿಗಿ ಆದಪ್ಪ ಕುಂಬಾರ್ ಇನ್ನು ಅನೇಕ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು