1:58 PM Sunday22 - June 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರದಲ್ಲಿ ಕಮೀಶನ್ ದಂಧೆ 224 ಶಾಸಕರಿಗೂ ಗೊತ್ತಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಚಾಲಕರ ವಿರುದ್ಧ ಕಠಿಣ ಕ್ರಮ: ಸಾರಿಗೆ ಸಚಿವ ರಾಮಲಿಂಗಾ… Bagalkote | ಪಟ್ಟದಕಲ್ಲು ವಿಶ್ವ ಪರಂಪರೆ ತಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… Udupi | ನೈತಿಕ ಪಾಠ ಶಾಸಕ ಸುನಿಲ್ ಕುಮಾರ್ ಹೇಳಿ ಕೊಡಬೇಕಿಲ್ಲ: ಸಚಿವೆ… ಜಿಲ್ಲಾಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ಯೋಗ ಮಂದಿರ ಸ್ಥಾಪನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ: ಕಂದಾಯ, ಆರೋಗ್ಯ ಹಾಗೂ ಎಂಜಿನಿಯರಿಂಗ್ ವಿಭಾಗಗಳ ತೀವ್ರ… Bangalore | ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ: ರಾಜ್ಯಾದ್ಯಂತ ಪರಿಸರ… Power Minister | ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ; ನೌಕರರ ಬೇಡಿಕೆಗಳಿಗೆ ಸ್ಪಂದನೆ:… ವಿದ್ಯುತ್ ಪ್ರಸರಣ ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಮುಖ್ಯಮಂತ್ರಿ… ಎಂಜಿಎನ್ ವಿವೈ ಕ್ರಿಯಾ ಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಗರಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ಯೋಗವು ಕೇವಲ ಶಾರೀರಿಕ ವ್ಯಾಯಾಮವಲ್ಲ, ಮಾನಸಿಕ ಸ್ಪಷ್ಟತೆ ಮತ್ತು ಆಂತರಿಕ ಸಾಮರಸ್ಯ ಪೋಷಿಸುತ್ತದೆ: ಜಿಲ್ಲಾ ಆಯುಷ್ ಅಧಿಕಾರಿ ಡಾ. ಇಕ್ಬಾಲ್

22/06/2025, 13:58

ಮಂಗಳೂರು(reporterkarnataka.com): ಮಂಗಳೂರಿನ MSNIM ನಲ್ಲಿ “ಒಂದು ಭೂಮಿಗೆ ಯೋಗ, ಒಂದು ಆರೋಗ್ಯ” ಎಂಬ ವಿಷಯದ ಮೇಲೆ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (MSNIM), ಯುವನಿಕಾ ಫೌಂಡೇಶನ್, ವಿಶ್ವ ಸಂಸ್ಥೆ – ಸ್ವಯಂಸೇಕರು ಭಾರತ- ನವ ದೆಹಲಿ , ಹೆಲ್ತ್ ವಾಲಂಟಿಯರ್ಸ್ ಇಂಡಿಯಾ ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನ ಜಂಟಿಯಾಗಿ ಅಂತಾರಾಷ್ಟ್ರೀಯ ಯೋಗ ದಿನ 2025 ಆಯೋಜಿಸಲಾಯಿತು.
ಯುವನಿಕಾ ಫೌಂಡೇಶನ್‌ನ ರಘುವೀರ ಸೂಟರ್ ಪೇಟೆ, ತಮ್ಮ ಪ್ರಾಸ್ತಾವಿಕವಾಗಿ ಯೋಗದ ಮಹತ್ವವನ್ನು ವಿವರಿಸಿ, ಅದು ಯುವ ಮನಸ್ಸುಗಳನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಬಲಿಷ್ಠವಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಉಲ್ಲೇಖಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿ, ಡಾ. ಮೊಹಮ್ಮದ್ ಇಕ್ಬಾಲ್ ಅವರು ಉದ್ಘಾಟಿಸಿದರು. ಅವರು ಮಾತನಾಡಿದಾಗ, ಯೋಗವು ಅಷ್ಟಾಂಗ ಯೋಗದ ಎಂಟು ಅಂಗಗಳಲ್ಲಿ ಆಧಾರಿತವಾದ ಸಮಗ್ರ ಶಿಸ್ತಿನ ಪಾಠವಾಗಿದೆ ಎಂಬುದನ್ನು ಒತ್ತಿಹೇಳಿದರು. ಯೋಗವು ಕೇವಲ ಶಾರೀರಿಕ ವ್ಯಾಯಾಮವಲ್ಲ, ಅದು ಮಾನಸಿಕ ಸ್ಪಷ್ಟತೆ ಮತ್ತು ಆಂತರಿಕ ಸಾಮರಸ್ಯವನ್ನು ಪೋಷಿಸುತ್ತದೆ ಮತ್ತು ಸ್ವಯಂ ಅರಿವು ಮತ್ತು ಒಟ್ಟಾರೆ ಯೋಗಕ್ಷೇಮದ ಮಾರ್ಗವಾಗಿದೆ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಮುಖ್ಯ ಅತಿಥಿಯಾಗಿ ಹಾಜರಾದ ಹೆಲ್ತ್ ವಾಲಂಟಿಯರ್ಸ್ ಇಂಡಿಯಾದ ಸ್ಥಾಪಕರಾದ ಶ್ರೀ ರಿಷಿ ಬಂಶಿವಾಲ್ ಅವರು, ಜಾಗತಿಕವಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೋಗವು ವೈಯಕ್ತಿಕ ಮತ್ತು ರಾಷ್ಟ್ರೀಯ ಆರೋಗ್ಯದ ಶಕ್ತಿಶಾಲಿ ಸಾಧನವಾಗಿದೆ ಎಂದು ವಿವರಿಸಿದರು. ಯುವಕರು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ ಅವರು ಸಲಹೆ ನೀಡಿದರು.

ವಿಶ್ವ ಸಂಸ್ಥೆ – ಸ್ವಯಂಸೇಕರು ಭಾರತ, ನವದೆಹಲಿ, ರಾಷ್ಟ್ರೀಯ ಸಂಯೋಜಕರಾದ ಶ್ರೀ ಸುಶೀಲ್ ಚೌಧರಿ ಅವರ ಅನುಪಸ್ಥಿಯಲ್ಲಿ , ಸಂದೇಶವನ್ನು ಕಾರ್ಯಕ್ರಮದ ಸಂದರ್ಭದಲ್ಲಿ ಹಂಚಲಾಯಿತು. ಅವರು ಯೋಗ ದಿನದ ಶುಭಾಶಯಗಳನ್ನು ತಿಳಿಸಿ, ಯೋಗ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಘಟಕರ ಸಹಕಾರಾತ್ಮಕ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷೆಯಾಗಿದ್ದ ಹಾಗೂ MSNIM ಸಂಸ್ಥೆಯ ನಿರ್ದೇಶಕರಾದ ಡಾ. ಮೊಲಿ ಎಸ್. ಚೌಧುರಿ ಅವರು “ಯೋಗ: ಶಿಸ್ತು, ಸಮತೋಲನ ಮತ್ತು ಆತ್ಮ ಅನ್ವೇಷಣೆಯ ಪಯಣ” ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು. “ಭವಿಷ್ಯವನ್ನು ಉಸಿರಾಡಿ, ಭೂತಕಾಲವನ್ನು ಹೊರಹಾಕಿ” ಎಂಬ ಉಲ್ಲೇಖದೊಂದಿಗೆ ಮುಕ್ತಾಯಗೊಳಿಸುತ್ತಾ, ಅವರು ಯೋಗವನ್ನು ಜಾಗತಿಕ ಯೋಗಕ್ಷೇಮ ಮತ್ತು ಪ್ರಜ್ಞಾಪೂರ್ವಕ ಜೀವನಕ್ಕೆ ಭಾರತದ ಕಾಲಾತೀತ ಕೊಡುಗೆ ಎಂದು ಬಣ್ಣಿಸಿದರು.


ಕಾರ್ಯಕ್ರಮದಲ್ಲಿ ಕಾರ್ಥಿಕ್ ಶೆಟ್ಟಿ ಮತ್ತು ಹರಿಣಿ (ದೇಲಂಪಾಡಿ ಯೋಗ ಪ್ರತಿಷ್ಠಾನ), ಪ್ರತ್ವಿಕಾ, ದಾನಿಷ್ (ಯುವನಿಕಾ ಫೌಂಡೇಶನ್), ಹಿತೇಶ್ ಬಂಗೇರಾ, ದೀಕ್ಷಿತ್ ನಾಯಕ್ (ವಿಶ್ವ ಸಂಸ್ಥೆ – ಸ್ವಯಂಸೇಕರು ಭಾರತ), MSNIMನ ಉಪನ್ಯಾಸಕರು, ವಿದ್ಯಾರ್ಥಿಗಳು, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಯೋಗಿತಾ ಶೆಟ್ಟಿ, ಸಹಾಯಕ ಆಡಳಿತ ಅಧಿಕಾರಿ, ಹಾಗೂ ಹೆಲ್ತ್ ವಾಲಂಟಿಯರ್ಸ್ ಸದಸ್ಯರು ಭಾಗವಹಿಸಿದ್ದರು ಅತಿಥಿಗಳ ಸ್ವಾಗತವನ್ನು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮಾನಸ ಹಾಗೂ ವಂದನಾರ್ಪಣೆಯನ್ನು ಶ್ರೀಮತಿ ದಿವ್ಯಾ ಆಚಾರ್ ನೆರವೇರಿಸಿದಿರು , ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಕೀರ್ತನಾ ಕೆ. ಶೆಟ್ಟಿ, ಅಧ್ಯಕ್ಷರು, ವಿದ್ಯಾರ್ಥಿ ಪರಿಷತ್ತು,MSNIM (ಎಂ.ಬಿ.ಎ)ವಹಿಸಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು