10:06 PM Thursday18 - December 2025
ಬ್ರೇಕಿಂಗ್ ನ್ಯೂಸ್
ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ ಸ್ಪರ್ಧೆ: ಬಾಲ ಪ್ರತಿಭೆ ಅವನಿ ಹಾಗೂ ಭೂಮಿಕಾ ಶೆಟ್ಟಿ ಮೇ ತಿಂಗಳ ಟಾಪರ್

02/06/2021, 06:58

ಮಂಗಳೂರು(reporterkarnataka news); ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆ ಅವನಿ ಮೋಹನ್ ಹಾಗೂ ಭೂಮಿಕಾ ಆರ್. ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಅವನಿ ಮೋಹನ್ ಮಡಿಕೇರಿಯವರು. ಮೋಹನ್ ಹಾಗೂ ವೀಣಾ ಅವರ ಪುತ್ರಿ. ನಟನೆ, ಗಾಯನ, ನೃತ್ಯ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಅವನಿ ತನ್ನದೇ ಶೈಲಿಯ ನಟನೆ ಮೂಲಕ ಜನಮೆಚ್ಚುಗೆ ಪಡೆದಿದ್ದಾರೆ. ಬಹುಮುಖ ಪ್ರತಿಭೆ ಈ ಬಾಲ ಕಲಾವಿದೆ.

ಭೂಮಿಕಾ ಶೆಟ್ಟಿ ಅವರು ಸುಳ್ಯದ ಕೆವಿಜಿ ಡೆಂಡಲ್ ಕಾಲೇಜಿನಲ್ಲಿ  ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ. ತಂದೆ ಸರಕಾರಿ ಉದ್ಯೋಗಿ ರವೀಂದ್ರನಾಥ ಶೆಟ್ಟಿ ಹಾಗೂ ತಾಯಿ ಉಜ್ವಲಾ ಆರ್. ಶೆಟ್ಟಿ. ಕಾಸರಗೋಡಿ ನಸಸಿಹಿತ್ಲು-ಶಿವ ಭೂಮಿ ನೆಟ್ಟಣಿಗೆಯಲ್ಲಿ ವಾಸವಾಗಿದ್ದಾರೆ.

ಕಲಿಕೆಯಲ್ಲಿ ಬಹಳಷ್ಟು ಮುಂದಿರುವ ಭೂಮಿಕಾ ಅವರು 10ನೇ  ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದು ಶೇ. 97 ಅಂಕ ಪಡೆದಿದ್ದರು. ಹಾಗೆ ಪಿಯುಸಿಯಲ್ಲಿ ಪಿಸಿಎಂಬಿಯಲ್ಲಿ ಶೇ. 92 ಅಂಕ ಗಳಿಸಿದ್ದರು. ಕೋಳಿಕ್ಕಜೆ ಬಾಲಸುಬ್ರಹ್ಮಣ್ಯಂ ಭಟ್ ಅವರಿಂದ ಸಂಗೀತ ಅಭ್ಯಾಸ. ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯ ಕಲಿತರು. ಭರತನಾಟ್ಯ ಸೀನಿಯರ್ ಗ್ರೇಡ್ ನಲ್ಲಿ ಶೇ. 80 ಅಂಕ ಪಡೆದಿದ್ದರು. ಭರತನಾಟ್ಯದಲ್ಲಿ ಇದುವರೆಗೆ 230ಕ್ಕೂ ಅಧಿಕ ಕಾಯ೯ಕ್ರಮಗಳನ್ನು ನೀಡಿದ್ದಾರೆ.

ಸಂಗೀತ, ಭರತನಾಟ್ಯ ಜತೆಗೆ ಚಿತ್ರಕಲೆಯ ಹವ್ಯಾಸವೂ ಇವರಿಗಿದೆ. ಸತತವಾಗಿ 5ವಷ೯ ಜಿಲ್ಲಾ ಮಟ್ಟದಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಕಂಠಪಾಠ ದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭರತನಾಟ್ಯ ದಲ್ಲಿ ಜಿಲ್ಲಾಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು