10:32 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ ಸ್ಪರ್ಧೆ: ಬಾಲ ಪ್ರತಿಭೆ ಅವನಿ ಹಾಗೂ ಭೂಮಿಕಾ ಶೆಟ್ಟಿ ಮೇ ತಿಂಗಳ ಟಾಪರ್

02/06/2021, 06:58

ಮಂಗಳೂರು(reporterkarnataka news); ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಬಾಲಪ್ರತಿಭೆ ಅವನಿ ಮೋಹನ್ ಹಾಗೂ ಭೂಮಿಕಾ ಆರ್. ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಅವನಿ ಮೋಹನ್ ಮಡಿಕೇರಿಯವರು. ಮೋಹನ್ ಹಾಗೂ ವೀಣಾ ಅವರ ಪುತ್ರಿ. ನಟನೆ, ಗಾಯನ, ನೃತ್ಯ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಅವನಿ ತನ್ನದೇ ಶೈಲಿಯ ನಟನೆ ಮೂಲಕ ಜನಮೆಚ್ಚುಗೆ ಪಡೆದಿದ್ದಾರೆ. ಬಹುಮುಖ ಪ್ರತಿಭೆ ಈ ಬಾಲ ಕಲಾವಿದೆ.

ಭೂಮಿಕಾ ಶೆಟ್ಟಿ ಅವರು ಸುಳ್ಯದ ಕೆವಿಜಿ ಡೆಂಡಲ್ ಕಾಲೇಜಿನಲ್ಲಿ  ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ. ತಂದೆ ಸರಕಾರಿ ಉದ್ಯೋಗಿ ರವೀಂದ್ರನಾಥ ಶೆಟ್ಟಿ ಹಾಗೂ ತಾಯಿ ಉಜ್ವಲಾ ಆರ್. ಶೆಟ್ಟಿ. ಕಾಸರಗೋಡಿ ನಸಸಿಹಿತ್ಲು-ಶಿವ ಭೂಮಿ ನೆಟ್ಟಣಿಗೆಯಲ್ಲಿ ವಾಸವಾಗಿದ್ದಾರೆ.

ಕಲಿಕೆಯಲ್ಲಿ ಬಹಳಷ್ಟು ಮುಂದಿರುವ ಭೂಮಿಕಾ ಅವರು 10ನೇ  ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದು ಶೇ. 97 ಅಂಕ ಪಡೆದಿದ್ದರು. ಹಾಗೆ ಪಿಯುಸಿಯಲ್ಲಿ ಪಿಸಿಎಂಬಿಯಲ್ಲಿ ಶೇ. 92 ಅಂಕ ಗಳಿಸಿದ್ದರು. ಕೋಳಿಕ್ಕಜೆ ಬಾಲಸುಬ್ರಹ್ಮಣ್ಯಂ ಭಟ್ ಅವರಿಂದ ಸಂಗೀತ ಅಭ್ಯಾಸ. ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯ ಕಲಿತರು. ಭರತನಾಟ್ಯ ಸೀನಿಯರ್ ಗ್ರೇಡ್ ನಲ್ಲಿ ಶೇ. 80 ಅಂಕ ಪಡೆದಿದ್ದರು. ಭರತನಾಟ್ಯದಲ್ಲಿ ಇದುವರೆಗೆ 230ಕ್ಕೂ ಅಧಿಕ ಕಾಯ೯ಕ್ರಮಗಳನ್ನು ನೀಡಿದ್ದಾರೆ.

ಸಂಗೀತ, ಭರತನಾಟ್ಯ ಜತೆಗೆ ಚಿತ್ರಕಲೆಯ ಹವ್ಯಾಸವೂ ಇವರಿಗಿದೆ. ಸತತವಾಗಿ 5ವಷ೯ ಜಿಲ್ಲಾ ಮಟ್ಟದಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಕಂಠಪಾಠ ದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭರತನಾಟ್ಯ ದಲ್ಲಿ ಜಿಲ್ಲಾಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು