1:08 AM Wednesday16 - July 2025
ಬ್ರೇಕಿಂಗ್ ನ್ಯೂಸ್
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ…

ಇತ್ತೀಚಿನ ಸುದ್ದಿ

ವೀರಾಜಪೇಟೆ: ಅನ್ನ ನೀಡಿದ ಸಂಸ್ಥೆಗೆ ಕನ್ನ;  1 ಲಕ್ಷ ರೂ. ದೋಚಿದ ಇಬ್ಬರು ಡೆಲಿವರಿ ಬಾಯ್ ಗಳ ಬಂಧನ

25/06/2022, 12:18

ಮಡಿಕೇರಿ(reporterkarnataka.com):  ಅನ್ನ ನೀಡಿದ ಸಂಸ್ಥೆಗೆ ಕನ್ನ ಹಾಕಲು ಹೋಗಿ ಇಬ್ಬರು ಆರೋಪಿಗಳು ಪೊಲೀಸ್ ಅತಿಥಿಯಾದ ಘಟನೆ ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿ ನಡೆದಿದೆ.

ವೆಬ್ ಸಿರೀಸ್ ನಲ್ಲಿ ಬರುವ ಸೀರಿಯಲ್ ಗಳನ್ನು ವೀಕ್ಷಿಸಿ ಅದೇ ತಂತ್ರವನ್ನು ಬಳಸಿ ನಗದು ಕಳ್ಳತನ ಮಾಡಲು ಹೊರಟು ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮದ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್  (೨೦)  ಮತ್ತು ಸೆಬಾಸ್ಟೀನ್ ಡಿಸೋಜಾ (೨೦) ಬಂಧನಕ್ಕೀಡಾಗಿದ್ದಾರೆ.

ಘಟನೆಯ ವಿವರ: ವಿರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಇನ್ಪಾಕಾರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 12ರಂದು ರಾತ್ರಿ ನಗದು ಕಳ್ಳತನ ನಡೆದಿತ್ತು. ಬಂಧಿತ ಇಬ್ಬರು ಆರೋಪಿಗಳು  ಬಡ ಕುಟುಂಬದಿಂದ ಬಂದಿರುವರಾಗಿದ್ದಾರೆ. ಕೆಲಸ ಅರಿಸಿಕೊಂಡಿರುವ ವೇಳೆಯಲ್ಲಿ ಸಂಸ್ಥೆಯಲ್ಲಿ ಡೆಲೆವರಿ ಬಾಯ್ ಗಳಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಮೊದಲಿಗೆ ಪ್ರಕರಣದ ಎರಡನೇ ಆರೋಪಿಯಾಗಿರುವ ಸೆಬಾಸ್ಟೀನ್ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಂತರ ಸ್ನೇಹಿತನಾದ ಸಿವಿನ್ ಕೆಲಸಕ್ಕೆ ಸೇರ್ಪಡೆಯಾಗುತ್ತಾನೆ. ಒಂದೇ ಊರಿನವರಾದ ಇರ್ವರು ಸೇವೆಯಲ್ಲಿ ಮುಂದುವರೆಯುತ್ತಾರೆ. ಸಿವಿನ್ ಗೆ ಮೋಬೈಲ್ ನಲ್ಲಿ ಬರುವ  ಮನಿ ಹ್ಯಾಕ್ ವೆಬ್ ಸಿರೀಸ್ ನೋಡುವ ಹುಚ್ಚು ತೆಲೆಗೇರುತ್ತದೆ. ಸಿರೀಸ್ ನಿಂದ ಪ್ರಭಾವಿತನಾದ ಸಿವಿನ್ ತನ್ನ ಮಿತ್ರನಿಗೂ ತಿಳಿಸಿಕೊಡುತ್ತಾನೆ. ನಂತರದಲ್ಲಿ ಫ್ರೀ ಪ್ಲೇನ್ ಸಿದ್ದವಾಗುತ್ತದೆ. ದಿನ ನಿತ್ಯ ಸಂಸ್ಥೆಗೆ ಲಕ್ಷದ ವ್ಯವಹಾರ ನಡೆಯುತ್ತಿದೆ. ಹೇಗಾದರು ಮಾಡಿ ಹಣ ಲಪಾಟಯಿಸಬೇಕು ಎಂದು ಇರ್ವರ ಪ್ಲಾನ್ ಹಾಕುತ್ತಾರೆ. ಅದರಂತೆ ಸಂಸ್ಥೆಗೆ ಸೇರಿದ ಸುಮಾರು 1 ಲಕ್ಷ ರೂ. ಲಪಟಾಯಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು