3:04 AM Tuesday31 - March 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4…

ಇತ್ತೀಚಿನ ಸುದ್ದಿ

ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!?

17/05/2022, 19:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮೇ17ರಂದು ಕೆಲ ಮಕ್ಕಳನ್ನು ಬಳಸಿ ಶಾಲೆ ಸ್ವಚ್ಚತೆ ಮಾಡಿಸಲಾಗಿದೆ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಹತ್ತಿಸಿ ಮಾಳಿಗಿ ಮೇಲ್ಭಾಗದಲ್ಲಿದ್ದ, ಭಾರೀ ಗಾತ್ರದ ಸಿಮೆಂಟ್ ತ್ಯಾಜ್ಯದ ಗುಪ್ಪೆಯನ್ನು ತೆರವುಗೊಳಿಸಲು ಮಕ್ಕಳನ್ನು ಬಳಸಲಾಗಿದೆ.   ಮಕ್ಕಳನ್ನು ಕಟ್ಟಡದ ಮೇಲ್ಭಾಗದ ಚಾವಣೆ ಮೇಲೆ ಹತ್ತಲು ತಿಳಿಸಿದ್ದು, ಕಸ ಹಾಗೂ ತ್ಯಾಜ್ಯ ನೀರು ಮತ್ತು ಸಿಮೆಂಟ್ ತ್ಯಾಜ್ಯವನ್ನು ಕೀಳಲು ಸೂಚಿಸಿದ್ದಾರೆ.

ತ್ಯಾಜ್ಯ ತೆಗೆಯಲು ತಾಸು ಗಟ್ಟಲೆ ಮಕ್ಕಳಿಗೆ ಸಾಮಾಗ್ರಿಗಳನ್ನು ನೀಡಿ ತಾಸುಗಟ್ಟಲೆ ಕೆಲಸ ಮಾಡಿಸಲಾಗಿದೆ. ಶಾಲಾ ಬಿಸಿಯೂಟ ಕೋಣೆಯ ಮೇಲ್ಭಾಗದಲ್ಲಿದ್ದ ಕಸ ಹಾಗೂ ತ್ಯಾಜ್ಯ  ಸಿಮೆಂಟ್ ಕಿತ್ತು ತೆಗೆಯಲು, ಅವರಿಗೆ ಸುತ್ತಿಗೆ ಹಾಗೂ ಕಿರಿ ಹಾರೆ ಕೊಟ್ಟು ಕೆಲಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಸಲಿಗೆ ಪೂಜಾರ ಹಳ್ಳಿ ತಾಂಡ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ ನಾಯಕ ರವರ ಅಜ್ಜಿಯ ತವರು ಊರೆಂದು ತಿಳಿದುಬಂದಿದೆ. ಬಿ.ಇ.ಓರವರ ನಂಟಿರುವ ಗ್ರಾಮದ ಶಾಲೆಯಲ್ಲಿ ಈ ದುರಾವಸ್ತೆ ಜರುಗಿದೆ. ಶಾಲಾವರಣ ದನಗಳ ಕೊಟ್ಟಿಗೆ ರೂಪದಲ್ಲಿದೆ. ಕಸ ತ್ಯಾಜ್ಯದಿಂದ ಶಾಲಾವರಣ ತುಂಬಿದೆ. ಮಳೆ ನೀರು ನಿಂತು ಕೊಚ್ಚೆ ಗುಂಡಿ ನಿರ್ಮಾಣವಾಗಿದೆ. ಆದರೂ ಸಂಬಂಧಿಸಿದವರು ಕ್ರಮ ಜರುಗಿಸಿಲ್ಲ. ಮಕ್ಕಳಿಗೆ ಶಿಸ್ಥಿನೊಂದಿಗೆ ಶಿಕ್ಷಣ ನೀಡಬೇಕಾಗಿರುವ ಗುರುಗಳು, ಅವರೇ ನಿಂತು ಮಕ್ಕಳಿಗೆ ಗಾರೆ ಹಾಗೂ ಕಸ ಮತ್ತು ಸಿಮೆಂಟ್,ತ್ಯಾಜ್ಯ ನೀರು ಬಳಿಯಲು ಬಳಸಿಕೊಂಡಿದ್ದಾರೆ, ಏನೂ ತಿಳಿಯದ ಮಕ್ಕಳಿಗೆ ಶಿಕ್ಷಣ ನೀಡದೇ ಅವರಿಗೆ ಗಾರೆ ಕೆಲದ ತರಬೇತಿ ನೀಡಿದಂತಹ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.ಈ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ, ಹಾಗೂ ನಾಗರೀಕರಲ್ಲಿ ಕೆಲವರಲ್ಲಿ ಮಾತ್ರ ಪರವಾದ ಅಭಿಪ್ರಾಯವಿದೆ. ಬಹುತೇಕರಲ್ಲಿ ಖಂಡನೀಯ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ಶಿಸ್ಥು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು