10:43 AM Wednesday23 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು ಬಾಹ್ಯ ಗೂಂಡಾವೇ? ಅಲ್ಲ, ಸ್ವತಃ ಕಾಲೇಜಿನ ಡೀನೇ?: ಇದು ಯಾವ ಸಂಸ್ಥೆಯಲ್ಲಿ ನಡೆದದ್ದು? ಪೊಲೀಸರೇ ಉತ್ತರಿಸಿ

16/06/2023, 22:28

ಮಂಗಳೂರು(reporterkarnataka.com):
ಕಾಲೇಜೊಂದರ ವಿದ್ಯಾರ್ಥಿಯ ಮೇಲೆ ತರಗತಿಯಲ್ಲೇ ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಸಿಸಿ ಟಿವಿ ಫೂಟೇಜ್ ಇದೀಗ ವೈರಲ್ ಆಗುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾವೇ? ಅಲ್ಲ ಅದೇ ಕಾಲೇಜಿನ ಉಪನ್ಯಾಸಕ/ಸಿಬ್ಬಂದಿ ವರ್ಗದವರೇ? ಹಾಗಾದರೆ ಇದು ಯಾವ ಕಾಲೇಜಿನಲ್ಲಿ ನಡೆದದ್ದು?

ಪೊಲೀಸ್ ಇಲಾಖೆ ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ತಕ್ಷಣ ತನಿಖೆ ನಡೆಸುವ ಅಗತ್ಯವಿದೆ.
ಇದು ಮೂಡುಬಿದರೆ ಪರಿಸರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾ ಅಲ್ಲ, ಬದಲಿಗೆ ಕಾಲೇಜಿನ ಡೀನ್ ಎಂಬ ಮಾಹಿತಿಯೂ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ. ಆದರೆ ಅಧಿಕೃತ ಸ್ಪಷ್ಟನೆ ಎಲ್ಲಿಂದಲೂ ಹೊರಬಂದಿಲ್ಲ.
ವಿದ್ಯಾರ್ಥಿ ಚಪ್ಪಲಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನ ಡೀನ್ ವಿದ್ಯಾರ್ಥಿಯ ಕಾಲೆಳೆದು ಆತನನ್ನು ನೆಲಕ್ಕೆ ಕೆಡಹಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 18ರಿಂದ 20 ವರ್ಷದೊಳಗಿನ ಕೃಶ ಕಾಯದ ವಿದ್ಯಾರ್ಥಿಯ ಕಾಲನ್ನು ಅಮಾನುಷವಾಗಿ ಆ ಗಟ್ಟಿ ಶರೀರದ ವ್ಯಕ್ತಿ
ಎಳೆದು ಹಾಕಿ ನೆಲಕ್ಕೆ ಕೆಡಹಿ ಹಲ್ಲೆ ನಡೆಸಿರುವುದು ಸಿಸಿ ಕ್ಯಾಮೆರಾ ತುಣುಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆ ನಡೆದಾಗ ತರಗತಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿರುವುದು ಕಂಡು ಬರುತ್ತದೆ. ಆದರೆ ಅವರು ಭಯದಿಂದ ಯಾವುದೇ ವಿರೋಧ ವ್ಯಕ್ತಪಡಿಸದೆ ಮೂಕ ಸಾಕ್ಷಿಯಾಗಿರುವುದು ಕಂಡು ಬರುತ್ತದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮೂಳೆ ಮುರಿತಕ್ಕೊಳಗಾಗಿದ್ದಾನೆ ಎನ್ನಲಾಗಿದೆ.
ಪ್ರಸಕ್ತ ಶಿಕ್ಷಣ ನೀತಿ ಪ್ರಕಾರ ಎಲ್ ಕೆಜಿಯಿಂದ ಆರಂಭಗೊಂಡು ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೆ ಹೊಡೆಯುವಂತಿಲ್ಲ. ಅಪ್ಪ- ಅಮ್ಮ ಕೂಡ ಹೊಡೆಯುವಂತಿಲ್ಲ. ಕಾನೂನು ಈ ರೀತಿ ಇರುವಾಗ ಹರೆಯಕ್ಕೆ ಕಾಲಿಟ್ಟ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲು ಡೀನ್ ಎನ್ನಲಾದ ಈ ವ್ಯಕ್ತಿಗೆ ಹಕ್ಕು ಕೊಟ್ಟವರು ಯಾರು? ಈ ಹಿನ್ನೆಲೆಯಲ್ಲಿ ಮೂಡುಬಿದ್ರೆ ಸುತ್ತಮುತ್ತ ನಡೆದ ಘಟನೆ ಇದಾದರೆ ಮೂಡುಬಿದ್ರೆ ಪೊಲೀಸರು ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ಇದು ಯಾವ ಕಾಲೇಜಿನಲ್ಲಿ ಆದ ಘಟನೆ ಎನ್ನುವುದನ್ನು ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು