12:21 AM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು ಬಾಹ್ಯ ಗೂಂಡಾವೇ? ಅಲ್ಲ, ಸ್ವತಃ ಕಾಲೇಜಿನ ಡೀನೇ?: ಇದು ಯಾವ ಸಂಸ್ಥೆಯಲ್ಲಿ ನಡೆದದ್ದು? ಪೊಲೀಸರೇ ಉತ್ತರಿಸಿ

16/06/2023, 22:28

ಮಂಗಳೂರು(reporterkarnataka.com):
ಕಾಲೇಜೊಂದರ ವಿದ್ಯಾರ್ಥಿಯ ಮೇಲೆ ತರಗತಿಯಲ್ಲೇ ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಸಿಸಿ ಟಿವಿ ಫೂಟೇಜ್ ಇದೀಗ ವೈರಲ್ ಆಗುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾವೇ? ಅಲ್ಲ ಅದೇ ಕಾಲೇಜಿನ ಉಪನ್ಯಾಸಕ/ಸಿಬ್ಬಂದಿ ವರ್ಗದವರೇ? ಹಾಗಾದರೆ ಇದು ಯಾವ ಕಾಲೇಜಿನಲ್ಲಿ ನಡೆದದ್ದು?

ಪೊಲೀಸ್ ಇಲಾಖೆ ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ತಕ್ಷಣ ತನಿಖೆ ನಡೆಸುವ ಅಗತ್ಯವಿದೆ.
ಇದು ಮೂಡುಬಿದರೆ ಪರಿಸರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾ ಅಲ್ಲ, ಬದಲಿಗೆ ಕಾಲೇಜಿನ ಡೀನ್ ಎಂಬ ಮಾಹಿತಿಯೂ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ. ಆದರೆ ಅಧಿಕೃತ ಸ್ಪಷ್ಟನೆ ಎಲ್ಲಿಂದಲೂ ಹೊರಬಂದಿಲ್ಲ.
ವಿದ್ಯಾರ್ಥಿ ಚಪ್ಪಲಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನ ಡೀನ್ ವಿದ್ಯಾರ್ಥಿಯ ಕಾಲೆಳೆದು ಆತನನ್ನು ನೆಲಕ್ಕೆ ಕೆಡಹಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 18ರಿಂದ 20 ವರ್ಷದೊಳಗಿನ ಕೃಶ ಕಾಯದ ವಿದ್ಯಾರ್ಥಿಯ ಕಾಲನ್ನು ಅಮಾನುಷವಾಗಿ ಆ ಗಟ್ಟಿ ಶರೀರದ ವ್ಯಕ್ತಿ
ಎಳೆದು ಹಾಕಿ ನೆಲಕ್ಕೆ ಕೆಡಹಿ ಹಲ್ಲೆ ನಡೆಸಿರುವುದು ಸಿಸಿ ಕ್ಯಾಮೆರಾ ತುಣುಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆ ನಡೆದಾಗ ತರಗತಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿರುವುದು ಕಂಡು ಬರುತ್ತದೆ. ಆದರೆ ಅವರು ಭಯದಿಂದ ಯಾವುದೇ ವಿರೋಧ ವ್ಯಕ್ತಪಡಿಸದೆ ಮೂಕ ಸಾಕ್ಷಿಯಾಗಿರುವುದು ಕಂಡು ಬರುತ್ತದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮೂಳೆ ಮುರಿತಕ್ಕೊಳಗಾಗಿದ್ದಾನೆ ಎನ್ನಲಾಗಿದೆ.
ಪ್ರಸಕ್ತ ಶಿಕ್ಷಣ ನೀತಿ ಪ್ರಕಾರ ಎಲ್ ಕೆಜಿಯಿಂದ ಆರಂಭಗೊಂಡು ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೆ ಹೊಡೆಯುವಂತಿಲ್ಲ. ಅಪ್ಪ- ಅಮ್ಮ ಕೂಡ ಹೊಡೆಯುವಂತಿಲ್ಲ. ಕಾನೂನು ಈ ರೀತಿ ಇರುವಾಗ ಹರೆಯಕ್ಕೆ ಕಾಲಿಟ್ಟ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲು ಡೀನ್ ಎನ್ನಲಾದ ಈ ವ್ಯಕ್ತಿಗೆ ಹಕ್ಕು ಕೊಟ್ಟವರು ಯಾರು? ಈ ಹಿನ್ನೆಲೆಯಲ್ಲಿ ಮೂಡುಬಿದ್ರೆ ಸುತ್ತಮುತ್ತ ನಡೆದ ಘಟನೆ ಇದಾದರೆ ಮೂಡುಬಿದ್ರೆ ಪೊಲೀಸರು ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ಇದು ಯಾವ ಕಾಲೇಜಿನಲ್ಲಿ ಆದ ಘಟನೆ ಎನ್ನುವುದನ್ನು ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು