8:31 AM Thursday2 - October 2025
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ ಕಲ್ಯಾಣದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರಕಾರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ… ಹಾರಂಗಿ ಜಲಾಶಯ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಪ್ರವಾಸಿ ಬಸ್ ಅಪಘಾತ: ಹಲವು ವಿದ್ಯಾರ್ಥಿಗಳಿಗೆ… ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ: ತನಿಖಾ ವರದಿಗೆ ಬಿ ರಿಪೋರ್ಟ್ ಕಾಂಗ್ರೆಸ್‌ ಸರ್ಕಾರ 80 ಪರ್ಸೆಂಟ್‌ ಕಮಿಶನ್‌ ಪಡೆಯುತ್ತಿದೆ, ಸಿಎಂ ರಾಜೀನಾಮೆ ನೀಡಲಿ: ಪ್ರತಿಪಕ್ಷ… ಮಡಿಕೇರಿ ಸಾರಿಗೆ ಬಸ್‌ ಡಿಪೋ ಎದುರು ನಿರ್ಮಿಸಲಾದ ಅನಧಿಕೃತ ಶೆಡ್‌ ತೆರವಿಗೆ ನಗರಸಭೆ… ಶಿಕ್ಷಣ ವ್ಯಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲಿದೆ: ಸೈಂಟ್ ಜೋಸೆಫ್ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರು ಬೆಂಗಳೂರು ನಗರ ರಸ್ತೆಗಳ ಪರಿಶೀಲನೆಗೆ ಮುಖ್ಯಮಂತ್ರಿಗಳ ಸಿಟಿರೌಂಡ್ಸ್

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಟೂರಿಸಂಗೆ ವಿಫುಲ ಅವಕಾಶ: ವಿವಂತಾ ಹೋಟೆಲ್ ಜಿಎಂ ಸಿಜು ನಂಬಿಯಾರ್

29/09/2025, 14:43

ಚಿತ್ರ/ ವರದಿ: ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ವಿಶ್ವ ವಿದ್ಯಾ ನಿಲಯದ ಎಂಬಿ ಎ ವಿಭಾಗ ಟೂರಿಸಂ ಆ್ಯಂಡ್ ಬ್ಯುಸಿ ನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಶನಿವಾರ ಮಂಗಳೂರು ವಿವಿಯ ಎಂಬಿಎ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ವಿವಂತಾ ಹೋಟೆಲ್ ಜನರಲ್ ಮ್ಯಾನೇಜರ್ ಸಿಜು ನಂಬಿಯಾರ್ ಉದ್ಘಾಟಿಸಿದರು.



ಅವರು ಮಾತನಾಡಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರವಹಿಸುತ್ತದೆ. ವಿಶ್ವ ಎಲ್ಲಾ ದೇಶವು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ. ಮಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣವಿದೆ. ಇಲ್ಲಿನ ಬೀಚ್ ದೇವಾಲಯಗಳು ವಿವಿಧ ದೇಶದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿದ್ಯಾರ್ಥಿಗಳು ಸರಿಯಾಗಿ ಅವಕಾಶಗಳನ್ನು ಬಳಸಿಕೊಂಡರೆ. ಒಳ್ಳೆಯ ಭವಿಷ್ಯವಿದೆ. ಕರೋನ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮಂಗಳೂರಿಗೆ ಐತಿಹಾಸಿಕ ಪರಂಪರೆ ಇದೆ. ಟೂರಿಸಂನಲ್ಲಿ ಅನೇಕ ವಿಭಾಗಳಿದ್ದು ನಿಮ್ಮ ನೆಚ್ಚಿನ ವಿಭಾಗಗಳನ್ನು ಆಯ್ಕೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಅವರು ಹೇಳಿದರು.


ಇನ್ನೊರ್ವ ಅತಿಥಿ ರಂಗ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ಮನುಷ್ಯ ಜೀವನವೇ ಪ್ರವಾಸ, ಜೀವನದುದ್ದಕ್ಕೂ ಪ್ರವಾಸ ಮಾಡುತ್ತಾನೆ. ಜೀವನದಲ್ಲಿ ವಿದ್ಯೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ನಾನೇದರು ಇವತ್ತು ಈ ಹಂತದಲ್ಲಿ ಇದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಶಾಲಾ ಶಿಕ್ಷಕಿ, ನನ್ನ ಎರಡೇ ತಾಯಿ ಸ್ಟೇಲ್ಲ ಟೀಚರ್. ಎಂದು ವಿದ್ಯಾರ್ಥಿ ಜೀವನ ವನ್ನು ಮೆಲುಕು ಹಾಕಿಕೊಂಡರು. ನಾವು ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಮಕ್ಕಳು ವಿದ್ಯೆ ಕಲಿತು, ಯಾವುದೇ ಕ್ಷೇತ್ರ ಸಾಧನೆ ಮಾಡಿದರೂ ತಂದೆ ತಾಯಿಯ ಹೆಸರು ಹೇಳದಿದ್ದರೂ ವಿದ್ಯೆ ಕಲಿತ ಗುರುಗಳನ್ನು ಹಾಗೂ ವಿದ್ಯೆ ಕೊಟ್ಟ ಸಂಸ್ಥೆಯನ್ನು ನೆನಪಿಸಿ ಕೊಂಡರೆ ಪೋಷರಿಗೆ ಅದೇ ಖುಷಿ ಎಂದರು.
ಮಂಗಳೂರು ವಿವಿಯಲ್ಲಿ ನನ್ನ ಮಕ್ಕಳು ಕಲಿಯುತ್ತಿದ್ದಾರೆ ಎಂಬ ಹೆಮ್ಮೆ ಇದೆ. ಮಂಗಳೂರು ವಿವಿ ಗೆ ದೇಶ ವಿದೇಶಗಳಲ್ಲೂ ಅದರದ್ದೇ ಆದ ಹೆಸರಿದೆ. ಹಾಗಾಗಿ ಇಲ್ಲಿ ವಿದ್ಯಾರ್ಥಿಗಳಗಿರುವ ನೀವು ಪುಣ್ಯವಂತರು. ಸಂಸ್ಥೆಯ ಹೆಸರು ಉಳಿಸಿ ಬೆಳಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆಯನ್ನು ಮಂಗಳೂರು ವಿವಿ ಪ್ರಾದ್ಯಾಪಕಿ ಪ್ರೊ. ಪರಿಣಿತಾ, ವಿಭಾಗದ ಚೇರ್ ಮ್ಯಾನ್ ಪ್ರೊ. ಶೇಖರ್ ನಾಯ್ಕ್ ಸ್ವಾಗತಿಸಿದರು.


ಉಪನ್ಯಾಸಕರುಗಳಾದ ಪ್ರಥ್ವಿ, ದೀಕ್ಷಾ, ಬಿಲ್ನ. ಕೆ ವಿನ್ ಸೆಂಟ್, ರಂಜಿತಾ ಎನ್, ಅತಿಥಿಗಳನ್ನು ಪರಿಚಯಿಸಿದರು.


ವಿದ್ಯಾರ್ಥಿ ನಾಯಕ ವರದಿ ವಾಚಿಸಿದರು. ಪ್ರಾಧ್ಯಾಪಕ ಡಾ. ಜೋಸೆಫ್ ಪಿ.ಡಿ. ವಂದಿಸಿ, ನಿರೂಪಿಸಿದರು. ಉಪನ್ಯಾಸಕ ಶಿವಣ್ಣ ಪಿ.ಬಿ. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ಇತ್ತೀಚಿನ ಸುದ್ದಿ

ಜಾಹೀರಾತು