ಇತ್ತೀಚಿನ ಸುದ್ದಿ
ಮಂಗಳೂರು ಸಿಟಿಲೈಟ್ ಕಟ್ಟಡದಲ್ಲಿ ‘ನೀರೆ’ ಸ್ಟಿಚಿಂಗ್ ಸ್ಟುಡಿಯೋ ಆರಂಭ: ಸಾಹಿತಿ ಭುವನೇಶ್ವರಿ ಹೆಗಡೆ ಚಾಲನೆ
25/02/2026, 19:45
ಮಂಗಳೂರು(reporterkarnataka.com): ಸ್ವ ಉದ್ಯೋಗ ಇಂದಿನ ಯುವ ಜನತೆಯ ಅಗತ್ಯ ವಾಗಿದ್ದು ಸ್ವಾವಲಂಬನೆಯ ಜೊತೆಯಲ್ಲಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯುವ ಉತ್ಸಾಹಿಗಳಿಗೆ ಪ್ರೋತ್ಸಾಹದ ವಾತಾವರಣ ನಿರ್ಮಿಸಿ ಸ್ಥಳೀಯ ಪ್ರತಿಭೆಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನಗಳು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದರು.

ಅವರು ನಗರದ ಮಿಲಾಗ್ರಿಸ್ ನ ಸಿಟಿಲೈಟ್ ಬಿಲ್ಡಿಂಗ್ ನಲ್ಲಿರುವ ನೂತನ ಸ್ಟಿಚಿಂಗ್ ಸ್ಟುಡಿಯೋ ‘ನೀರೆ’ ಯನ್ನು ಉದ್ಘಾಟಿಸಿ ಮಾತನಾಡಿದರು. ನೀರೆ ಸಂಸ್ಥೆಯ ಸ್ಥಾಪಕ ಪ್ರವರ್ತಕಿ ರೇಖಾ ಶಂಕರ್ ಅವರು ಅತಿಥಿಗಳನ್ನು ಸ್ವಾಗತಿಸಿ ಹೊಸ ಸಂಸ್ಥೆಯ ಪರಿಚಯ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಖಾ ಅವರ ತಂದೆ ಶಂಕರ್ ಹಾಗೂ ತಾಯಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಗಿರೀಶ್ ಅಡಿಗ ಸಹೋದರರಿಂದ ಪೂಜಾ ಕೈಂಕರ್ಯಗಳು ನಡೆದವು.












