12:27 AM Thursday19 - September 2024
ಬ್ರೇಕಿಂಗ್ ನ್ಯೂಸ್
ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ

ಇತ್ತೀಚಿನ ಸುದ್ದಿ

ತಲೆಖಾನ: ಗಂಡುಗಲಿ ಕುಮಾರರಾಮ ಜಯಂತಿ ಆಚರಣೆ: ಸಮಾಧಿ ಸ್ಥಳದಲ್ಲಿ ಭಾವಪೂರ್ಣ ನುಡಿನಮನ

25/08/2021, 09:43

ವಿರುಪಾಕ್ಷ ಸ್ವಾಮಿ ಸಾಲುಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮುಸ್ಕಿ ತಾಲೂಕಿನ ತಲೆಕಾನ್ ಗ್ರಾಮದಲ್ಲಿ ಸುಲ್ತಾನರಿಗೆಸಿಂಹಸ್ವಪ್ನವಾಗಿ 64 ಯುದ್ಧ ತಂತ್ರ ನಿಪುಣನಾಗಿದ್ದ ಗಂಡುಗಲಿ ಕುಮಾರರಾಮ ಅವರ ಜಯಂತಿ ಆಚರಿಸಲಾಯಿತು.

ದಕ್ಷಿಣ ಭಾರತದಲ್ಲಿ ಶೌರ್ಯ ಪರಾಕ್ರಮ ಮೆರೆದ, ಕನ್ನಡ ನಾಡಿನ ನೆಲ- ಜಲ-  ಭಾಷೆ- ಸಂಸ್ಕೃತಿ ಉಳಿಸಲು ಹೋರಾಡಿದ ವೈರಿಗಳಿಗೆ ಸಿಂಹಸ್ವಪ್ನ ನಾದ ಗಂಡುಗಲಿ ಕುಮಾರರಾಮ ಜಯಂತಿಯನ್ನು ಪೂಜ್ಯ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ತಲೆಖಾನ್ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಸ್ಕಿಹಾಳ ವಾಲ್ಮೀಕಿ ಮಠದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಗ್ರಾಮದ ಸಮಾಧಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ,

 ವಾಲ್ಮೀಕಿ ಕುಲ ತಿಲಕ ಕುಮಾರರಾಮ ಪರನಾರಿ ಸಹೋದರತ್ವ ಭಾವನೆಯ ಆದರ್ಶಗಳನ್ನು ಸಂಸ್ಕೃತಿ, ಆಚಾರ ವಿಚಾರಗಳನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕು. ಆತನ ಪರಾಕ್ರಮ, ಜನಪರ ಆಡಳಿತ ವೈಖರಿ, ಯುದ್ಧ ನೀತಿ, ಮಾನವೀಯ ಮೌಲ್ಯಗಳನ್ನು ಹೊಂದಿದ್ದನು. ಇಂತಹ ಮಹಾನ್ ವೀರನ ದೇಶ ಭಕ್ತಿ ನಾಡಿನ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ್ದಾರೆ. ವಾಲ್ಮೀಕಿ ಸಮಾಜದ ಅದೆಷ್ಟೋ ರಾಜರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ತ್ಯಾಗ ಮಾಡಿದ ಸಮಾಜಕ್ಕೆ ಇಂದಿನ ಸರ್ಕಾರ ಸಮಾಜದ ಎಲ್ಲ ರೀತಿಯ ಸಹಕಾರ ಪಡೆದು ಮೀಸಲಾತಿಯಲ್ಲಿ ಮೀನಮೇಷ ಮಾಡುತ್ತಿರುವದು ವಿಷಾದನೀಯ ಸಂಗತಿಯಾಗಿದೆ. ಇನ್ನಾದರೂ ಈ ಸರ್ಕಾರ ಧೋರಣೆಯಿಂದ ಮುಕ್ತವಾಗುತ್ತಾ ಅಥವಾ ಮುಂದುವರಿಯುತ್ತಾ ಕಾದು ನೋಡಬೇಕಾಗಿದೆ ಎಂದು ಹೇಳಿದರು.

ನಂತರದಲ್ಲಿ ವಾಲ್ಮೀಕಿ ಸಮಾನ ಮನಸ್ಕರ ಸಂಘಟನೆ ಮುಖಂಡರಾದ ಅಶೋಕ ದಿದ್ದಿಗಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೊಲ್ಲ ಕುದುರೆ ಸವಾರಿ ಕುಮಾರರಾಮ ಜೀವನವ ಹಿನ್ನೆಲೆ, ರಾಜನೀತಿ ಬಗ್ಗೆ ಮಾತನಾಡಿದರು.

ಈ ಸಂದರ್ಭ ಶೇಖರಗೌಡ ಕಾಟಗಲ್ಲ, ಬಸವರಾಜ ತುಕ್ಕಲದಿನ್ನಿ, ಸೇತುರಾಮ ನಾಯಕ ಗೌಡೂರು,  ಕನಕಪ್ಪ ತಲೆಖಾನ, ರಮೇಶ ತಲೆಖಾನ,ಸೋಮಣ್ಣ ಲಿಂಗಸುಗೂರು, ಸೋಮಶೇಖರ ಸಿಂಧನೂರು, ಗ್ವಾಲಪ್ಪ ಉಸ್ಕಿಹಾಳ, ವೆಂಕಟೇಶ, ಅಮರೇಶ,ಜಕ್ಕಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು