ಇತ್ತೀಚಿನ ಸುದ್ದಿ
ಸುಬ್ರಹ್ಮಣ್ಯ: ಜಲಸ್ಫೋಟದಿಂದ ಹಾನಿಗೀಡಾದ ಪ್ರದೇಶದಲ್ಲಿ ಎನ್ನೆಸ್ಸೆಸ್ ಸೇವಾ ಕಾರ್ಯ
03/08/2022, 15:29
ಸುಬ್ರಹ್ಮಣ್ಯ(reporterkarnataka.com):ಕುಕ್ಕೆ ಸುಬ್ರಮಣ್ಯದಲ್ಲಿ ಜಲಸ್ಫೋಟ ಹಾಗೂ ಗುಡ್ಡ ಕುಸಿತದಿಂದ ಹಾನಿಗೀಡಾದ ಪ್ರದೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕುಕ್ಕೆ ಸುಬ್ರಮಣ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಸೇವಾ ಕಾರ್ಯ ನಡೆಸಿದರು. ಸುಮಾರು 30 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.



ಹಾನಿಗೊಳಗಾದ ಕೊಲ್ಲಮೊಗರು, ಬಾಲುಗೋಡು ಗುರ್ತಿಲ, ಹರಿಹರ ಪ್ರದೇಶಗಳ ಮನೆಗಳ ತಡೆಗೋಡೆಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.





ಜಲಸ್ಫೋಟ ಹಾಗೂ ಗುಡ್ಡ ಕುಸಿತದಿಂದ ಮನೆಯೊಳಗೆ ಸೇರಿದ ಮಣ್ಣು, ಕಲ್ಲು,ತ್ಯಾಜ್ಯಗಳನ್ನು ಚರಂಡಿ ಸ್ವಚ್ಛತೆಯ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಿದ್ದಾರೆ. ಎಂದು ಕುಕ್ಕೆ ಸುಬ್ರಮಣ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿ ಆರತಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಸೇವೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಈ ಬಗ್ಗೆ ರಿಪೋಟರ್ ಕರ್ನಾಟಕಕ್ಕೆ ಪ್ರತಿಕ್ರಿಸಿಸಿದ,
ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ.
ಈ ರೀತಿ ಪ್ರಕೃತಿ ವಿಕೋಪ ನಡೆಯಬಾರದು.ವಿಕೋಪಕ್ಕೆ ತುರ್ತಾದ ಜನರ ಪರಿಸ್ಥಿತಿ ಶೋಚನೀಯ. ಮಂಗಳೂರು ವಿಶ್ವ ವಿದ್ಯಾನಿಲಯದ ಕುಕ್ಕೆ ಸುಬ್ರಮಣ್ಯ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಸ್ವಯಂ ಸೇವಕರಿಗೆ,ಹಾಗೂ ಯೋಜನಾಧಿಕಾರಿ ಆರತಿಯ ಸೇವಾ ಕಾರ್ಯ ಮೆಚ್ಚುವಂತಹದು..














