ಇತ್ತೀಚಿನ ಸುದ್ದಿ
ಸಂತ ಆನ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ಸಂತ ಅನ್ನಾ ಜನ್ಮದಿನಾಚರಣೆ: ಕಿರುನಾಟಕ, ನೃತ್ಯ ಪ್ರದರ್ಶನ
24/07/2024, 23:08

ಮಂಗಳೂರು(reporterkarnataka.com): ನಗರದ ಸಂತ ಆನ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ಸಂತ ಅನ್ನಾ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಥಮವಾಗಿ ಫಾ. ರಿಚರ್ಡ್ ಕಪುಚಿನ್ ಅವರಿಂದ ಬಲಿಪೂಜೆ ಅರ್ಪಿಸಲಾಯಿತು. ನಂತರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿ. ನಿರ್ಮಲಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂತ ಅನ್ನಾ ಅವರ ಬಗ್ಗೆ ಮಾತನಾಡಿ ಅವರ 5 ಗುಣಗಳಾದ ಮೌನತೆ, ಪ್ರಾರ್ಥನೆ, ದಾನ ಧರ್ಮ, ಸರಳತೆ, ಪ್ರೀತಿ, ಗೌರವ ನಮ್ಮ ಜೀವನದಲ್ಲಿ ಅಳವಡಿಸಬೇಕೆಂದರು.
ಸಂತ ಅನ್ನಾ ಅವರ ಈ 5 ಗುಣಗಳನ್ನು ಅಳವಡಿಸಿ ಕ್ವಿಜನ್ನು ಏರ್ಪಡಿಸಲಾಯಿತು. ಕ್ವಿಜಿನಲ್ಲಿ ವಿಜೇತರನ್ನು ಸಿ. ನಿರ್ಮಲಾ ಅವರು ಪ್ರಶಂಸಿದರು. ಕಾಲೇಜಿನ ಪ್ರಾಂಶುಪಾಲೆ ಸಿ. ವಿನೂತ ಅವರು ಸಂತ ಅನ್ನಾ ಅವರ ಬಗ್ಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾರ್ಮೆಲ್ ಮಾಜಿ ಶಿಕ್ಷಕಿ ಮಾರ್ಗರೇಟ್ ಮೊಂತೇರೊ, ಶಿಕ್ಷಕಿಯಾದ ಅಸುಂತಾ ಡಿಸೋಜ, ಶೇರಿನ್, ಪ್ರತಿಭಾ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂತ ಅನ್ನಾ ಅವರ ಜೀವನದ ಬಗ್ಗೆ ಕಿರು ನಾಟಕ, ನೃತ್ಯ ಹಾಗೂ ಇತರ ಕಾರ್ಯಕ್ರಮಗಳು ನಡೆಯಿತು. ಭಾರತಿ ಕಾರ್ಯಕ್ರಮ ನಿರ್ವಹಿಸಿದರು. ಸಾರಾ ಅವರು ವಂದಿಸಿದರು.