12:26 PM Friday14 - November 2025
ಬ್ರೇಕಿಂಗ್ ನ್ಯೂಸ್
ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ…

ಇತ್ತೀಚಿನ ಸುದ್ದಿ

ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 60ನೇ ಜನ್ಮವರ್ಧಂತಿ: ಸುವರ್ಣಾಭಿಷೇಕ ಸಹಿತ ಗುರುವಂದನೆ; ನೂರಾರು ಭಕ್ತರು ಭಾಗಿ

13/03/2023, 17:38

ಉಡುಪಿ(reporterkarnataka.com):
ತನಗಾಗಿ ಬದುಕದೇ ಪರರ ಹಿತಕ್ಕಾಗಿ ಶ್ರಮಿಸುವುದರಲ್ಲಿ ಜನ್ಮ ಸಾರ್ಥಕ್ಯವಾಗುತ್ತದೆ.

ಹರಿಯುವ ನೀರಿನ ಮೇಲೆ ಒಣ ಎಲೆಯೂ ತೇಲಿ ಬರುತ್ತದೆ. ದೋಣಿಯೂ ತೇಲಿ ಸಾಗುತ್ತದೆ .ಆದರೆ ತರಗೆಲೆಯ ಮೇಲೆ ಹಕ್ಕಿ ಕುಳಿತರೂ ಮುಳುಗಿ ಹೋಗುತ್ತದೆ. ‌ಆದರೆ ದೋಣಿ ತನ್ನ ಮೇಲೆ ಹತ್ತಾರು ಜನರನ್ನು ಹೊತ್ತು ದಡ ಸೇರಿಸುತ್ತದೆ .ಹೀಗೆ ತನ್ನ ಅಸ್ತಿತ್ವಕ್ಕೆ ಸಾರ್ಥಕ್ಯ ತರುತ್ತದೆ. ನಮ್ಮೆಲ್ಲರ ಜೀವನವೂ ದೋಣಿಯಂತಾದಾಗ ಜನ್ಮಕ್ಕೊಂದು ಸಾರ್ಥಕ್ಯ ಬರುತ್ತದೆ. ಅಂಥಹ ದೊಡ್ಡ ಮಾನವ ಜನ್ಮ ದೊಡ್ಡ ಒಳಿತಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು . ಸೂರ್ಯಾಸ್ತ ನೋಡಿ ಸಂಭ್ರಮಿಸುತ್ತೇವೆ . ಆದರೆ ಅದೇ ಸೂರ್ಯಾಸ್ತ ನಮ್ಮ ಜೀವನದ ಒಂದು ದಿನ ಕಳೆದು ಹೋಯಿತು . ಮಾಡಬೇಕಾದ ಕರ್ತವ್ಯ ಬೇಕಾದಷ್ಟಿದೆ ಎಂದು ಎಚ್ಚರಿಸುವುದನ್ನು ಮರೆಯಬಾರದು ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ತಮ್ಮ 60ನೇ ಜನ್ಮವರ್ಧಂತಿಯ ಪ್ರಯುಕ್ತ ಭಕ್ತಾಭಿಮಾನಿಗಳು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಸುವರ್ಣಾಭಿಷೇಕ ಪುಷ್ಪಾಭಿಷೇಕ ಸಹಿತ ಅಭಿವಂದನೆಯನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು ‌.


ಉಡುಪಿ ಸಮೀಪ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಕಾರ್ಯಕ್ರಮ‌ ನೆರವೇರಿತು. ವೇದಮೂರ್ತಿ ರಾಮಕೃಷ್ಣ ತಂತ್ರಿ ಮತ್ತು ವಿದ್ವಾನ್ ಲಕ್ಷ್ಮೀನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರಿಂದ ಶ್ರೀಗಳಿಗೆ ಶ್ರೇಯಸ್ಸನ್ನು ಪ್ರಾರ್ಥಿಸಿ ಧನ್ವಂತರಿ ಯಾಗ ವಿರಜಾ ಹೋಮಗಳು , ಶ್ರೀ ಸುವ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ ಪೂಜೆ ನಡೆದವು .ಶ್ರೀಗಳು ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಬಳಿಕ ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಪೂಜೆ ನಡೆಸಿ ಭಿಕ್ಷೆ ಸ್ವೀಕರಿಸಿದರು.ನಂತರ ನಡೆದ ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ವಿದ್ವಾನ್ ರಘೂತ್ತಮಾಚಾರ್ಯ ನಾಗಸಂಪಿಗೆ , ವಿದ್ವಾನ್ ವೇಂಕಟೇಶಾಚಾರ್ಯ ಕುಲಕರ್ಣಿ ಅಭಿನಂದನಾ ಮಾತುಗಳನ್ನಾಡಿದರು . ವಿದ್ವಾನ್ ಷಣ್ಮುಖ ಹೆಬ್ಬಾರ್ ಸ್ವಾಗತಿಸಿದರು . ಮುಚ್ಲುಕೋಡು ಸೀಮೆಯ ವಿಪ್ರಬಂಧುಗಳು ಶ್ರೀಗಳಿಗೆ ಸುವರ್ಣಾಭಿಷೇಕ ಪುಷ್ಪಾಭಿಷೇಕ. ಫಲ ಕಾಣಿಕೆ ಮಂಗಳಾರತಿ ಅರ್ಪಿಸಿದರು .ಅನೇಕ‌ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರೀಗಳಿಗೆ ಫಲಪುಷ್ಪ ಸಹಿತ ಅಭಿವಂದನೆ ಸಲ್ಲಿಸಿದರು .
ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆ ಧನ್ಯವಾದ ಸಹಿತ ಕಾರ್ಯಕ್ರಮ‌ ನಿರೂಪಿಸಿದರು . ದೇವಳದ ಅರ್ಚಕ ವೃಂದ ,ವ್ಯವಸ್ಥಾಪಕ ರಾಜಶೇಖರ್ , ಪೇಜಾವರ ಮಠದ ಸಿ‌ಇ‌ಒ ಸುಬ್ರಹ್ಮಣ್ಯ ಭಟ್ , ಇಂದು ಶೇಖರ ಹೆಗಡೆ ಶ್ರೀಗಳ ಆಪ್ತರಾದ ವಿಷ್ಣು‌ಮೂರ್ತಿ ಆಚಾರ್ಯ ,ಕೃಷ್ಣ ಭಟ್ , ಸುಬ್ರಹ್ಮಣ್ಯ ಆಚಾರ್ಯ , ಮೊದಲಾದವರು ಸಹಕರಿಸಿದರು. ಶಾಸಕ ಕೆ ರಘುಪತಿ ಭಟ್ , ಡಾ ವ್ಯಾಸರಾಜ ತಂತ್ರಿ ಡಾ ಚಂದ್ರ ಶೇಖರ್ , ಯಶ್ಪಾಲ್ ಸುವರ್ಣ , ಭುವನೇಂದ್ರ ಕಿದಿಯೂರು ಮುರಳಿ ಕಡೆಕಾರ್ ,ಪ್ರದೀಪ್ ಕಲ್ಕೂರ ,ಪ್ರೊ ಎಂ ಬಿ ಪುರಾಣಿಕ್ , ಉಮೇಶ ಶೆಟ್ಟಿ , ಜಗದೀಶ್ ಪೈ , ಹರಿದಾಸ ಭಟ್ ಮುಂಬಯಿ , ನಾಗರಾಜ ಪುರಾಣಿಕ್ ಶಾಮಲಾ ಕುಂದರ್ , ಶ್ರೀಶ ನಾಯಕ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು. ಚಿತ್ರನಟಿ ಬಿಜೆಪಿ ನಾಯಕಿ ಮಾಳವಿಕಾ ಆಗಮಿಸಿ ಶ್ರೀಗಳಿಗೆ ಗೌರವ ಸಲ್ಲಿಸಿದರು ‌.

ಇತ್ತೀಚಿನ ಸುದ್ದಿ

ಜಾಹೀರಾತು