3:44 AM Monday24 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ಶಿವಶಂಕರ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲಕರ ಸಭೆ

24/08/2024, 23:51

ಸಂತೋಷ್ ಬೆಳಗಾವಿ

info.reporterkarnataka@gmail.com

ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ. ಪ್ರತೀ ತಿಂಗಳು ಸಭೆ ಮಾಡುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಿ ಹೆಚ್ಚು ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸುವ ಸರಳ ಮಾರ್ಗವೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು.
ಅವರು ಹಳ್ಳೂರ 24 ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ ದರು.
ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಶಿಕ್ಷಣ ಜೀವನದ ತಳಪಾಯವಿದ್ದಂತೆ. ಉನ್ನತ ಮಟ್ಟದ ಶಿಕ್ಷಣ ಕಲಿತು ಮೇಧಾವಿಗಳಾಗಿರಿ ಮೊಬೈಲ್ ಟಿವಿ ಕಡೆ ಗಮನ ಕೊಡದೆ ಹೆಚ್ಚು ಅಭ್ಯಾಸದ ಗಮನ ಹರಿಸಿ ವಿದ್ಯಾವಂತರಾಗಿರೆಂದು ಹೇಳಿದರು. ಪ್ರಧಾನ ಗುರುಗಳಾದ ಆರ್. ಕೆ. ಮೆಲಗಡೆ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಶಿಕ್ಷಕರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ನಮ್ಮ ಗಮನಕ್ಕೆ ತಂದರೆ ಸರಿ ಪಡಿಸಿಕೊಳ್ಳುತ್ತೇವೆ. ಎಲ್ಲರೂ ಸೇರಿಕೊಂಡು ಶಾಲೆಗೆ ವಿದ್ಯಾರ್ಥಿಗಳ ಇನ್ನಷ್ಟು ಸಂಖ್ಯೆ ಹೆಚ್ಚಿಸಿ ಶಾಲೆಯ ಕೀರ್ತಿ ಬೆಳೆಸೋಣಾ ಎಂದು ಹೇಳಿದರು. ಬಸಲಿಂಗ ಬಾಗೋಡಿ ಮಾತನಾಡಿ ಮಕ್ಕಳಿಗೆ ದಿನಾಲು ಎಲ್ಲಾ ರೀತಿಯ ಪಾಠ ಕಲಿಸುವದರ ಜೊತೆಗೆ ಮರಳಿ ನೆನಪಿಸಿಕೊಂಡು ಮಕ್ಕಳ ತಲೆಯಲ್ಲಿ ಉಳಿಯುವ ಹಾಗೆ ಶಿಕ್ಷಣ ನೀಡಬೇಕು.ಪಾಲಕರ ಸಭೆಯು ಪ್ರತಿ ತಿಂಗಳು ಅರ್ಥ ಪೂರ್ಣವಾಗಿ ನಡೆಯಿಲಿ ಎಂದು ಹೇಳಿದರು. ಸಭೆಯಲ್ಲಿ ಮಕ್ಕಳನ್ನು ಎಬ್ಬಿಸಿ ಸರಳ ಪ್ರಶ್ನೆ ಕೇಳಿದಾಗ ಕೆಲವು ಪ್ರಶ್ನೆಗೆ ಮಾತ್ರ ಉತ್ತರವನ್ನು ನೀಡಿದರು. ಪಾಲಕರು ಮತ್ತು ಶಿಕ್ಷಕರ ಮದ್ಯೆ ಕೆಲವು ವಿಚಾರ ನಡೆದವು.
ಈ ಸಮಯದಲ್ಲಿ ಸಿದ್ದಪ್ಪ ಅಂಗಡಿ, ದುಂಡಪ್ಪ ಕೂಲಿಗೋಡ, ಲಕ್ಷ್ಮಣ ಗಲಗಲಿ, ಸಂಜು ಕೊರೆ, ಕೆಂಪವ್ವ ಅಂಗಡಿ, ಶಿಕ್ಷಕರಾದ ಬಿ. ಜೆ. ಪಾರ್ಥನಳ್ಳಿ,ರಾಮು ಹರಿಜನ, ಶೋಭಾ ಮುತಾರಿ, ಪಾಲಕರಾದ ನಾಗಪ್ಪ ಬಿಸನಾಳ, ಶಂಕರ ಮಾಲಗಾರ, ಪ್ರಕಾಶ ಲೋಕನ್ನವರ, ಪ್ರಕಾಶ ಬಾಗೋಡಿ ಸೇರಿದಂತೆ ಅನೇಕರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು