11:03 PM Tuesday1 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ಶಿರೂರು ಮಠಕ್ಕೆ ನೂತನ ಯತಿಗಳ ನೇಮಕ : ವಿಶ್ವ ಹಿಂದೂ ಪರಿಷತ್ ಸ್ವಾಗತ

19/05/2021, 10:56

ಮಂಗಳೂರು(reporterkarnataka news) :ಇತ್ತೀಚೆಗೆ ಉಡುಪಿ ಶಿರೂರು ಮಠಕ್ಕೆ ಉತ್ತರಾಕಾರಿಯಾಗಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರನ್ನು ನಿಯುಕ್ತಿಗೊಳಿಸಿರುವುದು ಸಮಾಜಕ್ಕೆ ಸಂತಸ ತಂದಿದ್ದು, ಉಡುಪಿ ಅಷ್ಟಮಠಗಳು ಉತ್ತರಾಕಾರಿಗಳ ಆಯ್ಕೆಯಲ್ಲಿ ಯೋಗ್ಯ ಮಾನದಂಡಗಳನ್ನು ರೂಪಿಸುವ ಮೂಲಕ ಮಾದರಿಯಾಗಿರುವುದು ಕೂಡಾ ಸ್ವಾಗತಾರ್ಹ ಎಂಬುದಾಗಿ ವಿಶ್ವಹಿಂದು ಪರಿಷತ್ತು ಅಭಿನಂದಿಸಿದೆ.

ಶಿರೂರು ಮಠದ ದ್ವಂದ್ವ ಮಠವಾದ ಶ್ರೀ ಸೋದೆ ವಾದಿರಾಜ ಮಠದ ಸ್ವಾಮಿಗಳಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಧಾರ್ಮಿಕ ಹಿನ್ನೆಲೆಯ ಅನಿರುದ್ಧ ಸರಳತ್ತಾಯರನ್ನು ಆಯ್ಕೆ ಮಾಡಿ ಯೋಗ್ಯ ರೀತಿಯಲ್ಲಿ ಶಾಸ್ತ್ರೋಕ್ತ  ಸನ್ಯಾಸದೀಕ್ಷೆಯ ಮೂಲಕ 

ಶ್ರೀ ವೇದವರ್ಧನ ಎಂಬ ಅಭಿನಾಮ ನೀಡಿ ಶಿರೂರು ಮಠದ ಯತಿಗಳನ್ನಾಗಿ ನೇಮಿಸಿರುವುದು ಸರ್ವರ ಪ್ರಶಂಸೆಗೆ ಕಾರಣವಾಗಿದೆ ಎಂಬುದಾಗಿ ವಿಶ್ವಹಿಂದು ಪರಿಷತ್ತಿನ ಪ್ರಾಂತ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ .

ಇತ್ತೀಚೆಗೆ ಅಷ್ಟಮಠಗಳಿಗೆ ಹೊಸ ಶಿಷ್ಯರನ್ನು ನಿಯುಕ್ತಿಗೊಳಿಸುವಾಗ ಯೋಗ್ಯ ಮಾನದಂಡಗಳನ್ನು ಅಳವಡಿಸಿ ಸತ್ಸಂಪ್ರದಾಯಕ್ಕೆ ಮುಂದಾಗಿರುವುದು ಹಿಂದು ಸಮಾಜಕ್ಕೆ ಹೆಮ್ಮೆ  ಮತ್ತು ಅಭಿಮಾನ ಮೂಡಿಸುವ ಸಂಗತಿಯಾಗಿದೆ.ಶ್ರೀಶಿರೂರು ಮಠದ ನವಯತಿಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರಿಗೆ ವಿಶ್ವಹಿಂದು ಪರಿಷತ್ತು ಶುಭಕೋರುತ್ತದೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಅವರಿಂದ ಹಿಂದು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಲಭಿಸುವಂತಾಗಲು ಶ್ರೀಕೃಷ್ಣನ ಅನುಗ್ರಹ ಇರಲೆಂದು ವಿಹಿಂಪ ಪ್ರಾರ್ಥಿಸುತ್ತದೆ ಎಂದು ಪ್ರೊ.ಪುರಾಣಿಕ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು