ಇತ್ತೀಚಿನ ಸುದ್ದಿ
ಶಿರ್ಲಾಲು: ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ನಡೆದ ಕೆಲವೇ ತಾಸಿನಲ್ಲಿ 2 ಹಸುಗಳ ರಕ್ಷಣೆ; ಭಜರಂಗ ದಳ ಕಾರ್ಯಾಚರಣೆ
19/09/2021, 22:24

ಕಾರ್ಕಳ(reporterkarnataka.com): ಶಿರ್ಲಾಲಿನಲ್ಲಿ ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯ ನಡೆದ ಕೆಲವೇ ತಾಸಿನಲ್ಲಿ ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಜಂಟಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ಕಾರು ಕೆರುವಾಶೆ ಕಡೆ ಹೋಗುತ್ತಿದ್ದು, ಕೆರುವಾಶೆಯ ರಸ್ತೆಯ ಬದಿಯಲ್ಲಿ ದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ, ಕಾರಿನಲ್ಲಿದ್ದ ಗೋಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು